The biography of Prophet Muhammad – Month 9

Admin March 12, 2023 No Comments

The biography of Prophet Muhammad – Month 9

Mahabba Campaign Part-241/365

ಹಾರಿಸರ ◌ؓ ತಾಯಿಯಲ್ಲಿ ಪ್ರವಾದಿಯವರು ﷺ, ಇದೇನು ಹೇಳುತ್ತಿದ್ದೀರಿ.? ಸ್ವರ್ಗ ಒಂದಲ್ಲ ಹಲವಾರು ಇದೆ, ಅವುಗಳಲ್ಲಿ ಉನ್ನತ ದರ್ಜೆಯಲ್ಲಿರುವುದು ಜನ್ನಾತುಲ್ ಫಿರ್’ದೌಸ್ ಎಂಬ ಸ್ವರ್ಗವಾಗಿದೆ, ಈಗ ಹಾರಿಸ್ ◌ؓ ಇರುವುದು ಆ ಜನ್ನಾತುಲ್ ಫಿರ್’ದೌಸ್’ನಲ್ಲಿ ಎಂದು ಹೇಳಿ ಸಮಾಧಾನ ಪಡಿಸಿದರು. ಅದನ್ನು ಕೇಳಿ ಹಾರಿಸರ ತಾಯಿ, ಸಂತೋಷದಿಂದ ಹಿಂತಿರುಗಿ ಹೋದರು.

ಸೀರತುಲ್ ಹಲಬಿಯಿಲ್ ಎಂಬ ಗ್ರಂಥದಲ್ಲಿ ಉಲ್ಲೇಖದ ಪ್ರಕಾರ, ಪ್ರವಾದಿಯವರು ﷺ ಒಂದು ಪಾತ್ರೆಯಲ್ಲಿ ನೀರು ತರಿಸಿ, ಅದರೊಳಗೆ ತಮ್ಮ ಕೈ ಹಾಕಿ ಅದರಿಂದ ಸ್ವಲ್ಪ ನೀರು ತೆಗೆದು ತಾನೂ ಕುಡಿದು, ಉಳಿದ ನೀರನ್ನು ಹಾರಿಸರ ◌ؓ ತಾಯಿಗೆ ಕೊಟ್ಟರು. ಅವರು ಅದರಿಂದ ಸ್ವಲ್ಪ ನೀರನ್ನು ಕುಡಿದು, ತನ್ನ ಮಗಳಿಗೆ ಕುಡಿಯಲು ಕೊಟ್ಟರು. ಅವರೂ ಕೂಡ ಸ್ವಲ್ಪ ನೀರನ್ನು ಕುಡಿದರು ನಂತರ, ಪ್ರವಾದಿಯವರ ﷺ ಅನುಮತಿ ಮೇರೆಗೆ ಅವರಿಬ್ಬರ ಬಟ್ಟೆಯ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಲಾಯಿತು. ಇದರಿಂದ ಬಹಳಷ್ಟು ಸಂತುಷ್ಟರಾದ ಹಾರಿಸರ ◌ؓ ತಾಯಿ, ಹಾಗೂ ಸಹೋದರಿಯು ಸಂತೋಷದಿಂದ ಹಿಂತಿರುಗಿ ಹೋದರು.

ರಣರಂಗದಲ್ಲಿ ಪ್ರವಾದಿಯವರ ﷺ ಅನುಚರರು ತೋರಿಸುತ್ತಿದ್ದ ಆವೇಶದ ಬಗ್ಗೆ ತಿಳಿಯೋಣ. ಅಫ್’ರಾಯಿನ ಮಗನಾದ ಔಫ್ ಬಿನ್ ಅಲ್ ಹಾರಿಸ್ ◌ؓ ಪ್ರವಾದಿಯವರ ﷺ ಬಳಿ ಬಂದು, ಸೇವಕ ಏನು ಮಾಡಿದರೆ ಅಲ್ಲಾಹನಿಗೆ ಅತೀ ಹೆಚ್ಚು ಸಂತೋಷವಾಗುತ್ತೆ.? ಎಂದು ಕೇಳಿದಾಗ, ಪ್ರವಾದಿಯವರು ﷺ ಕವಚವಿಲ್ಲದೆ ರಣರಂಗದಲ್ಲಿ ಹೊರಾಡುವಾಗ ಆಗಿರುತ್ತದೆ ಎಂದು ಹೇಳಿದರು.
ಅದನ್ನು ಕೇಳಿ, ಔಫ್ ◌ؓ ತಾನು ಧರಿಸಿದ್ದ ಕವಚವನ್ನು ಕಳಚಿ ರಣರಂಗಕ್ಕೆ ಇಳಿದು, ಭೀಕರವಾದ ಹೋರಾಟ ನಡೆಸಿ ಹುತಾತ್ಮರಾದರು. ರಣರಂಗವು ಬಹಳಷ್ಟು ತ್ಯಾಗಕ್ಕೆ ಸಾಕ್ಷಿಯಾಯಿತು, ಬಹಳಷ್ಟು ನಿಸ್ವಾರ್ಥ ಸಮಾರ್ಪಣೆಗೆ ಕಾರಣವಾಯಿತು, ಅಂತ್ಯವಿಲ್ಲದ ನಿಷ್ಕಲ್ಮಶ ವಿಶ್ವಾಸದ ಎದುರು ಗೆಲುವಿನ ಕಡೆಗೆ ಬರಲೇ ಬೇಕಾಯಿತು. ಸಣ್ಣ ವಯಸ್ಸಿನ ಯುವಕನಾಗಿದ್ದ ಅಲಿಯವರು ◌ؓ ಮಾತ್ರ, ಇಪ್ಪತ್ತೆರಡು ಯೋಧರನ್ನು ರಣರಂಗದಲ್ಲಿ ಸಾಯಿಸಿದ್ದರು.

ಧೈರ್ಯ, ಸಾಹಸದೊಂದಿಗೆ ಬದ್ರ್ ರಣರಂಗದಲ್ಲಿ ಬಹಳ ಉತ್ಸಾಹದಿಂದ ಹೋರಾಟ ಮಾಡಿದ್ದ ಮತ್ತೊಂದು ವ್ಯಕ್ತಿಯಾಗಿದ್ದರು ಪ್ರವಾದಿಯವರ ﷺ ಚಿಕ್ಕಪ್ಪ ಹಂಝ ◌ؓ. ಅಬ್ದುರಹ್ಮಾನ್ ಬಿನ್ ಔಫ್ ◌ؓ ಹೇಳುವುದು ಕಾಣಬಹುದು, ಯುದ್ಧ ಖೈದಿಯಾಗಿ ಶತ್ರುಗಳಿಂದ ಉಮಯ್ಯತ್ ಬಿನ್ ಖಲಫ್’ರನ್ನು ಬಂಧಿಸಿದಾಗ, ನಿಮ್ಮ ಗುಂಪಿನಲ್ಲಿ, ಎದೆಯ ಮೇಲೆ ಉಷ್ಟ್ರಪಕ್ಷಿಯ ಗರಿಗಳ ಗುರುತು ಇಟ್ಟುಕೊಂಡಿದ್ದ ವ್ಯಕ್ತಿ ಯಾರೆಂದು ಕೇಳಿದರು. ಅದು ಹಂಝ ಬಿನ್ ಅಬ್ದುಲ್’ಮುತ್ತಲಿಬ್ ಎಂದು ನಾವು ಹೇಳಿದಾಗ, ಆ ವ್ಯಕ್ತಿಯೇ ಆಗಿರುವರು ನಮ್ಮನ್ನು ಈ ಅವಸ್ಥೆಗೆ ತಂದು ನಿಲ್ಲಿಸಿದ್ದು ಎಂದು ಉಮಯ್ಯತ್ ಹೇಳಿದನು.

ಹಂಝರವರ ◌ؓ ಬಗ್ಗೆ ಅಲಿಯವರು ◌ؓ ಹೇಳುವುದು ಕಾಣಬಹುದು, ಬದ್ರ್ ದಿನದಂದು ಮಧ್ಯಾಹ್ನದ ನಂತರ ಸೈನಿಕರೊಂದಿಗೆ ಬಿರುಸಿನ ಹೋರಾಟ ನಡೆಯಲು ಆರಂಭಿಸಿತು, ಅಷ್ಟರಲ್ಲಿ ಸಅದ್ ಬಿನ್ ಖೈಸಮ ◌ؓ ಹಾಗೂ ಇನ್ನೊಬ್ಬ ಶತ್ರುಗಳ ಸೈನಿಕನೊಬ್ಬನ ನಡುವೆ ಯುದ್ಧ ಆರಂಭವಾಯಿತು, ಕೊನೆಗೆ ಆ ಯುದ್ಧದಲ್ಲಿ ಸಅದ್ ◌ؓ ಹುತಾತ್ಮರಾದರು. ಮುಖಕ್ಕೆ ಉಕ್ಕಿನ ಕವಚ ಧರಿಸಿದ್ದ ಕಾರಣ ಆ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ, ಕೊನೆಗೆ ಆ ವ್ಯಕ್ತಿಯು ನನಗೆ ದ್ವಂದ ಯುದ್ಧಕ್ಕೆ ಆಹ್ವಾನ ನೀಡಿ, ನನ್ನ ಬಳಿ ಬಂದು ನಿಂತನು. ಅವನು ನನಗಿಂತ ಅಧಿಕ ಎತ್ತರವಿದ್ದ ಕಾರಣ ಅವನೊಂದಿಗೆ ಯುದ್ಧ ಮಾಡಲು ಇಷ್ಟಪಡಲಿಲ್ಲ, ಆದರೆ ಅವನು ನನ್ನಿಂದ ಭಯ ಪಟ್ಟು ಓಡಿ ಹೋಗುತ್ತಿದ್ದೀಯ.? ಎಂದು ಕೇಳಿದಾಗ, ನಾನು ಅದಕ್ಕೆ ಓಡಿ ಹೋಗುತ್ತಿಲ್ಲ ಇನ್ನೊಂದು ಕಡೆಗೆ ಯುದ್ಧ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದೆನು.

ಅವನು ನನ್ನನ್ನು ಬಿಡದೆ, ನನ್ನ ಮುಂದೆ ಬಂದು ನಿಂತು ಖಡ್ಗದಿಂದ ದಾಳಿ ಮಾಡಿದನು. ನಾನು ಗುರಾಣಿಯಿಂದ ತಡೆದಾಗ ಅವನ ಖಡ್ಗ ಕೆಳಗೆ ಬಿದ್ದಿತು, ನಾನು ಅವನ ಭುಜಕ್ಕೆ ದಾಳಿ ಮಾಡಿದಾಗ, ಅವನು ಸ್ವಲ್ಪ ಅಲುಗಾಡಿನು. ಹಾಗಾಗಿ ಅವನ ಮುಖದ ಕವಚಕ್ಕೆ ನನ್ನ ಖಡ್ಗ ತಾಗಿ ಎರಡು ತುಂಡಾಯಿತು, ತಕ್ಷಣವೇ ಹಿಂದಿನಿಂದ ನಾನು ಅಬ್ದುಲ್ ಮುತ್ತಲಿಬಿನ ಮಗ ನನ್ನ ಖಡ್ಗವನ್ನು ಎದುರಿಸು ಎಂಬ ಶಬ್ದ ಕೇಳಿಸಿತು, ಅದನ್ನು ಕೇಳಿ ನಾನು ತಕ್ಷಣವೇ ನನ್ನ ತಲೆಯನ್ನು ತಗ್ಗಿಸಿ ಬಾಗಿ ನಿಂತೆನು. ಅವರು ಬೀಸಿದ ಆ ಖಡ್ಗ ನೇರವಾಗಿ ಆ ಶತ್ರುವಿನ ಕತ್ತನ್ನು ಸೀಳಿ ಕವಚದ ಸಮೇತವಾಗಿ ಅವನ ತಲೆಯು ಕೆಳಗೆ ಬಿದ್ದಿತು. ನಾನು ತಿರುಗಿ ನೋಡಿದಾಗ ಅದು ಚಿಕ್ಕಪ್ಪ ಹಂಝ ◌ؓ ಆಗಿದ್ದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-242/365

ಉಮಯ್ಯತ್ ಬಿನ್ ಖಲಫ್ ಕೇಳಿದ ಇನ್ನೊಬ್ಬ ವ್ಯಕ್ತಿ ಅಬೂದುಜಾನಃ ◌ؓ ಆಗಿದ್ದರು. ಸಮ್ಮಾಕ್ ಬಿನ್ ಖರ್’ಷ ಎಂದಾಗಿತ್ತು ಅವರ ಸಂಪೂರ್ಣ ಹೆಸರು. ಅಬ್ದುರಹ್ಮಾನ್ ಬಿನ್ ಔಫ್’ರಲ್ಲಿ ◌ؓ ಉಮಯ್ಯ ಪುನಃ, ಅಲ್ಪ ಗಿಡ್ಡವಾಗಿರುವ, ಸುಂದರನಾಗಿದ್ದ, ಕೆಂಪು ಪೇಟವನ್ನು ಕಟ್ಟಿಕೊಂಡಿದ್ದ ಆ ವ್ಯಕ್ತಿ ಯಾರು ಎಂದು ಕೇಳಿದಾಗ.? ಅದು ಅನ್ಸಾರ್’ಗಳಲ್ಲಿ ಒಬ್ಬರಾದ ಸಮ್ಮಾಕ್ ಬಿನ್ ಖರ್’ಷ ಎಂದಾಗಿದೆ ಅವರ ಹೆಸರು ಎಂದು ಇಬ್’ನು ಔಫ್ ಹೇಳಿದರು. ಅದಕ್ಕೆ ಉಮಯ್ಯ, ಆ ವ್ಯಕ್ತಿಯ ಕಾರಣದಿಂದಲೇ ನಾವು ಕಡಿದ ಮೃಗಗಳಂತೆ ಆದದ್ದು ಎಂದು ಹೇಳಿದರು. ಅಬೂದುಜಾನ ಹೋರಾಡಿ ಸೋಲಿಸಿದ್ದು ಎಂಟು ಜನರನ್ನಾಗಿತ್ತು, ಅವುಗಳಲ್ಲಿ ಒಂದು ದೃಶ್ಯದ ಬಗ್ಗೆ ತಿಳಿಯೋಣ.

ಖುರೈಷಿಗಳೇ, ಹೊಸ ಧರ್ಮದೊಂದಿಗೆ ಬಂದು, ಸಮೂಹವನ್ನು ಎರಡಾಗಿ ವಿಭಜಿಸಿದ ಮುಹಮ್ಮದ್’ರನ್ನು ﷺ ಹಿಡಿಯಬೇಕು. ಅವರು ತಪ್ಪಿಸಿಕೊಂಡರೆ, ನಾವು ಹೇಗೆ ಗೆದ್ದುಕೊಂಡೆವು ಎಂದು ಹೇಳಲು ಸಾಧ್ಯ.? ಎಂದು ಕೂಗಿ ಹೇಳುತ್ತಾ, ಆಸಿಮ್ ಅಬೂಔಫ್ ಎಂಬ ವ್ಯಕ್ತಿಯೂ ಮುಂದೆ ಬಂದನು. ತೋಳದಂತೆ ಓಡೋಡಿ ಬರುತ್ತಿದ್ದ ಆಸಿಮ್’ರನ್ನು, ಅಬೂದುಜಾನಃ ಎದುರಿಸಿದರು. ಅವರಿಬ್ಬರ ಭೀಕರವಾದ ಹೋರಾಟದಲ್ಲಿ ಆಸಿಮ್ ತತ್ತರಿಸಿ ಹೋದನು, ಅವನ ದೇಹದಲ್ಲಿದ್ದ ವಸ್ತುಗಳನ್ನು ಅಥವಾ “ಸಲಬ್’ನ್ನು” ತೆಗೆಯಲು ಪ್ರಯತ್ನಿಸುತ್ತಿದ್ದರು. ಸಲಬ್ ಎದುರಾಳಿಯನ್ನು ಯಾರು ಸೋಲಿಸುತ್ತಾರೋ.? ಅವರಿಗೆ ಸೇರಿದ್ದಾಗಿರುತ್ತದೆ. ಅದನ್ನು ಕಂಡು ಹತ್ತಿರದಲ್ಲೇ ಇದ್ದ, ಉಮರ್ ಬಿನ್ ಖತ್ತಾಬ್’ರು ◌ؓ ಆ ಸಲಬ್’ನ್ನು ಈಗ ಬಿಟ್ಟು ಬಿಡಿ, ಅವನು ಸೋತರೆ ಅದರ ಹಕ್ಕುದಾರ ನೀವೆ ಆಗಿರುತ್ತೀರಿ ಎಂದು ಹೇಳಿದರು. ಆದರೆ ಅಚಾನಕ್ಕಾಗಿ ಮಅಬದ್ ಬಿನ್ ವಹಾಬ್ ಮುಂದೆ ಬಂದು, ಅಬುದುಜಾನ ಮೇಲೆ ದಾಳಿ ಮಾಡಿದರು. ಅನಿರೀಕ್ಷಿತ ದಾಳಿಯಾದ ಕಾರಣ ಅವರು ಮಂಡಿಯೂರಿ ಕುಳಿತರು, ಆದರೆ ಮರುಕ್ಷಣವೇ ಅದೇ ಉತ್ಸಾಹದಿಂದ ಎದ್ದು, ಮಅಬದಿನ ಮೇಲೆ ದಾಳಿ ಮಾಡಿ, ಅವನನ್ನು ಸೋಲಿಸಿ ಅವನ ಸಲಬನ್ನು ವಶಪಡಿಸಿಕೊಂಡರು.

ಇಮಾಮ್ ಬೂಸೂರಿಯವರ “ಮಾಸಾಲ ಯಲ್’ಖಾಹುಮು…” ಎಂಬ ಸಾಲುಗಳನ್ನು ನೆನಪಿಸುವ ದೃಶ್ಯವನ್ನಾಗಿತ್ತು ಸ್ವಹಾಬಿಗಳ ಬಗ್ಗೆ ನಾವು ಈಗ ವಿವರಿಸಿದ್ದು. ಅವರ ಸಾಲುಗಳ ಸಾರವು ಈ ರೀತಿಯಾಗಿದೆ, “ರಣರಂಗದಲ್ಲಿ ಅವರು ಹೋರಾಡಿ, ಮಾಂಸದ ಅಂಗಡಿಯಲ್ಲಿ ವ್ಯಾಪಾರಿ ಮಾಂಸವನ್ನು ವ್ಯಾಪಾರಕ್ಕೆ ಇಟ್ಟ ರೀತಿಯಲ್ಲಿ ಎದುರಾಳಿಯನ್ನು ಕಡಿದು ಹಾಕಿ, ಸೋಲಿಸಿದರು”

ಬದ್ರ್ ರಣರಂಗದಲ್ಲಿ ಉಂಟಾದ ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಝುಬೈರ್ ಬಿನುಲ್ ಅವ್ವಾಮಿನದ್ದು. ಅವರ ದೇಹದಲ್ಲಿ ಆಗಿದ್ದ ಗಾಯಗಳು ಎಷ್ಟು ಆಳವಾಗಿತ್ತು ಅಂದರೆ, ಕೈಗಳು ಒಳಗೆ ಹೋಗುವಷ್ಟು ಆಳವಾಗಿತ್ತು. ಅವರೇ ಖುದ್ದಾಗಿ ತನ್ನ ಅನುಭವ ವಿವರಿಸುವುದು ಕಾಣಬಹುದು, ಉಬೈದತ್ ಬಿನ್ ಸಈದ್ ಅಲ್ ಅಸ್ವಿ ಎಂಬ ವ್ಯಕ್ತಿಯು, ಬದ್ರ್ ರಣರಂಗದಲ್ಲಿ ನನ್ನ ಮುಂದೆ, ನಾನು ದಾತುಲ್ ಕಿರ್’ಶಿನ ತಂದೆಯಾಗಿರುವೆನು ಎಂದು ಹೇಳುತ್ತಾ ಮುಂದೆ ಬಂದನು. ಎರಡು ಕಣ್ಣುಗಳನ್ನು ಬಿಟ್ಟು, ಉಳಿದ ಎಲ್ಲಾ ಭಾಗದಲ್ಲೂ ಕವಚ ಧರಿಸಿದ್ದರು, ತನ್ನ ಜೊತೆಯಲ್ಲಿ ದೊಡ್ಡ ಹೊಟ್ಟೆ ಇದ್ದ ಅನಾರೋಗ್ಯದಿಂದ ಬಳಲುತ್ತಿದ್ದ, ಒಬ್ಬಳು ಹೆಣ್ಣು ಮಗಳನ್ನು ಬೆನ್ನಿನ ಮೇಲೆ ಹೊತ್ತು ಬಂದಿದ್ದನು. ನಾನು ನನ್ನ ಕೈಯಲ್ಲಿದ್ದ ಈಟಿಯಿಂದ ಅವನ ಕಣ್ಣಿಗೆ ಚುಚ್ಚಿದಾಗ, ಅವನು ಕೆಳಗೆ ಬಿದ್ದನು. ನಾನು ಅವನ ಕೆನ್ನೆಯ ಮೇಲೆ ಕಾಲಿಟ್ಟು ಎಳೆದು ನೋಡಿದಾಗ, ಅದರ ಎರಡು ಮೊನೆಯು ಕೂಡ ಮುರಿದು ತುಂಡಾಗಿ ಹೋಗಿತ್ತು.

ರಣರಂಗದ ನಿಯಮದ ಪ್ರಕಾರ, ಯಾವ ರೀತಿಯಲ್ಲಾದರೂ ಎದುರಾಳಿಯನ್ನು ಸೋಲಿಸಬೇಕು ಎಂಬುವುದು ಮಾತ್ರವಲ್ಲವೇ ಮುಖ್ಯ.? ಶೌರ್ಯ ಹಾಗೂ ಧೈರ್ಯದಿಂದ ಹೊರಾಡಬೇಕಾದ ರಣರಂಗದಲ್ಲಿ ಅನುಕಂಪ, ಹಾಗೂ ಕರುಣೆಯಿಂದ ವರ್ತಿಸಿದರೆ ಪ್ರಾಣ ಉಳಿಯಲಿಕಿಲ್ಲ ತಾನೇ.? ಎಲ್ಲಾ ರೀತಿಯಲ್ಲೂ ಯುದ್ಧ ನಡೆಯದ ಹಾಗೆ ಬಹಳಷ್ಟು ತಡೆದರೂ, ಕೊನೆಗೆ ಎದುರಾಳಿಗಳೇ ಆಯುಧಗಳನ್ನು ಹಿಡಿದು ರಣರಂಗಕ್ಕೆ ಬಂದಿರುವಾಗ, ಬೇರೆ ವಿಧಿಯಿಲ್ಲದೆ ಎದುರಿಸಿದ್ದಾಗಿತ್ತು ಬದ್ರ್ ರಣರಂಗ ಎಂದು ನಾವು ಈಗಾಗಲೇ ತಿಳಿಸಿದ್ದೇವೆ.

ಏನೇ ಇರಲಿ, ರಣರಂಗದಲ್ಲಿ ಎದುರಾಳಿಯ ಕುತಂತ್ರ ಹಾಗೂ ಕವಚವನ್ನು ಬೇಧಿಸಿದ ಕೋಲನ್ನು ಪ್ರವಾದಿಯವರು ﷺ ಕೇಳಿದ ಕಾರಣ ಅವರಿಗೆ ನೀಡಲಾಯಿತು. ಪ್ರವಾದಿಯವರ ﷺ ಮರಣದ ನಂತರ, ಅಬೂಬಕ್ಕರ್ ◌ؓ, ಉಮರ್ ◌ؓ, ಉಸ್ಮಾನ್ ◌ؓ, ಹೀಗೆ ತಲೆಮಾರಿನಿಂದ ತಲೆಮಾರಿಗೆ ತಲುಪಿ, ಕೊನೆಗೆ ಅವರು ಕೂಡ ಮರಣ ಹೊಂದಿದ ನಂತರ, ಅವರ ಕೈಯಿಂದ ಅಲಿಯವರಿಗೆ ◌ؓ ಸಿಕ್ಕಿತು. ಅವರ ಕುಟುಂಬದವರಿಂದ ಅಬ್ದುಲ್ಲಾಹಿಬಿನ್ ಝುಬೈರ್ ಕೇಳಿ ಪಡೆದುಕೊಂಡು, ಅವರ ಮರಣದವರೆಗೆ ಅವರು ಕೂಡ ಅದನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-243/365

ರಣರಂಗದಲ್ಲಿ ಶೌರ್ಯದಿಂದ ಹೋರಾಡಿದ ಬಹಳಷ್ಟು ಯೋಧರನ್ನು ಬದ್ರ್ ಕದನವು ಪರಿಚಯಿಸಿತು, ಅದರಲ್ಲಿ ವಿಭಿನ್ನವಾದ ಒಂದು ಘಟನೆಯ ಬಗ್ಗೆ ತಿಳಿಯೋಣ. ರಣರಂಗದಿಂದ ಮೂರು ತಲೆಗಳನ್ನು ಹಿಡಿದು ಅಬೂಬುರ್’ದಃರು ◌ؓ ಪ್ರವಾದಿಯವರ ﷺ ಬಳಿ ಬಂದು, ಇದರಲ್ಲಿ ಇಬ್ಬರನ್ನು ನಾನೇ ಖುದ್ದಾಗಿ ಸೊಲಿಸಿದ್ದಾಗಿರುತ್ತದೆ, ಇನ್ನೊಂದನ್ನು ಬಿಳಿ ದೈತ್ಯ ವ್ಯಕ್ತಿಯೊಬ್ಬರು ಇನ್ನೊಬ್ಬನ ಜೊತೆಯಲ್ಲಿ ಕಾದಾಟ ನಡೆಸುತಿದ್ದರು, ಸ್ವಲ್ಪ ಸಮಯದ ನಂತರ ಅವನ ತಲೆ ನೆಲಕ್ಕೆ ಉರುಳುವುದು ಕಂಡಿತು. ಆ ತಲೆಯಾಗಿದೆ ಇದು ಎಂದು ಹೇಳಿದಾಗ, ಪ್ರವಾದಿಯವರು ﷺ ಆ ಬಿಳಿ ದೈತ್ಯ ವ್ಯಕ್ತಿಯು ದೇವಚರ (ಮಲಕ್) ಆಗಿದ್ದರು ಎಂದು ಹೇಳಿದರು.

ಈ ದೃಶ್ಯದ ಬಗ್ಗೆ ಒಮ್ಮೆ ಆಲೋಚಿಸಿರಿ, ಇಂತಹ ಶೌರ್ಯದೊಂದಿಗೆ ಹೋರಾಡಬೇಕಿದ್ದರೆ ಎಷ್ಟೊಂದು ಧೀರತೆ ಬೇಕು.? ಆಧ್ಯಾತ್ಮಿಕವಾಗಿ ಉನ್ನತ ದರ್ಜೆಯಲ್ಲಿ ತಲುಪಿದ್ದ ಅನುಚರರನ್ನು ಅಗತ್ಯ ಬಿದ್ದಾಗ, ರಣರಂಗ ಯೋಧರನ್ನಾಗಿ ಮಾಡಿದ ಮಹಾ ವಿಸ್ಮಯ ಭರಿತ ದೃಶ್ಯವಾಗಿದೆ ಇದು.

ತಮ್ಮ ಬಂಧು ಬಳಗ ಅಷ್ಟೇ ಯಾಕೆ, ಜನ್ಮ ನೀಡಿದ ತಂದೆಯೂ ಕೂಡ ತಮಗೆ ಸಮರ್ಪಣೆ ಎಂಬ ತ್ಯಾಗದ ಮಾತುಗಳನ್ನಾಗಿತ್ತು ಬದ್ರ್ ರಣರಂಗದಲ್ಲಿ ಅವರ ಅನುಚರರು ಹೇಳುತ್ತಿದ್ದದ್ದು. ಅದರಲ್ಲೂ ಅಬೂಉಬೈದರ ◌ؓ ಸಮರ್ಪಣೆಯಂತೂ ಮರೆಯಲಾಗದು. ಅಬೂಉಬೈದರು ◌ؓ, ರಣರಂಗದಲ್ಲಿ ಶೌರ್ಯದಿಂದ ಹೊರಾಡುತ್ತಿರುವುದನ್ನು ಎದುರಾಳಿಯ ಎದೆಯಲ್ಲಿ ನಡುಕ ಉಂಟಾಗಿತ್ತು. ಆದರೆ ಒಬ್ಬರು ಮಾತ್ರ ಅಬೂಉಬೈದರನ್ನು ◌ؓ ಎದುರಿಸಲು ಮುಂದೆ ಬಂದರು, ಆದರೆ ಆ ವ್ಯಕ್ತಿಯನ್ನು ಎದುರಿಸುವ ಮನಸ್ಸು ಬರದೆ ಅಬೂಉಬೈದ ◌ؓ ಬೇರೆ ಕಡೆ ಹೋದರು. ಹೀಗೆ ಅಬೂಉಬೈದ ◌ؓ ಹೋದ ಕಡೆಗೆಲ್ಲಾ ಆ ವ್ಯಕ್ತಿಯು ಬಂದು, ಅಬೂಉಬೈದರಿಗೆ ◌ؓ ಅಡ್ಡವಾಗಿ ನಿಲ್ಲುತ್ತಿದ್ದರು. ಅಬೂಉಬೈದರಿಗೆ ◌ؓ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು, ಕೊನೆಗೆ ವಿಧಿಯಿಲ್ಲದೆ ಈ ತಡೆಯುತ್ತಿದ್ದ ವ್ಯಕ್ತಿಯ ತಲೆಗೆ ಅಬೂಉಬೈದರು ◌ؓ ತಮ್ಮ ಖಡ್ಗವನ್ನು ಬೀಸಿದಾಗ, ಆ ವ್ಯಕ್ತಿಯ ತಲೆಯು ಇಬ್ಬಾಗವಾಗಿ ಅವರು ನೆಲಕ್ಕೆ ಉರಿಳಿದರು. ವಾಸ್ತವದಲ್ಲಿ ಅಬೂಉಬೈದರ ಎದುರು ಅಡ್ಡವಾಗಿ ನಿಂತು ತಡೆಯುತ್ತಿದ್ದ ವ್ಯಕ್ತಿ, ಅಬೂಉಬೈದರ ತಂದೆ ಆಗಿದ್ದರು. ಸತ್ಯ ವಿಶ್ವಾಸ ಹಾಗೂ ಜನ್ಮ ಕೊಟ್ಟ ತಂದೆ ಇವೆರಡೂ ಎರಡು ಭಾಗದಲ್ಲಿ ಆದಾಗ, ಸತ್ಯವಿಶ್ವಾಸವನ್ನು ಆಯ್ಕೆ ಮಾಡಿದ ಅನುಚರರ ಉದಾಹರಣೆಯಾಗಿದೆ ಇದು.

ಪ್ರವಾದಿಯವರ ﷺ ಅನುಚರರ ಈ ಸಮರ್ಪಣೆಯನ್ನು ಉದ್ದೇಶಿಸಿ ಪವಿತ್ರ ಕುರ್’ಆನಿನ ಐವತ್ತೆಂಟನೆ ಅಧ್ಯಾಯದ ಇಪ್ಪತ್ತೆರಡನೇ ಸೂಕ್ತದಲ್ಲಿ ತಿಳಿಸುವುದು ಕಾಣಬಹುದು. “ಅಲ್ಲಾಹನ ಹಾಗೂ ಅಂತ್ಯ ದಿನದ ಮೇಲೆ ವಿಶ್ವಾಸವಿರಿಸುವ ಜನತೆ, ಅಲ್ಲಾಹನಲ್ಲಿ ಹಾಗೂ ಅವನ ಪ್ರವಾದಿಯವರಲ್ಲಿ ﷺ ದ್ವೇಷವಿಡುವ ಜನರೊಂದಿಗೆ, ಯಾವುದೇ ಸ್ನೇಹ ಸಂಬಂಧವನ್ನು ಇಡುವುದು ಕಾಣಲು ಸಾಧ್ಯವಿಲ್ಲ. ಅದು ಸ್ವಂತ ತಂದೆಯಾದರೂ, ಮಗನಾಗದರೂ, ಸಹೋದರರಾದರೂ ಸರಿ, ಅವರ ಮನಸ್ಸಿನಲ್ಲಿರುವ ಅಲ್ಲಾಹನ ಬಗ್ಗೆಯಿರುವ ಸತ್ಯವಿಶ್ವಾಸವು, ಅವರನ್ನು ಶಕ್ತವಂತರನ್ನಾಗಿಸುತ್ತದೆ. ಅವನು (ಅಲ್ಲಾಹನು) ಅಂಥವರಿಗೆ ಕೆಳಭಾಗದಲ್ಲಿ ತೊರೆಗಳು ಹರಿಯುವ ಸ್ವರ್ಗಕ್ಕೆ ಪ್ರವೇಶ ನೀಡುವನು, ಆ ಸ್ವರ್ಗದಲ್ಲಿ ಅವರು ಶಾಶ್ವತವಾಗಿ ಇರುವರು, ಅಲ್ಲಾಹನು ಅವರಲ್ಲಿಯೂ, ಅವರು ಅಲ್ಲಾಹನಲ್ಲಿಯೂ ಸಂತೃಪ್ತಿ ಹೊಂದಿದವರಾಗಿರುವರು. ಅವರಾಗಿರುವರು ಅಲ್ಲಾಹನ ಪಕ್ಷದವರು, ಖಂಡಿತವಾಗಿಯೂ ಅಲ್ಲಾಹನ ಪಕ್ಷದವರು ಮಾತ್ರವಾಗಿರುವರು ವಿಜಯಶಾಲಿಗಳು”

ಉಮರಿಗೂ ◌ؓ ಇದೆ ರೀತಿಯ ಅನುಭವ ರಣರಂಗದಲ್ಲಿ ಉಂಟಾಗಿತ್ತು. ಅವರು ತಮ್ಮ ಚಿಕ್ಕಪ್ಪ, ಆಸ್ವ್ ಬಿನ್ ವಾಯಿಲ್’ನ್ನು ರಣರಂಗದಲ್ಲಿ ಕೊಂದು ಹಾಕಿದ್ದರು. ಕೆಲವೊಮ್ಮೆ ಅದನ್ನು ಬಹಳ ಹೆಮ್ಮೆಯಿಂದ ಉಮರ್’ರವರು ◌ؓ ಹೇಳುತ್ತಿದ್ದರು.

ಒಂದು ದಿನ ಉಮರ್ ಸಈದ್ ಬಿನ್ ಹಿಷಾಮಿನ ಹತ್ತಿರದಿಂದ ನಡೆದು ಹೋಗುವಾಗ, ಅವರು ಮುಖ ತಿರುಗಿಸಿದರು. ಅದನ್ನು ಕಂಡು ಉಮರ್ ◌ؓ, ನಿನ್ನ ತಂದೆಯನ್ನು ನಾನು ಬದ್ರ್ ರಣರಂಗದಲ್ಲಿ ಕೊಂದು ಹಾಕಿದ್ದೆ ಎಂಬ ಕಾರಣಕ್ಕೆ ನೀನು ನನ್ನಲ್ಲಿ ಕೋಪ ಗೊಂಡಿದ್ದರೆ.? ಕೇಳು, ನಾನು ನನ್ನ ಸ್ವಂತ ಚಿಕ್ಕಪ್ಪರನ್ನೇ ಸತ್ಯವಿಶ್ವಾಸದ ಕಾರಣ, ರಣರಂಗದಲ್ಲಿ ಕೊಂದು ಹಾಕಿದ್ದೇನೆ, ಮತ್ತೆ ಅಲ್ವಾ ನಿನ್ನ ತಂದೆ.? ಎಂದು ಹೇಳಿ, ಅವನ ಹತ್ತಿರ ಹೋದಾಗ ಆಗ ಅವನು ಮಲಗಿ ಬೈಯುತ್ತಿದ್ದನು. ಉಮರ್’ರು ಅವನ ಕಡೆ ತಿರುಗಿ ನಿನ್ನ ತಂದೆಯ ಸಂಬಂಧಿಯಾದ ಅಲಿಯಾಗಿದ್ದರು ◌ؓ ನಿನ್ನ ತಂದೆಯನ್ನು ಕೊಂದಿದ್ದು ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-244/365

ಬದ್ರ್ ರಣರಂಗದಲ್ಲಿ ಶೌರ್ಯದೊಂದಿಗೆ ಹೋರಾಡಿದ ಮಹಾತ್ಮರ ಸಾಲಿನಲ್ಲಿ ಅಬೂಬಕ್ಕರ್ ◌ؓ ಕೂಡ ಮುಂದೆ ಇದ್ದಾರೆ. ಮಹಾನರ ಸಮರ್ಪಣೆಯ ಧೀರತೆಯನ್ನು ತೋರಿಸಿಕೊಡುವ ಕೆಲವೊಂದು ಘಟನೆಗಳನ್ನು ತಿಳಿಯೋಣ. ಒಂದು ದಿನ ಭಾಷಣದ ನಡುವೆ ಅಲಿಯವರು ◌ؓ, ಸಭಿಕರಲ್ಲಿ ನಮ್ಮ ನಡುವೆ ಅತೀ ಶೌರ್ಯವಂತ ಯಾರು ಎಂದು ಕೇಳಿದಾಗ, ಕೇಳುಗರು ಎಲ್ಲರೂ ಒಟ್ಟಾಗಿ ನೀವೆ ಎಂದು ಉತ್ತರಿಸಿದರು. ಅದಕ್ಕೆ ಅಲಿಯವರು, ನನ್ನ ವಿರುದ್ಧ ದ್ವಂದ್ವ ಯುದ್ಧದಲ್ಲಿ ಯಾರೇ ಬಂದರೂ ನಾನು ಅವರನ್ನು ಸುಮ್ಮನೆ ಬಿಟ್ಟಿಲ್ಲ, ಆದರೆ ಅದಲ್ಲ ನಾನು ಹೇಳುತ್ತಿರುವುದು. ನಮ್ಮಲ್ಲಿ ಅತೀ ಶೌರ್ಯವಂತ ಯಾರೆಂದರೆ ಅದು ನಾನಲ್ಲ, ಅಬೂಬಕ್ಕರ್’ರು ◌ؓ ಆಗಿರುತ್ತಾರೆ. ಕಾರಣ ಏನೆಂದರೆ, ನಿಮಗೆ ಗೊತ್ತಿರಬಹುದು ಬದ್ರ್ ರಣರಂಗದಲ್ಲಿ, ಕುಳಿತುಕೊಂಡು ಯುದ್ಧ ನಿಯಂತ್ರಿಸಲು ನಾವು ಪ್ರವಾದಿಯವರಿಗೆ ﷺ ಡೇರೆ ನಿರ್ಮಿಸಿ ಮಾಡಿ ಕೊಟ್ಟಿದ್ದೆವು. ಆದರೆ ಪ್ರವಾದಿಯವರನ್ನು ﷺ ಡೇರೆಯ ಒಳಗಿನಿಂದ ಶತ್ರುಗಳು ದಾಳಿ ಮಾಡದ ಹಾಗೆ ಯಾರು ಕಾವಲು ನಿಲ್ಲುತ್ತಾರೆ.? ಎಂದು ಕೇಳಿದಾಗ, ಅಲ್ಲಾಹನಾಣೆ ಯಾರಿಗೂ ಧೈರ್ಯ ಸಾಕಗಲಿಲ್ಲ. ಆದರೆ ಧೀರತೆಯಿಂದ ತನ್ನ ಓರೆಯಿಂದ ಖಡ್ಗವನ್ನು ಹೊರ ತೆಗೆದು ಮುಂದೆ ಬಂದದ್ದು ಅಬೂಬಕ್ಕರ್ ◌ؓ ಆಗಿತ್ತು.
ನಂತರ ಮಾತು ಮುಂದುವರಿಸುತ್ತಾ, ಮಕ್ಕಾದಲ್ಲಿ ನಾವು ಜೀವಿಸುತ್ತಿದ್ದ ಕಾಲದಲ್ಲಿ ಪ್ರವಾದಿಯವರನ್ನು ﷺ ಶತ್ರುಗಳು ಸುತ್ತುವರಿದಿದ್ದ ಸಂದರ್ಭದ ಬಗ್ಗೆ ನನಗೆ ಚೆನ್ನಾಗಿ ನೆನೆಪಿದೆ. ಅವರು ಪ್ರವಾದಿಯವರಿಗೆ ﷺ ಬಹಳ ಕಿರುಕುಳ ನೀಡಿದಾಗ, ನಮಗೆಲ್ಲಾ ಅವರ ಬಳಿ ಹೋಗಲು ಸಾಧ್ಯವಾಗಿರಲಿಲ್ಲ, ಆದರೆ ಅಬೂಬಕ್ಕರ್’ರು ಒಂಟಿಯಾಗಿ ಧೈರ್ಯದಿಂದ ಮುಂದೆ ಹೋಗಿ, “ನನ್ನ ಆರಾಧ್ಯ ಒಬ್ಬನೇ ಹೇಳಿದ ಕಾರಣಕ್ಕೆ ನೀವು ಆ ಮಹಾ ವ್ಯಕ್ತಿತ್ವವನ್ನು ಹಿಂಸೆ ನೀಡುತ್ತಿದ್ದೀರ.? ಖಂಡಿತವಾಗಿಯೂ ನಿಮಗಾಗಿದೆ ಅದರ ನಷ್ಟ,” ಎಂದು ಕೂಗಿ ಹೇಳಿ, ಪ್ರವಾದಿಯವರನ್ನು ﷺ ಅವರ ಬಲೆಯಿಂದ ರಕ್ಷಿಸಿದ್ದರು.

ಇಷ್ಟು ಹೇಳುತ್ತಾ, ದುಃಖ ಸಹಿಸಲಾಗದೆ ತನ್ನ ಭುಜದಲ್ಲಿದ್ದ ಶಾಲನ್ನು ತೆಗೆದು, ಮುಖಕ್ಕೆ ಅಡ್ಡವಾಗಿ ಇಟ್ಟು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ನಂತರ ಕಣ್ಣೀರನ್ನು ಒರೆಸುತ್ತಾ, ಅಲಿಯವರು ◌ؓ ಸಭೆಯಲ್ಲಿ “ಅಲ್ಲಾಹನಾಣೆ ನಾನು ನಿಮಲ್ಲಿ ಫರೋವನ ಕುಟುಂಬದ ಸತ್ಯ ವಿಶ್ವಾಸಿಣಿಯೋ ಶ್ರೇಷ್ಠಳು.? ಅಥವಾ ಅಬೂಬಕ್ಕರ್’ರವರೋ.? ಎಂದು ಕೇಳುತ್ತಿದ್ದೇನೆ” ಎಂದು ಹೇಳಿದಾಗ,
ಸಭೆಯಲ್ಲಿ ಒಂದು ಕ್ಷಣ ಮೌನ ಆವರಿಸಿತು. ನಂತರ ಅಲಿಯವರೇ ಮಾತು ಮುಂದುವರಿಸುತ್ತಾ, ಅಲ್ಲಾಹನಾಣೆ ಅಬೂಬಕ್ಕರ್’ರ ◌ؓ ಕೇವಲ ಕೆಲವು ಸಮಯದ ಒಳಿತು, ಫರೋವನ ಕುಟುಂಬದ ವಿಶ್ವಾಸಿ ವನಿತೆಯ ಸಂಪೂರ್ಣ ಭೂಮಿಯಷ್ಟು ಇರುವ ಒಳಿತಿಗಿಂತ ಶ್ರೇಷ್ಠವಾಗಿದೆ, ಯಾಕೆಂದರೆ ಅವರು ರಹಸ್ಯವಾಗಿಯಾಗಿತ್ತು ತಮ್ಮ ಆರಾಧನೆಗಳನ್ನು ಮಾಡುತ್ತಿದ್ದದ್ದು. ಆದರೆ ಅಬೂಬಕ್ಕರ್’ರು ◌ؓ ಖುದ್ದಾಗಿ ತಮ್ಮ ಸತ್ಯವಿಶ್ವಾಸವನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರೆಂದು ಎಂದು ಸಭೆಯಲ್ಲಿ ಹೇಳಿದರು

ಅಬೂಬಕ್ಕರ್’ರ ಮಗನಾದ ಅಬ್ದುರಹ್ಮಾನ್ ಬದ್ರ್ ಯುದ್ಧದ ಸಂದರ್ಭದಲ್ಲಿ ವಿರೋಧಿಗಳ ಗುಂಪಿನಲ್ಲಿ ಇದ್ದರು. ಅಂದು ಅವರ ಹೆಸರು, ಅಬ್ದುಲ್ ಕಅಬ ಎಂದಾಗಿತ್ತು, ನಂತರದ ಕಾಲದಲ್ಲಿ ಪ್ರವಾದಿಯವರು ﷺ ಆಗಿತ್ತು ಅವರಿಗೆ ಅಬ್ದುಲ್ ರಹ್ಮಾನ್ ಎಂಬ ಹೆಸರನ್ನು ಕೊಟ್ಟದ್ದು. ಅವರು ತಮ್ಮ ಪೂರ್ವ ಕಾಲದಲ್ಲಿ ಬಿಲ್ಲುಗಾರಿಕೆಯಲ್ಲಿ ನಿಪುಣತೆ
ಹೊಂದಿದ್ದ ಧೀರ ವ್ಯಕ್ತಿ ಆಗಿದ್ದರು.
ಅವರು ಬದ್ರ್ ಯುದ್ಧದ ಅನುಭವವನ್ನು ನಂತರ ಕಾಲದಲ್ಲಿ ಹೇಳುತ್ತಿದ್ದದ್ದು ಕಾಣಬಹುದು, ನಾನು ಮುಸ್ಲಿಂ ಆದ ನಂತರ ತಂದೆಯವರಲ್ಲಿ ಹೇಳಿದ್ದೆ, ಬದ್ರ್’ನ ರಣರಂಗದಲ್ಲಿ ತಾವು ನನ್ನ ಕಣ್ಣಮುಂದೆ ಬಹಳಷ್ಟು ಬಾರಿ ಸಿಕ್ಕಿದ್ರಿ ಆದರೆ ನಾನು ನಿಮ್ಮಿಂದ ದೂರ ಸರಿದು ಹಿಂತಿರುಗಿ ನಿಲ್ಲುತ್ತಿದ್ದೆ ಎಂದು ಹೇಳಿದಾಗ ತಂದೆಯವರು, ಬಹುಶಃ ನೀನು ಅವತ್ತು ನನ್ನ ಕೈಗೆ ಸಿಕ್ಕಿರುತ್ತಿದ್ದರೆ ನಿನಗೆ ಅಂದೆ ಒಂದು ಗತಿ ಕಾಣಿಸುತ್ತಿದ್ದೆ ಎಂದು ಹೇಳಿದರು.

ಇದರಲ್ಲೇ ನಮಗೆ ಅಬೂಬಕ್ಕರ್ ಸಿದ್ದೀಕ್’ರ ಆದರ್ಶ, ತ್ಯಾಗದ ಬಗ್ಗೆ ಅರ್ಥ ಮಾಡಿಕೊಳ್ಳಬಹುದು. ಒಂದು ಉಲ್ಲೇಖದ ಪ್ರಕಾರ ಬದ್ರ್ ಯುದ್ಧದ ಸಂದರ್ಭದಲ್ಲಿ, ಅಬ್ದುಲ್ ರಹ್ಮಾನ್’ರು ದ್ವಂದ ಯುದ್ಧಕ್ಕೆ ಸವಾಲು ಎಸೆದಾಗ, ಅವರನ್ನು ಎದುರಿಸಲು ಸ್ವತಃ ಅಬೂಬಕ್ಕರ್’ರು ಮುಂದಾದರು. ತಕ್ಷಣವೇ ಪ್ರವಾದಿಯವರು ﷺ ತಡೆಯುತ್ತಾ, ಸಧ್ಯಕ್ಕೆ ನೀವು ಇಲ್ಲಿ ಕುಳಿತು ಕೊಳ್ಳಿರಿ ಎಲ್ಲಿಗೂ ಹೋಗಬೇಡಿ, ಯಾಕೆಂದರೆ ನೀವೇ ಅಲ್ಲವೇ.? ಇಲ್ಲಿ ನನ್ನ ಕಾವಲುಗಾರರಾಗಿ ನಿಂತಿರುವುದು ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-245/365

ಅಬೂಬಕ್ಕರ್ ◌ؓ ಕೂಡ ಅದಕ್ಕೆ ಒಪ್ಪಿಕೊಂಡು ಪ್ರವಾದಿಯವರ ﷺ ಬಳಿಯೇ ನಿಂತರು. ಪ್ರವಾದಿಯವರ ﷺ ಹಾಗೂ ಅಬೂಬಕ್ಕರ್’ರ ◌ؓ ನಡುವಿನ ಆತ್ಮೀಯ ಸಂಬಂಧದ ಅವಿಸ್ಮರಣೀಯ ಕ್ಷಣವಾಗಿತ್ತು ಅದು.

ಪ್ರವಾದಿಯವರು ﷺ ಕೇವಲ ಅನುಚರರನ್ನು ಮಾತ್ರ ಉತ್ತೇಜನ ನೀಡುತ್ತಿದ್ದ ನಾಯಕ ಮಾತ್ರವಾಗಿರಲಿಲ್ಲ, ಬದಲಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ರಣರಂಗಕ್ಕೆ ಇಳಿದು ಬಹಳ ವೀರಾವೇಶದಿಂದ ಹೋರಾಟ ಕೂಡ ನಡೆಸಿದ್ದರು. ಅಲಿಯವರು ◌ؓ ಹೇಳುವುದು ಕಾಣಬಹುದು, ರಣರಂಗದಲ್ಲಿ ಬಿರುಸಿನ ಹೋರಾಟದ ನಡುವೆ ಏನಾದರೂ ತೊಂದರೆಯಾದರೆ ತಕ್ಷಣವೇ ನಾವು ಪ್ರವಾದಿಯವರ ﷺ ಬಳಿ ಹೋಗಿ, ಅವರನ್ನು ಮುಂದೆ ನಿಲ್ಲಿಸಿ ಅವರಲ್ಲಿ ರಕ್ಷಣೆ ಕೇಳುತ್ತಿದ್ದೆವು, ಆ ಸಮಯದಲ್ಲಿ ಅವರು ವಿರೋಧಿಗಳಿಗೆ ಬಹಳ ಹತ್ತಿರದಲ್ಲಿ ಇರುತ್ತಿದ್ದರು. ಪ್ರವಾದಿಯವರ ﷺ ಶೌರ್ಯದ ಬಗ್ಗೆ ಬರೆದಿರುವ ಕವಿತೆಯನ್ನು ಕಾಣಬಹುದು.

“ಲಹು ವಜ್’ಹುಲ್ ಹಿಲಾಲಿ ಲಿನಿಸ್’ಫಿ ಶಹ್’ರಿ
(ಪವಿತ್ರ ಮುಖದ ಶೋಭೆಗೆ ಚಂದಿರನು ಸೋಲುವನು)
ವ ಅಜ್’ಫಾನುಂ ಮುಕಹ್ಹಲತುಂ ಬಿ ಸಿಹಿರಿ
(ಸುಂದರವಾದ ಕಾಡಿಗೆ ಹಚ್ಚಿದಂತಿರುವ ಕಣ್ಣುಗಳು)
ವ ಇನ್ದಲ್ ಇಬ್’ತಿಸಾಮಿ ಕಲೈಲಿ ಬದ್’ರಿ
(ಒಮ್ಮೆ ನಕ್ಕರೆ ನೀವು ಕತ್ತಲಲ್ಲಿರುವ ಚಂದಿರನಂತೆ)
ವ ಇನ್ದಲ್ ಇನ್’ತಿಖಾಮಿ ಕ ಯೌಮಿ ಬದ್’ರಿ
(ಹೋರಾಡಿದರೆ ಬದ್’ರಿನ ದಿನದಂತೆ)

ಪ್ರವಾದಿಯವರ ﷺ ಮಂದಹಾಸ ಬೀರಿದ ಮುಖವು ಬದ್’ರಿನ ಚಂದಿರನ ಬೆಳಕಿನಂತೆ ಇದ್ದರೆ, ಬದ್’ರ ರಣರಂಗವು ಅವರ ಶೌರ್ಯದ ಸಂಕೇತವಾಗಿದೆ ಎಂಬುದಾಗಿದೆ ಅದರ ಅರ್ಥ.

ಸರಿ ಇನ್ನೂ ರಣರಂಗದ ಹೋರಾಟದ ಬಗ್ಗೆ ಸ್ವಲ್ಪ ತಿಳಿಯೋಣ, ಮುಸ್ಲಿಮರು ಬಹಳ ಶೌರ್ಯದಿಂದ ಹೋರಾಡಿದ ಕಾರಣದಿಂದ ಎದುರಾಳಿ ತಂಡದ ಬಹಳಷ್ಟು ತಲೆಗಳು ಉರುಳಿದವು, ಅದರೊಂದಿಗೆ ಶತ್ರುಗಳ ನಾಯಕನಾದ ಅಬೂಜಹಲಿಗೆ ಬಹಳಷ್ಟು ಚಿಂತೆಯಾಗತೊಡಗಿತು. ಅದರೊಂದಿಗೆ ಅಬೂಜಹಲ್’ನ ಸಂಬಂಧಿಕರು ಆತನಿಗೆ ಸಂರಕ್ಷಣೆ ನೀಡಲು ಮುಂದಾದರು. ಅವರೇ ಖುದ್ದಾಗಿ, ಸುತ್ತುವರಿದು ಅಬೂಜಹಲ್’ನ್ನು ಮಧ್ಯದಲ್ಲಿ ಇರಿಸಿದರು. ಅದರ ಜೊತೆಯಲ್ಲಿ ಅವರು ಅಬೂಜಹಲ್’ನ್ನು ಸಂರಕ್ಷಣೆ ಮಾಡಲು, ಅಬೂಜಹಲ್’ನ ಕವಚವನ್ನು ತೆಗೆದು ಅಬ್ದುಲ್ಲಾಹಿ ಬಿನ್ ಮುನ್ದಿರ್ ಎಂಬ ವ್ಯಕ್ತಿಗೆ ಹಾಕಿಸಿದರು. ಅಬ್ದುಲ್ಲಾಹಿಯನ್ನು ಕಂಡ ಕ್ಷಣದಲ್ಲೇ ನಾನು ಅಬ್ದುಲ್ ಮುತ್ತಲಿಬಿನ ಮಗ ಅಲಿ ◌ؓ ಎಂದು ಹೇಳುತ್ತಾ, ಅಲಿಯವರು ◌ؓ ಮುಂದೆ ಹೋಗಿ, ಬಲವಾದ ಏಟೊಂದನ್ನು ಕೊಟ್ಟಾಗ ಅವನು ನೆಲಕ್ಕುರುಳಿ ಬಿದ್ದನು. ತಕ್ಷಣವೇ, ಮಕ್’ಸೂಮಿಗಳು ಆ ಕವಚವನ್ನು ಅಬೂಖೈಸ್ ಬಿನ್ ಫಾಕಿಹ್ ಬಿನ್ ಅಲ್ ಮುಗೀರನಿಗೆ ಧರಿಸಿ ಕೊಟ್ಟರು. ಸ್ವಲ್ಪ ಸಮಯದ ನಂತರ ಅಬೂಜಹಲ್ ಎಂದು ತಿಳಿದು, ಹಂಝ’ರು ◌ؓ ನಾನು ಅಬ್ದುಲ್ ಮುತ್ತಲಿಬ್’ರ ಮಗ ಹಂಝ ◌ؓ ಎಂದು ಹೇಳುತ್ತಾ ಅವನಿಗೆ ಒಂದು ಏಟು ಕೊಟ್ಟರು, ಆ ಏಟಿಗೆ ತತ್ತರಿಸಿ ಅವನೂ ಕೂಡ ನೆಲಕ್ಕುರುಳಿ ಬಿದ್ದನು. ನಂತರ ಆ ಕವಚವನ್ನು ಹರ್’ಮಲತು ಬಿನ್ ಉಮರಿಗೆ ಧರಿಸಿದರು, ಅವನನ್ನೂ ಕೂಡ ಅಲಿಯವರು ಕೊಂದು ಹಾಕಿದರು. ನಂತರ ಮಖ್’ಸೂಮಿಗಳು ಆ ಕವಚವನ್ನು ಖಾಲಿದ್ ಬಿನ್ ಅಹ್’ಲಮಿಗೆ ಧರಿಸಲು ಮುಂದಾದಾಗ ಅವರು ಅದನ್ನು ಹಾಕಲು ಒಪ್ಪಿಕೊಳ್ಳಲಿಲ್ಲ.

ಇಷ್ಟೆಲ್ಲ ಆದರೂ, ಅಬೂಜಹಲ್ ಮಾತ್ರ ತನ್ನ ಸಂಬಂಧಿಕರ ಸಂರಕ್ಷಣೆಯಲ್ಲೇ ಇದ್ದನು. ಮುಆದ್ ಬಿನ್ ಅಂರ್ ಬಿನ್ ಅಲ್ ಜಮೂಹ್ ಹೇಳುವುದು ಕಾಣಬಹುದು, ಮರಗಳ ಗುಂಪಿನ ಹಾಗೆ ಒಂದು ಗುಂಪಿನ ನಡುವೆ ದೂರದಲ್ಲಿ ಅಬೂಜಹಲ್’ನ್ನು ಕಂಡೆನು. ಅಬೂಜಹಲ್’ನ ಬಳಿ ಯಾರಿಗೂ ತಲುಪಲು ಸಾಧ್ಯವಿಲ್ಲ ಎಂದು ಮಖ್’ಸೂಮಿಗಳು ಹೇಳುತ್ತಲೇ ಇದ್ದರು. ಆಗ ನನಗೆ ನಾನೇ ಒಂದು ದೃಢ ನಿಶ್ಚಯ ಮಾಡಿಕೊಂಡೆನು, ಖಂಡಿತ ನಾನು ಅವನ ಬಳಿ ತಲುಪುತ್ತೇನೆ ಎಂದು, ಅವಕಾಶಕ್ಕಾಗಿ ಕಾಯುತ್ತಾ ಇರುವಾಗ, ಸ್ವಲ್ಪ ಸಮಯ ಅವರ ಗಮನ ಬೇರೆ ಕಡೆ ಸರಿಯಿತು, ತಕ್ಷಣವೇ ನಾನು ಅವರ ನಡುವೆ ನುಸುಳಿಕೊಂಡು, ಅವನ ಕಾಲಿಗೆ ಒಂದು ಬಲವಾದ ಏಟು ಕೊಟ್ಟೆನು, ಅವನ ಪಾದವು ತುಂಡಾಗಿ ಹಾರಿ ಹೋಯಿತು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-246/365

ಅಷ್ಟರಲ್ಲಿ ಅಬೂಜಹಲ್’ನ ಮಗ ಇಕ್’ರಿಮ ಬಂದು ನನ್ನ ಭುಜಕ್ಕೆ ಒಂದು ಏಟು ಕೊಟ್ಟನು. ನನ್ನ ಕೈ ತುಂಡಾಗಿ ನೇತಾಡತೊಡಗಿತು, ನಾನು ಅದನ್ನು ಲೆಕ್ಕಿಸದೆ ಮುಂದಕ್ಕೆ ಹೋದಾಗ ಆ ನೇತಾಡುತಿದ್ದ ಕೈ ನನಗೆ ಭಾರವಾಗತೊಡಗಿತು. ಅದರ ಮೇಲೆ ನನ್ನ ಒಂದು ಹೆಜ್ಜೆಯನ್ನು ಇಟ್ಟು ಬೇರ್ಪಡಿಸಿ, ಪುನಃ ಮುಂದಕ್ಕೆ ಹೋದಾಗ, ಅವನು ಬೇರೆ ಕಡೆ ಓಡಿ ಹೋಗಿದ್ದನು. ನಾನು ಆ ಕ್ಷಣದಲ್ಲಿ ಅವನನ್ನು ಎದುರಿಸಲು ನನ್ನ ಕೈ ಇರುತ್ತಿದ್ದರೆ.? ಎಂದು ಅಂದುಕೊಂಡಿದ್ದೆನು. ಕೆಲವೊಂದು ಉಲ್ಲೇಖದ ಪ್ರಕಾರ, ಮುಆದ್ ಬಿನ್ ಅಂರ್’ರ ◌ؓ ಕೈಯನ್ನು ಪ್ರವಾದಿಯವರು ﷺ ತಮ್ಮ ಬಾಯಿಂದ ಪವಿತ್ರ ಲಾಲಾರಸವನ್ನು ತೆಗೆದು ಪುನಃ ಜೋಡಿಸಿ ಕೊಟ್ಟಿದ್ದರು ಎಂದು ಕಾಣಬಹುದು.
ಯುದ್ಧದ ನಂತರ ಅಬೂಜಹಲ್’ನ ಖಡ್ಗವನ್ನು ಪ್ರವಾದಿಯವರು ﷺ ಮುಆದಿಗೆ ಕೊಟ್ಟಿದ್ದರು, ಬದ್ರಿನ ನಂತರ ಬಹಳಷ್ಟು ಯುದ್ಧದಲ್ಲಿ ಭಾಗವಹಿಸಿದ ಅವರು ಉಸ್ಮಾನ್’ರ ಕಾಲದಲ್ಲಿ ಆಗಿತ್ತು ಮರಣ ಹೊಂದಿದ್ದು.

ಬದ್ರ್’ನಲ್ಲಿ ನಡೆದ ಅಪ್ರತಿಮ ತ್ಯಾಗದ ಹೋರಾಟವನ್ನಾಗಿತ್ತು ನಾವು ಕಂಡದ್ದು. ಆದರ್ಶದ ಆತ್ಮಶಕ್ತಿಯು ಯಾವ ರೀತಿ ಭೌತಿಕ ವೀಕ್ಷಣೆಗಳನ್ನು ಸೋಲಿಸಿತು ಎಂಬುದನ್ನು ಇತಿಹಾಸ ಕಲಿಸು ಕೊಡುತ್ತದೆ. ಅತ್ಯುತ್ತಮವಾದ ಸತ್ಯವಿಶ್ವಾಸವನ್ನು ಎತ್ತಿಹಿಡಿದಾಗ, ತನ್ನ ದೇಹಕ್ಕಾದ ನೋವನ್ನೂ ಕೂಡ ಮರೆತು ಹೋದ ಸುಂದರ ನಿಮಿಷಗಳನ್ನಾಗಿದೆ ಇತಿಹಾಸವು ನಮಗೆ ತಿಳಿಸಿ ಕೊಡುವುದು. ಇದ್ಯಾವುದೂ ಕಾದಂಬರಿಗಳಲ್ಲಿ ಬರುವ ಕಾಲ್ಪನಿಕ ಕಥೆಗಳಲ್ಲ, ಯಾವುದೇ ರೀತಿಯ ಕಲಬೆರಕೆಯಿಲ್ಲದೆ ನೈಜ ಇತಿಹಾಸವಾಗಿದೆ. ಬೇಕಿದ್ದರೆ ಮತ್ತೊಮ್ಮೆ ಓದಿ ನೋಡಿರಿ.

ಅಬೂಜಹಲ್’ನ ಅಂತ್ಯದ ಬಗ್ಗೆ ವಿವರಿಸುವ ಇನ್ನೊಂದು ಉಲ್ಲೇಖದಲ್ಲಿ, ಅಬ್ದು’ರಹ್ಮಾನ್ ಬಿನ್ ಔಫ್’ರು ಹೇಳುವುದು ಕಾಣಬಹುದು. ಬದ್ರ್’ರ ಹೋರಾಟದಲ್ಲಿ ನಾನು ಕೂಡ ಅಂದು ಬಾಗಿಯಾಗಿದ್ದೆ, ನನ್ನ ಸುತ್ತಮುತ್ತಲಿನಲ್ಲಿ ನಿಂತಿದ್ದದ್ದು ಎರಡು ಹದಿಹರೆಯದ ಮಕ್ಕಳಾಗಿದ್ದರು. ಅವರು ಸಣ್ಣ ಪ್ರಾಯದವರಾಗಿದ್ದ ಕಾರಣ ಅವರ ಖಡ್ಗವನ್ನು ಕತ್ತಿಗೆ ನೇತು ಹಾಕಲಾಗಿತ್ತು, ಅದನ್ನು ಕಂಡು ಈ ಮಕ್ಕಳ ನಡುವೆ ನಾನು ಬಾಕಿಯಾದೆ ಅಲ್ಲವೇ.? ಸ್ವಲ್ಪ ಪ್ರಾಯದಲ್ಲಿ ದೊಡ್ಡವರ ಬಳಿ ನಿಂತಿರುತಿದ್ದರೆ, ಸುರಕ್ಷಿತವಾಗಿ ಇರಬಹುದಿತ್ತು ಎಂದು ಆಲೋಚಿಸ ತೊಡಗಿದೆನು. ಹೀಗಿರುವಾಗ ಅವರಲ್ಲಿ ಒಬ್ಬನು ಮುಂದೆ, ಯಾ ಅಮ್ಮ್ (ಚಿಕ್ಕಪ್ಪ) ನಿಮಗೆ ಅಬೂಜಹಲ್ ಯಾರೆಂದು ಗೊತ್ತಿದೆಯ.? ಎಂದು ಕೇಳಿದಾಗ, ನಾನು ಹೌದು ಗೊತ್ತಿದೆ, ಯಾಕೆ.? ಅವನ ಬಗ್ಗೆ ತಿಳಿದು ನಿನಗೆ ಏನಾಗಬೇಕು.? ಎಂದು ಕೇಳಿದೆನು. ಅದಕ್ಕೆ ಆ ಹುಡುಗ, “ಅವನು ಪ್ರವಾದಿಯವರನ್ನು ﷺ ಅಪಹಾಸ್ಯ ಮಾಡಿರುವುದಾಗಿ ತಿಳಿಯಲು ಸಾಧ್ಯವಾಯಿತು, ಹಾಗಾಗಿ ಅಲ್ಲಾಹನಾಣೆ ಬಹುಶಃ ಅವನು ಸಿಕ್ಕರೆ.? ಇಬ್ಬರಲ್ಲಿ ಒಬ್ಬರು ಜೀವಂತವಾಗಿಯಂತೂ ಇರುವುದಿಲ್ಲ, ಒಂದೋ ಅವನನ್ನು ನಾನು ಸಾಯಿಸುತ್ತೇನೆ, ಇಲ್ಲದಿದ್ದರೆ ಅವನು ನನ್ನನ್ನು ಸಾಯಿಸುತ್ತಾನೆ, ಇದು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸಿ ಮಾಡಿದ ಒಪ್ಪಂದ” ಎಂದು ಹೇಳಿದನು. ಅದನ್ನು ಕೇಳಿ, ನಾನು ಆಶ್ಚರ್ಯದಿಂದ ಇನ್ನೊಬ್ಬನ ಕಡೆಗೆ ನೋಡಿದಾಗ, ಅವನೂ ಕೂಡ ಇದೆ ರೀತಿ ಬಹಳ ಶೌರ್ಯದ ಮಾತುಗಳನ್ನು ಆಡುತ್ತಿದ್ದನು. ಅದನ್ನು ಕೇಳಿ, ನನಗೆ ಬಹಳಷ್ಟು ಅಭಿಮಾನ ಆಯಿತು, ಎರಡು ಬೆಟ್ಟಗಳ ನಡುವೆಯೇನೋ.? ನಾನು ನಿಂತಿರುವುದು ಎಂಬ ಭಾವನೆ ಬರತೊಡಗಿದವು.

ಅಷ್ಟೊತ್ತಿಗೆ ಅವರ ಸಂಬಂಧಿಕರ ನಡುವೆ ನಿಂತಿದ್ದ ಅಬೂಜಹಲ್’ನ್ನು, ತೋರಿಸುತ್ತಾ ಅದೋ ಅಲ್ಲಿ ನೀವುಗಳು ಹುಡುಕುತ್ತಿರುವ ವ್ಯಕ್ತಿ ಎಂದು ತೋರಿಸಿ ಕೊಟ್ಟೆನು. ನಂತರ ಅವರು ಅವನನ್ನೇ ನೋಡುತ್ತಾ ನಿಂತಿದ್ದರು, ಅವಕಾಶ ಸಿಕ್ಕಿದ ಕೂಡಲೇ, ಅವರಿಬ್ಬರೂ ಅವನ ಮುಂದೆ ಜಿಗಿದು ಅವನ ಮೇಲೆ ದಾಳಿ ಮಾಡಿದರು. ಆ ಎರಡು ಸಾಹಸಿ ಮಕ್ಕಳು, ಹಾರಿಸಿನ ಮಕ್ಕಳಾದ ಮುಅವ್ವಿದ್ ◌ؓ ಹಾಗೂ ಮುಆದ್ ◌ؓ ಆಗಿದ್ದರು.
ಅಂರಿನ ಮಗನಾದ ಮುಆದ್ ◌ؓ ಅಬೂಜಹಲ್’ನ ಕಾಲಿಗೆ ದಾಳಿ ಮಾಡಿ ಕೆಳಗೆ ಬೀಳಿಸಿದನು, ಹಾರಿಸಿನ ಮಕ್ಕಳು ಅವನ ಮೇಲೆ ದಾಳಿ ಮಾಡಿ ಅವನ ಕಥೆಯನ್ನು ಮುಗಿಸಿದರು, ಅವನ ಕೊನೆಯುಸಿರು ಹೋದ ನಂತರ ಅಬ್ದುಲ್ಲಾಹಿಬಿನ್ ಮಸ್’ವೂದ್ ◌ؓ ತಲೆಯನ್ನು, ದೇಹದಿಂದ ಕತ್ತರಿಸಿ ಬೇರೆ ಮಾಡಿದರು
ಅತ್ಯಂತ ಅಹಂಕಾರಿಯಾದ ಒಬ್ಬ ವ್ಯಕ್ತಿಯ ಅಂತ್ಯ ಹೇಗಾಯಿತು ಎಂದು ತಿಳಿದುಕೊಂಡೆವು. ವಿನಾಕಾರಣ ಹೋರಾಟದ ಹೆಸರಿನಲ್ಲಿ ನೆತ್ತರು ಸುರಿಸುವುದು ಬೇಡ ಎಂದು, ಮುಸ್ಲಿಮರು ಹಾಗೂ ಅವನ ಗುಂಪಿನ ಬಹಳಷ್ಟು ಜನರು ಪ್ರಯತ್ನ ಪಟ್ಟರೂ, ಅಬೂಜಹಲ್ ಮಾತ್ರ ಯಾರ ಮಾತನ್ನೂ ಕೇಳದೆ ಅಹಂಕಾರಿಯಾಗಿ ವರ್ತಿಸಿದ್ದನು. ಕೇವಲ ಅವನೊಬ್ಬನ ಹಠದ ಕಾರಣದಿಂದ ಮಾತ್ರವಾಗಿತ್ತು ಈ ಯುದ್ಧ ನಡೆದದ್ದು ಎಂದು ಹೇಳಿದರೂ ತಪ್ಪಾಗಲಾರದು. ಪ್ರವಾದಿಯವರ ﷺ ವ್ಯಕ್ತಿತ್ವವನ್ನಾಗಲಿ, ಇಸ್ಲಾಮಿನ ಮಹತ್ವವನ್ನಾಗಲಿ ತಿಳಿಯದ ವ್ಯಕ್ತಿ ಆಗಿರಲಿಲ್ಲ, ಅಬೂಜಹಲ್’ನ, ಎಲ್ಲಿ ನಾನು ಇವರ ಮುಂದೆ ಸಣ್ಣವನಾಗಿ ಹೋಗುವೇನೋ.? ಎಂಬ ಅಹಂಕಾರವಾಗಿತ್ತು, ಅವನ ಇಂತಹ ಭೀಕರ ಅಂತ್ಯಕ್ಕೆ ಕಾರಣವಾದದ್ದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-247/365

ಅಬೂಜಹಲ್ ತನ್ನ ಕೊನೆಯುಸಿರು ಎಳೆಯುವ ದೃಶ್ಯವನ್ನು ಕಂಡ ಅಬ್ದುಲ್ಲಾಹಿ ಬಿನು ಮಸ್’ವೂದ್’ರು ◌ؓ ವಿವರಿಸುವುದು ಕಾಣಬಹುದು. ಬದ್ರ್ ಹೋರಾಟವು ಕಳೆದ ನಂತರ, ಯುದ್ಧಾನಂತರದ ವೀಕ್ಷಣೆಗೆ ಪ್ರವಾದಿಯವರು ﷺ ರಣರಂಗದಲ್ಲಿ ಅಬೂಜಹಲ್’ನ್ನು ಹುಡುಕುತ್ತಾ ಮುಂದೆ ಸಾಗುತ್ತಿದ್ದರು. ಆದರೆ ಅವರ ಕಣ್ಣಿಗೆ ಅಬೂಜಹಲ್ ಬಿದ್ದಿರಲಿಲ್ಲ, ಅದೇ ಬೇಸರದಲ್ಲಿ ಪ್ರವಾದಿಯವರು ﷺ ಈ ಸಮುದಾಯದ ಫರೋವನ ವಿಷಯದಲ್ಲಿ ನನ್ನನ್ನು ನಿರಾಸೆ ಮಾಡದಿರು ಪ್ರಭು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ನಂತರ ಅವನನ್ನು ಹುಡುಕಲು ಪ್ರವಾದಿಯವರು ﷺ ಆದೇಶ ನೀಡಿದಾಗ, ನಾವು ಹುಡುಕಲು ಆರಂಭಿಸಿದೆವು, ಸ್ವಲ್ಪ ಸಮಯದ ನಂತರ ನನಗೆ ಅವನು ಸಿಕ್ಕಿದನು. ಅವನು ತನ್ನ ಕೊನೆಯ ಕ್ಷಣದಲ್ಲಿ ಇದ್ದನು, ನಾನು ಅವನಿಗೆ ಕಾಲಲ್ಲಿ ಒದ್ದು, ಲೋ ಅಲ್ಲಾಹನ ಶತ್ರು ನಿನ್ನನ್ನು ಅಲ್ಲಾಹನು ಕೇವಲವಾಗಿ ನೋಡಿದನು ಅಲ್ವಾ.? ಎಂದು ಕೇಳಿದೆನು.

ಅದಕ್ಕೆ ಅವನು ತಕ್ಷಣವೇ, ನಾನು ಹೇಗೆ ಕೇವಲನಾಗುತ್ತೇನೆ.? ನೀವು ಯಾರನ್ನಾದರೂ ಸಾಯಿಸಿದರೆ.? ಅವನು ಕೇವಲನಾಗುತ್ತನೆಯೆ.? ಎಂದು ಅಹಂಕಾರದಿಂದಲೇ ಪುನಃ ಕೇಳಿದನು. ಕೃಷಿಕರಾಗಿದ್ದ ಮುಆದ್ ◌ؓ ಹಾಗೂ ಮುಅವ್ವಿದ್ ತನ್ನನ್ನು ಸೊಲಿಸಿದ್ದಕ್ಕೆ, ಅಬೂಜಹಲ್’ನ ಪ್ರತಿಷ್ಠೆಗೆ ಧಕ್ಕೆಯಾಗಿತ್ತು, ರೈತನಲ್ಲದ ಇನ್ಯಾರೇ ನನ್ನನ್ನು ಸಾಯಿಸಿದರೂ ಎಷ್ಟೋ ಚೆನ್ನಾಗಿತ್ತು ಎಂದು ಅವನು ಕೂಗಿ ಹೇಳಿದನು.

ನಿನ್ನನ್ನು ಅಲ್ಲಾಹನು ನಿಂದಿಸಲಿ ಎಂದು ಹೇಳಿ, ಜೋರಾಗಿ ಮತ್ತೊಮ್ಮೆ ಒದ್ದಾಗ, ಅವನು “ಲೋ ಸೇವಕಿಯ ಮಗನಾದ ಸೇವಕನೇ, ನೀನು ಇದು ಬೇಕಂತಲೇ ಸಮಸ್ಯೆಯನ್ನು ಎಳೆದು ಹಾಕುತ್ತಿದ್ದೀಯ.!” ಅಂತ ಹೇಳಿದಾಗ, ಏ ಮಗು ಗೆಲುವು ಯಾರಿಗೆ ಅಂತ ಗೊತ್ತಿದೆಯ ನಿನಗೆ.? ಅಲ್ಲಾಹನಿಗೂ, ಅವನ ಪ್ರವಾದಿಯವರಿಗೆ ﷺ ಆಗಿದೆ ಎಂದು ಇಬ್’ನು ಮಸ್’ವೂದ್’ರು ◌ؓ ಪುನಃ ಲೇವಡಿ ಮಾಡಿದರು.

ಮತ್ತೊಂದು ಉಲ್ಲೇಖದಲ್ಲಿ, ಇಬ್’ನು ಮಸ್’ವೂದ್’ರು ◌ؓ ಹೇಳುವುದು ಕಾಣಬಹುದು. ಇಬ್’ನು ಮಸ್’ವೂದ್’ರು ◌ؓ ಅಬೂಜಹಲ್’ನ ಬಳಿ ಬಂದು, “ನಿನ್ನನ್ನು ನಾನು ಸಾಯಿಸುತ್ತಿದ್ದೇನೆ” ಎಂದು ಹೇಳಿದಾಗ, ಅಬೂಜಹಲ್ ಅಹಂಕಾರದಿಂದ ಲೋ ಯಜಮಾನನ್ನು ಸಾಯಿಸುವ ಮೊದಲ ಸೇವಕ ನೀನೆ ಅಲ್ವೇನೋ.? ಆದರೆ ನೀನು ನನ್ನನ್ನು ಸಾಯಿಸ್ತಿದ್ದೀಯ ಎನ್ನುವುದೇ ನನಗೆ ಬಹಳ ಬೇಸರ ಉಂಟಾದದ್ದು. ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡವನೋ, ಉನ್ನತ ಮನೆತನದ ವ್ಯಕ್ತಿಯೋ ನನ್ನನ್ನು ಸಾಯಿಸಿದ್ದರೆ ಎಷ್ಟೋ ಒಳ್ಳೆದಿತ್ತು ಎಂದು ಹೇಳಿದನು.
ತನ್ನ ಕೊನೆಯ ಉಸಿರು ನಿಲ್ಲುವ ಸಂದರ್ಭದಲ್ಲಿಯೂ ಕೂಡ, ಅವನ ಒಳಗೆ ಇರುವ ಅಹಂಕಾರದ ಅಮಲು ಎಷ್ಟಿತ್ತು ಎಂಬುವುದು ಇದರಲ್ಲೇ ತಿಳಿಯುತ್ತದೆ. ಅವನ ಮನಸ್ಸಿನ ಒಳಗೆ ಇದ್ದ ನಾನೇ ಮೇಲೂ ಎಂಬ ಅಹಂ ಭಾವವನ್ನು ಕೊನೆಯ ಕ್ಷಣದ ವರೆಗೂ ಬಿಟ್ಟಿರಲಿಲ್ಲ. ಯಜಮಾನನ್ನೂ, ಸೇವಕನನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದಾರೆ ಎಂಬುದಾಗಿದೆ, ಅವನು ಪ್ರವಾದಿಯವರಲ್ಲಿ ﷺ ನೋಡುತ್ತಿದ್ದ ಕೊರತೆ. ಸೇವಕರ ಜೊತೆಯಲ್ಲಿ ಕುಳಿತು, ಆಹಾರ ಸೇವನೆ ಮಾಡುತಿದ್ದದ್ದು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಈ ಕೀಳು ಭಾವನೆಯೇ ಆಗಿತ್ತು, ಅವನ ಅಂತ್ಯವೂ ಕೂಡ ಇಷ್ಟೊಂದು ನೀಚ ಆಗಲು ಕಾರಣ.

ಇಬ್’ನು ಮಸ್’ವೂದ್’ರು ◌ؓ ಮಾತು ಮುಂದುವರಿಸುತ್ತಾ, ನಾನು ಅವನಿಗೆ ಬಲವಾದ ಏಟೋಂದನ್ನು ಕೊಟ್ಟೆನು, ಅದರಲ್ಲಿ ಅವನ ತಲೆ ಬೇರೆ ಬೇರೆ ಆಯಿತು, ನಂತರ ಅವನ ತಲೆಗೆ ಧರಿಸಿದ ಕವಚ, ದೇಹದ ಕವಚ, ಹಾಗೂ ಆಯುಧಗಳನ್ನು ಎತ್ತಿಕೊಂಡು ಪ್ರವಾದಿಯವರ ﷺ ಬಳಿ ಹೋಗಿ, ಪ್ರವಾದಿಯವರೇ ﷺ ಅಬೂಜಹಲ್’ನ ಕಥೆ ಮೂಗಿಯಿತು, ನೀವು ಸಂತೋಷ ಪಡಿ ಎಂದು ಹೇಳಿದಾಗ, ಪ್ರವಾದಿಯವರು ﷺ ಏನು ಈ ಮಾತು ಸತ್ಯವೇ ಅಬ್ದುಲ್ಲಾಹ್.? ಅವನ ಸಾವು ನನಗೆ ಕೆಂಪು ಒಂಟೆಗಿಂತಲೂ ಅತೀ ಇಷ್ಟವಾಗಿದೆ.
ಭರವಸೆ ನೀಡಿದ ಹಾಗೆ, ಅದನ್ನು ಪಾಲಿಸಿದ ಅಲ್ಲಾಹನಿಗಾಗಿದೆ ಸರ್ವ ಸ್ತುತಿ, ಈ ಸಮುದಾಯದ ಫರೋವನನ್ನು ಅವನು ಸಾಯಿಸಿದನು, ನನಗೆ ನೀಡಿದ ಭರವಸೆಯನ್ನು ಪಾಲಿಸಿದ ಒಡೆಯ ನೀನು ನನಗೆ, ನಿನ್ನ ಅನುಗ್ರಹವನ್ನು ವರ್ಷಿಸಿ ಕೊಡು ಎಂದು ಹೇಳಿದರು.

ಈ ಅಧ್ಯಾಯದಲ್ಲಿ ಕೆಲವು ವ್ಯತ್ಯಾಸಗಳಿರುವ ಇತರ ಉಲ್ಲೇಖಗಳನ್ನೂ ಕೂಡ ತಿಳಿಯಲಿದೆ. ಹಾಗಾಗಿ ಇನ್ನಷ್ಟು ಕೆಲವು ವ್ಯಾಖ್ಯಾನಗಳನ್ನು ತಿಳಿಯೋಣ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-248/365

ಮುಆವ್ವಿದ್’ರ ◌ؓ ಏಟನ್ನು ಎದುರಿಸಿ, ನರಳುತ್ತಾ ಬಿದ್ದಿದ್ದ ಅಬೂಜಹಲ್’ನ ಗಡ್ಡವನ್ನು ಹಿಡಿದು, ಇಬ್’ನು ಮಸ್’ವೂದ್’ರು ◌ؓ ನೀನು ಅಬೂಜಹಲ್ ಅಲ್ವಾ.? ಎಂದು ಕೇಳಿದರು. ನಂತರ ತನ್ನ ಕೈಯಲ್ಲಿದ್ದ ಹಳೆಯ ಖಡ್ಗದಿಂದ ಅವನ ತಲೆಯನ್ನು ಕತ್ತರಿಸಲು ಮುಂದಾದರು. ಆದರೆ ಖಡ್ಗ ಹರಿತವಿಲ್ಲದ ಕಾರಣ ಯಾವುದೇ ಪರಿಣಾಮ ಬೀರಲಿಲ್ಲ. ಅದನ್ನು ಕಂಡು ಅಬೂಜಹಲ್ ಖುದ್ದಾಗಿ ಅವನ ಹರಿತವಿರುವ ಖಡ್ಗವನ್ನು ಕೊಟ್ಟು ಇದರಲ್ಲಿ ನನ್ನ ತಲೆಯನ್ನು ಭುಜದ ಭಾಗದಿಂದ ಕತ್ತರಿಸು ಎಂದು ಹೇಳಿದಾಗ, ಇಬ್’ನು ಮಸ್’ವೂದ್’ರು ಆ ಖಡ್ಗವನ್ನು ತೆಗೆದು, ಅವನ ತಲೆಯನ್ನು ಭುಜದ ಹಿಂಭಾಗದಿಂದ ಕತ್ತರಿಸಿ ಪ್ರವಾದಿಯವರ ﷺ ಬಳಿ ಕೊಂಡು ಹೋಗಿ ಇಟ್ಟರು.

ಅವನ ತಲೆಯನ್ನು ಕಂಡು ಪ್ರವಾದಿಯವರು ﷺ, ನೀನೇ ಈ ತಲೆಯನ್ನು ಕತ್ತರಿಸಿದ್ದಾ.? ಎಂದು ಕೇಳಿದಾಗ, ಹೌದು ಪ್ರವಾದಿಯವರೇ ﷺ, ಅಲ್ಲಾಹನಾಣೆಗೂ ನಾನೇ ಅವನ ತಲೆಯನ್ನು ಕತ್ತರಿಸಿರುವೆನು ಎಂದು ಹೇಳಿ ಅವನ ತಲೆಯನ್ನು ಪ್ರವಾದಿಯವರ ﷺ ಬಳಿ ಇಟ್ಟರು. ಅದನ್ನು ಕಂಡು ಪ್ರವಾದಿಯವರು ﷺ ಅಲ್ಲಾಹನನ್ನು ಸ್ತುತಿಸುತ್ತಾ, ಅಲ್ಲಾಹನಿಗಾಗಿ ಎರಡು ರಕಾಅತ್ ನಮಾಝ್ ಮಾಡಿದರು.

ಇಮಾಮ್ ಹೈಸಮಿ ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಇಬ್’ನು ಮಸ್’ವೂದ್’ರು ಹೇಳುವುದು ಕಾಣಬಹುದು, ಬದ್ರ್’ನಲ್ಲಿ ಬಹಳಷ್ಟು ಗಾಯಗೊಂಡು ಬಿದ್ದಿದ್ದ ಅಬೂಜಹಲ್’ನ್ನು ಕಂಡು ಲೋ ಅಲ್ಲಾಹನ ಶತ್ರು.! ನಿನ್ನನ್ನು ಅಲ್ಲಾಹನು ನಿಂದಿಸಲಿ ಎಂದು ಹೇಳಿದೆನು. ಅದಕ್ಕೆ ಅವನು, ನಿಮ್ಮ ಕೈಯಿಂದ ಸಾಯಿಸಲ್ಪಟ್ಟರೆ.? ಅವರನ್ನು ನಿಂದಿಸಲ್ಪಟ್ಟ ವ್ಯಕ್ತಿ ಎಂದು ಕರೆಯುತ್ತಾರಾ.? ಎಂದು ಕೇಳಿದಾಗ, ನಾನು ಆ ಮಾತಿಗೆ ಗಮನ ಕೊಡದೆ ಅವನ ತಲೆಯನ್ನು ಕತ್ತರಿಸಲು ಮುಂದಾದಾಗ, ನನ್ನ ಖಡ್ಗ ಹರಿತವಿಲ್ಲದ ಕಾರಣ ಅವನ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಆದರೆ ಅವನ ಕೈಯಲ್ಲಿ ಹರಿತವಿರುವ ಖಡ್ಗವನ್ನು ಕಂಡು, ಅವನ ಕೈಗೆ ಬಲವಾದ ಏಟು ಕೊಟ್ಟೆನು. ಅವನ ಕೈಯಿಂದ ಖಡ್ಗ ಕೆಳಗೆ ಬಿದ್ದಾಗ, ಅದನ್ನು ಎತ್ತಿಕೊಂಡು
ಅವನ ತಲೆಯಲ್ಲಿದ್ದ ಕವಚವನ್ನು ಕಳಚಿ ಅವನ ಕತ್ತನ್ನು ಕತ್ತರಿಸಿದೆನು. ನಂತರ ತಕ್ಷಣವೇ ಅಲ್ಲಿಂದ ಪ್ರವಾದಿಯವರ ﷺ ಬಳಿ ಓಡಿ ಹೋಗಿ ಅವರಿಗೆ ವಿಷಯವನ್ನು ತಿಳಿಸಿದೆನು. ಅದಕ್ಕೆ ಪ್ರವಾದಿಯವರು ﷺ ಅಲ್ಲಾಹನಾಣೆಗೂ ನೀನು ಅವನನ್ನು ಕೊಂದೆಯ ಎಂದು ಕೇಳಿದಾಗ, ಹೌದು ನಾನು ಕೊಂದೆ ಎಂದು ಹೇಳಿದೆನು. ಹಾಗಿದ್ದರೆ ಇನ್ನೊಮ್ಮೆ ಹೋಗಿ ಅದನ್ನು ದೃಢೀಕರಿಸಿ ಬಾ ಎಂದು ಹೇಳಿ ಹಿಂದಕ್ಕೆ ಕಳುಹಿಸಿದರು, ನಾನು ಪುನಃ ಹೋಗಿ ನೋಡಿ ಬಂದು ಪ್ರವಾದಿಯವರಲ್ಲಿ ﷺ ಹೌದು ಎಂದು ಹೇಳಿದೆನು. ಸರಿ ಹಾಗಿದ್ದರೆ ನಾವು ಸ್ವಲ್ಪ ಮುಂದೆ ಹೋಗೋಣ ಎಂದು ಒಟ್ಟಿಗೆ ಹೆಜ್ಜೆ ಹಾಕುತ್ತಾ ಮುಂದೆ ಹೊರಟೆವು. ಹೀಗೆ ಅಬೂಜಹಲ್ ಸತ್ತು ಬಿದ್ದಿದ್ದ ಸ್ಥಳಕ್ಕೆ ಬಂದು ತಲುಪಿದೆವು, ಪ್ರವಾದಿಯವರು ﷺ ಅಬೂಜಹಲ್’ನ ಸತ್ತ ಶರೀರವನ್ನು ಕಂಡು “ಈ ಸಮುದಾಯದ ಫರೋವ ಆಗಿರುವನು ಇವನು” ಎಂದು ಹೇಳಿದರು.

ಇನ್ನೊಂದು ಉಲ್ಲೇಖದ ಪ್ರಕಾರ, ಕಾಲು ಕಳೆದುಕೊಂಡು ಬಿದ್ದಿದ್ದ ಅಬೂಜಹಲ್’ನ ಹತ್ತಿರ ನಾನು (ಇಬ್’ನು ಮಸ್’ವೂದ್) ತಲುಪಿದಾಗ, ಅವನು ಅವನ ಖಡ್ಗದಿಂದ ಜನರನ್ನು ಹತ್ತಿರ ಬರದ ಹಾಗೆ ತಡೆಯುತ್ತಿದ್ದನು. ನಾನು ಅದನ್ನು ಕಂಡು ಅಲ್ಲಾಹನನ್ನು ಸ್ತುತಿಸುತ್ತಾ ನನ್ನ ಕೈಯಲ್ಲಿದ್ದ ಹಳೆಯ ಖಡ್ಗದಿಂದ ಅವನ ಕೈಗೆ ಬಲವಾದ ಪೆಟ್ಟು ಕೊಟ್ಟೆನು. ಅದರಿಂದ ಅವನ ಕೈಯಲ್ಲಿದ್ದ ಖಡ್ಗ ನೆಲಕ್ಕೆ ಬಿದ್ದು ಬಿಟ್ಟಿತು, ನಾನು ಆ ಖಡ್ಗವನ್ನು ಎತ್ತಿ, ಅವನ ತಲೆಯಿಂದ ಕವಚವನ್ನು ಕಳಚಿ, ಅವನ ಕತ್ತನ್ನು ಸೀಳಿ ಅವನನ್ನು ಕೊಂದು ಬಿಟ್ಟೆನು. ನಂತರ ಅಲ್ಲಿಂದ ಓಡೋಡಿ ಬಂದು ಪ್ರವಾದಿಯವರಲ್ಲಿ ﷺ ವಿಷಯವನ್ನು ತಿಳಿಸಿದೆನು. ಆ ಮಾತನ್ನು ಕೇಳಿ ಪ್ರವಾದಿಯವರು ﷺ ನನ್ನಿಂದ ಮೂರು ಬಾರಿ ಆಣೆಪ್ರಮಾಣ ಹಾಕಿಸಿ, ಸತ್ಯ ತಿಳಿದ ನಂತರ ಪುನಃ ಅಬೂಜಹಲ್’ನ ಸತ್ತ ಶರೀರದ ಬಳಿ ಬಂದರು. ನಂತರ ಈ ಸಮುದಾಯದ ಫರೋವ ಆಗಿರುವನು ಇವನು ಎಂದು ಹೇಳುತ್ತಾ ಅವನ ಖಡ್ಗವನ್ನು ನನಗೆ ಉಡುಗೊರೆಯಾಗಿ ಕೊಟ್ಟರು.

ಇನ್ನೂ ಒಂದು ಉಲ್ಲೇಖದ ಪ್ರಕಾರ, ಇಬ್’ನುಮಸ್’ವೂದ್’ರು ◌ؓ ಹೇಳುವುದು ಕಾಣಬಹುದು. ಅಬೂಜಹಲ್’ನ್ನು ಕೊಂದ ವಿವರವನ್ನು ಪ್ರವಾದಿಯವರಿಗೆ ﷺ ತಿಳಿಸಿದಾಗ, ಶತ್ರು ಪಕ್ಷದಿಂದ ಬಂಧಿಸಿದ್ದ ಅಖೀಲ್ ಬಿನ್ ಅಖೀತ್ವಾಲಿಬ್ ಅಲ್ಲೇ ಪಕ್ಕದಲ್ಲಿ ನಿಂತಿದ್ದನು. ಅವನು ಆ ಮಾತನ್ನು ಕೇಳಿ, ಇಲ್ಲ ನೀನು ಸುಳ್ಳು ಹೇಳುತ್ತಿದ್ದೀಯ, ನೀನು ಅಬೂಜಹಲ್’ನ್ನು ಕೊಂದಿಲ್ಲ ಎಂದು ಹೇಳಿದನು.

ಅದಕ್ಕೆ ನಾನು, ಸುಳ್ಳು ಹೇಳುತ್ತಿರುವುದು ನೀನು ನಾನಲ್ಲ, ನಾನು ಈಗ ಅವನ ಕಥೆಯನ್ನು ಮುಗಿಸಿ ಬಂದಿದ್ದೇನೆ ಎಂದು ಹೇಳಿದಾಗ, ಅದಕ್ಕೆ ಸಾಕ್ಷಿ ಏನೆಂದು ಕೇಳಿದನು. ನಾನು ಅವನ ತೊಡೆಯ ಮೇಲೆ ಒಂಟೆಯ ಸರಪಳಿಯ ವೃತ್ತಾಕಾರದ ಗುರುತು ಇದೆ ಎಂದು ಹೇಳಿದಾಗ, ಹಾಗಿದ್ದರೆ ನೀನು ಹೇಳುವುದು ಸತ್ಯ ಆಗಿರಬಹುದು ಎಂದು ಹೇಳಿದನು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-249/365

ಬದ್ರ್ ರಣರಂಗದಲ್ಲಿ ಅಬೂಜಹಲ್’ನ ಬಗ್ಗೆ ತಿಳಿಯುವುದರ ನಡುವೆ ನಡೆದ ಒಂದು ಕುತೂಹಲಕಾರಿ ಸಂಗತಿ ನಡೆಯಿತು. ಪ್ರವಾದಿಯವರು ﷺ, ತಲೆಗಳಿಲ್ಲದ ಹೆಣದ ರಾಶಿಯಲ್ಲಿ ಅಬೂಜಹಲನ್ನು ಹುಡುಕಲು ನಾನೊಂದು ಗುರುತು ತಿಳಿಸುತ್ತೇನೆ ಎಂದು ಹೇಳುತ್ತಾ, ಬಾಲ್ಯದಲ್ಲಿ ನಾವಿಬ್ಬರೂ ಅಬ್ದುಲ್ಲಾಹಿಬಿನು ಜದ್’ಆನಿನ ತಟ್ಟೆಯ ಬಳಿ ಗಡಿಬಿಡಿಯಲ್ಲಿ ಚಲಿಸುತಿದ್ದಾಗ ಅವನು ಕೆಳಗೆ ಬಿದ್ದು ಬಿಟ್ಟನು. ಅಂದು ಅವನ ಮಂಡಿಗೆ ಗಾಯ ಆಗಿತ್ತು, ಆ ಗಾಯದ ಕಲೆ ಇವತ್ತಿಗೂ ಅವನ ಮಂಡಿಯಲ್ಲಿ ಹಾಗೆ ಇರಬಹುದು, ಅವನು ವಯಸ್ಸಿನಲ್ಲಿ ನನಗಿಂತ ಚಿಕ್ಕವನು ಆಗಿದ್ದನು ಎಂದು ಹೇಳಿದರು. ಬಹುಶಃ ಇಬ್’ನು ಮಸ್’ವೂದರು ಹೇಳಿದ ಆ ಗುರುತು ಕೂಡ ಇದೇ ಆಗಿರಬಹುದು.

ಅಬೂಜಹಲ್’ನ ಸಾವಿಗೆ ಸಂಬಂಧಿಸಿದಂತೆ, ಅಬ್ದುರಹ್ಮಾನ್ ಬಿನ್ ಔಫ್’ರ ◌ؓ ಉಲ್ಲೇಖದಲ್ಲಿ ಇರುವುದು ಕಾಣಬಹುದು, ಅಬೂಜಹಲ್’ನ್ನು ಸಾಯಿಸಿದೆವು ಎಂದು ಇಬ್ಬರು ಹದಿಹರೆಯದ ಯುವಕರು ಪ್ರವಾದಿಯವರ ﷺ ಬಳಿ ಬಂದು ಹೇಳಿದರು. ಪ್ರವಾದಿಯವರು ﷺ ಅವರಲ್ಲಿ ನಿಮ್ಮಿಬ್ಬರಲ್ಲಿ ಯಾರು ಅವನನ್ನು ಕೊಂದದ್ದು ಎಂದು ಕೇಳಿದಾಗ, ಇಬ್ಬರೂ ಕೂಡ ನಾನು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ನಿಮ್ಮ ಖಡ್ಗವನ್ನು ತೋರಿಸಿರಿ, ಅದನ್ನು ಒರೆಸಿಲ್ಲ ತಾನೇ.? ಎಂದು ಕೇಳಿದಾಗ, ಇಬ್ಬರೂ ತಮ್ಮ ಖಡ್ಗವನ್ನು ತೋರಿಸಿದರು. ಅದನ್ನು ನೋಡಿದ ಪ್ರವಾದಿಯವರು ﷺ ನೀವಿಬ್ಬರೂ ಅವನನ್ನು ಸಾಯಿಸಿದಿರಿ ಎಂದು ಹೇಳಿದರು.

ಅವರಿಬ್ಬರು ಬೇರೆ ಯಾರೂ ಆಗಿರದೆ ಮುಆದ್ ◌ؓ ಹಾಗೂ ಮುಆವ್ವಿದ್ ಆಗಿದ್ದರು. ಅವರನ್ನು ತಾಯಿಯ ಹೆಸರನ್ನು ಸೇರಿಸಿ, ಅಫ್ರಾಅ್’ರ ಮಕ್ಕಳು ಎಂದು ಅವರನ್ನು ಕರೆಯುತ್ತಿದ್ದರು. ಅವರ ತಂದೆ ಖಝ್’ರಜ್ ಜನಾಂಗದ ಹಾರಿಸ್ ಆಗಿದ್ದರು. ಅವರ ಇನ್ನೊಬ್ಬ ಮಗನಾದ ಔಫ್ ಕೂಡ ಬದ್ರ್ ಕಾಳಗದಲ್ಲಿ ಭಾಗವಹಿಸಿದ್ದರು.

ಔಫ್ ◌ؓ ಹಾಗೂ ಮುಆವ್ವಿದ್ ಬದ್ರ್ ರಣರಂಗದಲ್ಲೇ ಹುತಾತ್ಮರಾದರು ಎಂದೂ, ಮುಆದ್ ◌ؓ ರಣರಂಗದಲ್ಲಿ ಬಲವಾದ ಗಾಯಗೊಂಡು ಮದೀನಲ್ಲಿ ಮರಣ ಹೊಂದಿದರು ಎಂದೂ ಅಥವಾ ಅವರು ಉಸ್ಮಾನ್’ರ ಆಳ್ವಿಕೆಯವರೆಗೂ ಬದುಕಿದ್ದರು ಎಂದೂ ವಿಭಿನ್ನವಾದ ಅಭಿಪ್ರಾಯಗಳು ಇರುವುದು ಇತಿಹಾಸಗಳಲ್ಲಿ ಕಾಣಬಹುದು.
ಅಬೂಜಹಲ್’ಗೆ ಮೊದಲ ಏಟು ಕೊಟ್ಟದ್ದು, ಅಂರ್ ಬಿನ್ ಅಲ್ ಜಮೂಹಿನ ಮಗನಾದ ಮುಆದ್ ◌ؓ ಆಗಿದ್ದರು ಎಂಬ ಅಭಿಪ್ರಾಯವನ್ಮು ಈಗಾಗಲೇ ನಾವು ತಿಳಿದಿದ್ದೇವೆ. ಅವರು ಉಹುದ್ ರಣರಂಗದಲ್ಲಿ ಹುತಾತ್ಮರಾದರೂ ಎಂದೂ ಅಥವಾ ಉಸ್ಮಾನ್’ರ ◌ؓ ಆಳ್ವಿಕೆಯ ವರೆಗೆ ಬದುಕಿದ್ದರು ಎಂಬ ವಿಭಿನ್ನವಾದ ಅಭಿಪ್ರಾಯವನ್ನೂ ಇತಿಹಾಸದಲ್ಲಿ ಕಾಣಬಹುದು.

ಕೆಲವೊಂದು ಉಲ್ಲೇಖಗಳ ಆಳವಾದ ಅಧ್ಯಯನದ ನಂತರ ಡಾ ಮುಹಮ್ಮದ್ ಅಬ್ದುಯಮಾನಿಯವರು ನೀಡುವ ವಿವರಣೆಯಲ್ಲಿ ಕಾಣಬಹುದು, “ಮುಆದ್ ಬಿನ್ ಅಂರ್ ◌ؓ ಹಾಗೂ ಅಫ್ರಾಅ್’ರ ಎರಡು ಮಕ್ಕಳು ಸೇರಿ ಅಬೂಜಹಲ್’ನ ಮೇಲೆ ದಾಳಿ ಮಾಡಿ ಕೆಳಗೆ ಬೀಳಿಸಿದರು. ಕೊನೆಗೆ ಇಬ್’ನು ಮಸ್’ವೂದ್’ರು ◌ؓ ಅವನ ಕತ್ತನ್ನು ಕತ್ತರಿಸಿ ತನ್ನ ಜವಾಬ್ದಾರಿಯನ್ನು ಸಂಪೂರ್ಣಗೊಳಿಸಿದರು. ಈ ರೀತಿಯಾಗಿದೆ ಬಹಳಷ್ಟು ಹದೀಸ್ ವಿದ್ವಾಂಸರು ಅಭಿಪ್ರಾಯ ಪಟ್ಟಿರುವುದು.
ಅಪ್ರಾಅ್’ರ ಎರಡು ಮಕ್ಕಳು ಹುತಾತ್ಮರಾದಾಗ ಪ್ರವಾದಿಯವರು ﷺ, ಅವರಿಗೆ ಅಲ್ಲಾಹನು ಕರುಣೆ ನೀಡಲಿ ಎಂದು ಪ್ರಾರ್ಥಿಸುತ್ತಾ, ಅವರು ಸತ್ಯ ನಿಷೇಧಿಗಳ ನಾಯಕ ಹಾಗೂ ಈ ಸಮುದಾಯದ ಫರೋವನನ್ನು ಸಾಯಿಸಲು ಅವರು ಉತ್ತಮ ಪಾತ್ರವಹಿಸಿದರು ಎಂದು ಹೇಳಿದಾಗ, ಯಾರೋ ಒಬ್ಬರು, ಹಾಗಿದ್ದರೆ ಬೇರೆ ಯಾರೆಲ್ಲಾ ಇದ್ದರು ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಇಬ್’ನು ಮಸ್’ವೂದ್ ಹಾಗೂ ಮಲಕ್’ಗಳು ಎಂದು ಹೇಳಿದರು.
ಅಬೂಜಹಲ್’ನ ಯುದ್ಧ ಕವಚ ಅಥವಾ ಸಲಬ್’ನ್ನು ಮುಆದ್ ಬಿನ್ ಅಂರ್’ಗೆ ಆಗಿತ್ತೋ ನೀಡಿದ್ದು ಅಥವಾ ಅಬ್ದುಲ್ಲಾಹಿ ಬಿನ್ ಮಸ್’ವೂದ್’ರಿಗೆ ಆಗಿತೋ ನೀಡಿದ್ದು ಎಂಬುದರಲ್ಲಿ ಅಭಿಪ್ರಾಯ ವ್ಯತ್ಯಾಸವಿದೆ.

ಖುರೈಷಿಗಳ ಅತ್ಯುತ್ತಮ ನಾಯಕ, ಬಹಳ ಹೀನಾಯವಾಗಿ ಸಾವನ್ನಪ್ಪಿದ್ದು ಎದುರಾಳಿಗಳ ಆತ್ಮವಿಶ್ವಾಸವನ್ನೇ ಕುಗ್ಗಿಸಿತು. ಒಂದು ನಾಯಕನಿಲ್ಲದೆ ಅವರ ಸಂಪೂರ್ಣ ಸೈನ್ಯವೇ ಚೆಲ್ಲಾಪಿಲ್ಲಿಯಾಗ ತೊಡಗಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-250/365

ಮಕ್ಕಾದ ಪ್ರೀತಿಯ ಮಕ್ಕಳು ಇನ್ನೂ ಬಹಳಷ್ಟು ಮಂದಿ ಬಾಕಿ ಇದ್ದರು. ಬದ್ರ್’ನಲ್ಲಿ ಸಾಯುವ ವ್ಯಕ್ತಿಗಳೆಂದು ಮುನ್ಸೂಚನೆ ನೀಡಿದ್ದ ವ್ಯಕ್ತಿಗಳು ಇನ್ನೂ ಬಾಕಿ ಇದ್ದರು, ಇನ್ನೂ ನಮಗೆ ಸ್ವಲ್ಪ ಅದರ ಬಗ್ಗೆ ತಿಳಿಯೋಣ.

ಬದ್ರ್’ನಲ್ಲಿ ಖುರೈಷಿಗಳ ನಾಯಕರಲ್ಲಿ ಪ್ರಮುಖನಾಗಿದ್ದ ಉಮಯ್ಯತ್ ಬಿನ್ ಕಲಫ್’ನ ಬಗ್ಗೆ ಸ್ವಲ್ಪ ತಿಳಿಯೋಣ. ಉಮಯ್ಯತ್’ನ ಹಳೆಯ ಸ್ನೇಹಿತನಾಗಿದ್ದ ಅಬ್ದುರಹ್ಮಾನ್ ಬಿನ್ ಔಫ್’ರು ◌ؓ ಹೇಳುವುದು ಕಾಣಬಹುದು, ಅಬ್ದುರಹ್ಮಾನ್ ಬಿನ್ ಔಫ್’ರ ಹಿಂದೆ ಇದ್ದ ಹೆಸರು ಅಬ್ದು ಅಂರ್ ಅಂದರೆ ಅಂರ್’ನ ಸೇವಕ ಎಂದು ಅರ್ಥ. ಈ ಹೆಸರನ್ನು ಪ್ರವಾದಿಯವರು ﷺ ಇಸ್ಲಾಮ್ ಸ್ವೀಕರಿಸಿದ ನಂತರ ಅಲ್ಲಾಹನ ಸೇವಕ ಎಂಬ ಅರ್ಥದಲ್ಲಿ ಅಬ್ದುರಹ್ಮಾನ್ ಎಂದು ಬದಲಾಯಿಸಿದ್ದರು. ಆದರೆ ಉಮಯ್ಯತ್’ಗೆ ಈ ಹೆಸರು ಇಷ್ಟವಾಗಿರಲಿಲ್ಲ, ಅವನು ಇಬ್’ನು ಔಫ್’ರಲ್ಲಿ ◌ؓ ನಿನಗೆ ನಿನ್ನ ತಂದೆ ನೀಡಿದ ಹೆಸರು ಬೇಡವಾಯಿತು ಅಲ್ವಾ.? ಎಂದು ಕೇಳಿದಾಗ, ಇಬ್’ನು ಔಫ್ ◌ؓ ಹೌದು ಎಂದು ಹೇಳಿದರು.

ಇನ್ನೊಮ್ಮೆ ಉಮಯ್ಯತ್, ನಿನ್ನನ್ನು ನಾನು ಹಳೆಯ ಹೆಸರಿನಿಂದ ಕರೆದಾಗ ನೀನು ಪ್ರತಿಕ್ರಿಯೆ ನೀಡುದಿಲ್ಲ ಅಲ್ವಾ.? ನಿನ್ನ ಹೊಸ ಹೆಸರು ಕರೆಯಲು ನನಗೆ ಇಷ್ಟವಿಲ್ಲ, ಅಷ್ಟೇ ಅಲ್ಲದೆ ಅರ್ರಹ್ಮಾನ್ ಅಂತೆ, ಯಮಾಮದ ಕಳ್ಳ ಪ್ರವಾದಿತ್ವದ ಘೋಷಣೆ ಮಾಡಿದವನ ಹೆಸರು ಕೂಡ ಅರ್ರಹ್ಮಾನ್ ಅಂತಾನೆ, ಹಾಗಿದ್ದರೆ ಅವನ ದಾಸ ಅಂತನೂ ಹೇಳಬಹುದು ಅಲ್ವಾ.? ಹಾಗಾಗಿ ನನಗೆ ನಿನ್ನನ್ನು ಕರೆಯಲು ಬೇರೆ ಹೆಸರು ಬೇಕು ಎಂದು ಇಬ್’ನು ಔಫ್’ರಲ್ಲಿ ◌ؓ ಕೇಳಿದಾಗ, ಕೊನೆಗೆ ದೇವನ ದಾಸ ಎಂಬ ಅರ್ಥದಲ್ಲಿ ಅಬ್ದುಲ್ ಇಲಾಹ್ ಎಂದು ಕರೆಯಲು ಸಮ್ಮತಿ ನೀಡಿದರು. ಪಲಾಯನದ ನಂತರವೂ ಕೂಡ ಅವರಿಬ್ಬರ ನಡುವೆ ಪತ್ರಗಳಲ್ಲಿ ಸಂದೇಶಗಳ ರವಾನೆಯಾಗುತ್ತಿತ್ತು, ಅದರಲ್ಲಿ ಅವರು ನೀನು ಮಕ್ಕಾದಲ್ಲಿರುವ ನನ್ನ ಸಂಬಂಧಿಕರನ್ನು ಚೆನ್ನಾಗಿ ನೋಡಿ ಕೊಂಡರೆ, ಮದೀನದಲ್ಲಿರುವ ನಿನ್ನ ಸಂಬಂಧಿಕರನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಬರೆಯುತ್ತಿದ್ದರು.

ಇಷ್ಟೊಂದು ನಿಕಟ ಸಂಬಂಧವಿದ್ದ ಇಬ್’ನು ಔಫ್ ◌ؓ, ಬದ್ರ್ ರಣರಂಗದಲ್ಲಿ ಬಿದ್ದಿದ್ದ ಕವಚವನ್ನು ಎತ್ತಿ ಹೋಗುತ್ತಿರುವ ಸಂದರ್ಭದಲ್ಲಿ, ಎದುರು ಉಮಯ್ಯತ್ ಹಾಗೂ ಅವನ ಮಗನು ನಿಂತಿದ್ದರು, ಅವರು ಇಬ್’ನು ಔಫ್’ರನ್ನು ಅಬ್ದು ಅಂರ್ ಎಂದು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ನಂತರ ಅಬ್ದುಲ್ ಇಲಾಹ್ ಮುಂದೆ ಕರೆದಾಗ ಇಬ್’ನು ಔಫ್ ತಿರುಗಿ ನಿಂತರು. ತಕ್ಷಣವೇ, ಉಮಯ್ಯತ್ ನಿನಗೆ ನನಗಾಗಿ ಏನಾದ್ರೂ ಮಾಡಬಹುದೇ.? ನೀನು ಈ ಕೊಂಡು ಹೋಗುತ್ತಿರುವ ವಸ್ತುಗಳಿಗಿಂತ ಒಳ್ಳೆಯದು ನಾವೇ ಆಗಿರುತ್ತೇವೆ, ನಮ್ಮನ್ನು ಬಂಧಿಸಿ ಕರೆದುಕೊಂಡು ಹೋಗು ಎಂದು ಹೇಳಿದಾಗ, ಇಬ್’ನು ಅವರನ್ನು ಬಂಧಿಸಿ ಕರೆದುಕೊಂಡು ಹೋದರು. ಯುದ್ಧ ಖೈದಿಗಳನ್ನು ಬಂಧಿಸಿ ಕರೆದುಕೊಂಡು ಹೋಗುವುದು ಕೂಡ, ಹೋರಾಟದ ಭಾಗವಾಗಿದೆ. ಹಾಗೆ ಬಂಧಿಸಿದ ಖೈದಿಗಳಿಗೆ ಕೆಲವೊಮ್ಮೆ ಶಿಕ್ಷೆ ಅಥವಾ ಕೆಲವು ನಿಬಂಧನೆಗಳೊಂದಿಗೆ ಮೋಚನೆ ಅಥವಾ ಮೋಚನೆ ಮೌಲ್ಯಗಳನ್ನು ಪಡೆದು ಬಿಡುಗಡೆ ಆಗಿತ್ತು, ಇದನ್ನು ತೀರ್ಮಾನಿಸುವುದು ಆಡಳಿತಾಧಿಕಾರಿ ಅಥವಾ ಇಮಾಮ್, ಆಡಳಿತ ಮಂಡಳಿ ಆಗಿರುತ್ತಿತ್ತು.
ಹೀಗೆ ಉಮಯ್ಯತ್ ಹಾಗೂ ಅವನ ಮಗನನ್ನು ಬಂಧಿಸಿ ಇಬ್’ನು ಔಫ್ ಮುಂದಕ್ಕೆ ಹೋಗುತ್ತಿದ್ದಾಗ, ಉಮಯ್ಯತ್ ಇಂತಹ ಒಂದು ದಿನ ನನ್ನ ಜೀವನದಲ್ಲಿ ಯಾವತ್ತೂ ಬಂದಿಲ್ಲ ಎಂದು ಹೇಳಿದನು.

ಹೀಗೆ ಬಂಧಿಸಿ ಕರೆದುಕೊಂಡು ಹೋಗುವಾಗ ಅವರ ನಡುವೆ ಕೆಲವು ಮಾತುಕತೆಗಳು ನಡೆದಿದ್ದವು. ಹಳೆಯ ಸ್ನೇಹಿತನೊಂದಿಗೆ ಮುಂದೆ ಹೋಗುತ್ತಿರುವ ಸಂದರ್ಭದಲ್ಲಿ ಬಿಲಾಲ್’ರು ◌ؓ ರೊಟ್ಟಿ ಮಾಡಲು ಗೋದಿಹಿಟ್ಟು ಬೆರೆಸುತಿದ್ದರು, ಅದನ್ನು ಕಂಡು ಬಿಲಾಲ್’ರು ಕೈ ತೊಳೆದು, ತನ್ನ ಖಡ್ಗವನ್ನು ಎತ್ತಿ ಹಿಡಿದು “ಅವನು ರಕ್ಷೆ ಹೊಂದಿ ನಾನು ಗೆಲ್ಲಲು ಸಾಧ್ಯವಿಲ್ಲ” ಎಂದು ಹೇಳಿದರು. ತಾನು ಸತ್ಯವಿಶ್ವಾಸವನ್ನು ಅಂಗೀಕರಿಸಿದ ಕಾರಣಕ್ಕೆ, ಸುಡು ಬಿಸಿಲಿನ ಮರಳಿನಲ್ಲಿ ಮಲಗಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಉಮಯ್ಯತ್’ನಿಗೆ ಪಾಠ ಕಲಿಸಲು ಅವಕಾಶ ಸಿಕ್ಕಿದ ಆವೇಶದಲ್ಲಿ ಆಗಿದ್ದರು ಬಿಲಾಲ್’ರು. ◌ؓ

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-251/365

ಇಬ್’ನು ಔಫ್’ರು ◌ؓ ಬಿಲಾಲ್’ರಲ್ಲಿ ◌ؓ, ಈಗ ಉಮಯ್ಯತ್ ಹಾಗೂ ಅವನ ಮಗ ಇಬ್ಬರೂ ನನ್ನ ಖೈದಿಗಳಾಗಿ ಇರುವರು. ಹಾಗಾಗಿ ಅವರಿಗೆ ಯಾವುದೇ ತೊಂದರೆ ನೀಡದಿರು ಎಂದು ಕೂಗಿ ಹೇಳಿದಾಗ, ಬಿಲಾಲ್’ರಿಗೆ ◌ؓ ಅದನ್ನೆಲ್ಲಾ ಕೇಳುವಷ್ಟು ತಾಳ್ಮೆ ಇರಲಿಲ್ಲ, ಅವರು ತಿರುಗಿ “ಓ ಅಲ್ಲಾಹನ ಸಹಾಯಕರೇ, ಇಲ್ಲಿ ಸತ್ಯ ನಿಷೇಧಿಗಳ ಉಮಯ್ಯತ್ ಇದ್ದಾನೆ” ಎಂದು ಹೇಳಿದ ಕೂಡಲೇ ಸ್ವಹಾಬಿಗಳು ಓಡೋಡಿ ಬಂದು ಅವರನ್ನು ಸುತ್ತುವರಿದರು. ಇದರ ಬಗ್ಗೆ ಇಬ್’ನು ಔಫ್’ರು ಹೇಳುವುದು ಕಾಣಬಹುದು, ನಾನು ಬಹಳಷ್ಟು ತಡೆಯಲು ಪ್ರಯತ್ನ ಮಾಡಿದನು ಕೊನೆಗೆ ಉಮಯ್ಯತ್’ನ ಮಗನನ್ನು ಅವರಿಗೆ ಬಿಟ್ಟು ಕೊಟ್ಟೆನು, ಕಾರಣ ಅವನ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಉಮಯ್ಯತ್’ನ್ನು ಆದ್ರೂ ರಕ್ಷಿಸೋಣ ಎಂದು ಆದರೆ ಅದೂ ಕೂಡ ಸಾಧ್ಯವಾಗಲಿಲ್ಲ. ನಿಮಿಷಾರ್ಧದಲ್ಲಿ ಮಗನ ಕಥೆಯನ್ನು ಮುಗಿಸಿ ಉಮಯ್ಯತ್’ನ ಬಳಿ ಬಂದು ನಿಂತು, ಪುನಃ ನಮ್ಮನ್ನು ಸುತ್ತುವರಿದರು. ಅಷ್ಟರಲ್ಲಿ ಉಮಯ್ಯತ್ ಅಟ್ಟಹಾಸದಿಂದ ಕೋಗರೆಯಲು ಆರಂಭಿಸಿದನು, ನಾನು ಅವನಲ್ಲಿ ಕ್ಷಮಿಸು ಇನ್ನೂ ನನ್ನಿಂದ ನಿನಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮುಗಿಸುವಷ್ಟರಲ್ಲಿ ಅವನ ಕಥೆಯೂ ಸಂಪೂರ್ಣವಾಗಿ ಮುಗಿದು, ಅವನು ತುಂಡು ತುಂಡಾಗಿ ಕತ್ತರಿಸಿದ ರೀತಿಯಲ್ಲಿ ನೆಲಕ್ಕುರುಳಿ ಬಿದ್ದನು.
ಸತ್ಯ ನಿಷೇಧಿಗಳ ಇನ್ನೊಂದು ಸ್ಥಂಬವು ಕೂಡ ನೆಲಕ್ಕೆ ಬಿತ್ತು, ರಣರಂಗದಲ್ಲಿ ತಕ್’ಬೀರ್’ನ ಧ್ವನಿಗಳು ಮುಗಿಲು ಮುಟ್ಟಿದವು.

ಉಮಯ್ಯತ್’ನ ಕೊನೆಯ ಕ್ಷಣದ ಬಗ್ಗೆ ವಿವರಿಸುವ ಇನ್ನೊಂದು ಉಲ್ಲೇಖದಲ್ಲಿ ಇಬ್’ನು ಔಫ್ ◌ؓ ಹೇಳುವುದು ಕಾಣಬಹುದು, ಬದ್ರ್ ರಾತ್ರಿಯಲ್ಲಿ ನಾನು ಉಮಯ್ಯತ್’ನ ಜೊತೆಯಲ್ಲಿ ನಡೆದು ಮುಂದೆ ಸಾಗಿದ್ದೆನು, ಗುಡ್ಡದ ಮೇಲೆ ಎಲ್ಲಿಯಾದರೂ ಸುರಕ್ಷಿತ ಸ್ಥಳದಲ್ಲಿ ಅಡಗಿಸಿಡುವ ಉದ್ದೇಶದಿಂದ ಆಗಿತ್ತು ಅದು. ಆದರೆ ಅದು ಬಿಲಾಲ್’ರ ◌ؓ ಕಣ್ಣಿಗೆ ಬಿದ್ದಿತು, ಅದನ್ನು ಕಂಡು ಬಿಲಾಲ್’ರು ಅನ್ಸಾರ್’ಗಳನ್ನು ಕರೆದು “ಬಹುಶಃ ಉಮಯ್ಯತ್ ರಕ್ಷೆ ಹೊಂದಿದರೆ ನಾನು ಗೆದ್ದೆ ಎಂದು ಹೇಗೆ ಹೇಳುವುದು” ಎಂದು ಹೇಳಿದರು. ಅದನ್ನು ಕೇಳಿ ಅನ್ಸಾರ್’ಗಳು ಬಿಲಾಲ್’ರ ◌ؓ ಜೊತೆ ಸೇರಿ ನಮ್ಮನ್ನು ಹಿಂಬಾಲಿಸಲು ಮುಂದಾದರು. ಅವರು ನಮ್ಮ ಬಳಿ ತಲುಪುತ್ತಿದ್ದಂತೆ, ಉಮಯ್ಯತ್’ನ ಮಗನಾದ ಅಲಿಯನ್ನು ಅವರಿಗೆ ಬಿಟ್ಟು ಕೊಟ್ಟೆನು, ಅವರು ಅವನೊಂದಿಗೆ ಹೋರಾಡುವ ಸಂದರ್ಭದಲ್ಲಿ ನಮಗೆ ತಪ್ಪಿಸಲು ಸಮಯ ಸಿಗಬಹುದು ಎಂಬ ಉದ್ದೇಶದಿಂದ ಆಗಿತ್ತು ಅದು. ಆದರೆ ನಿಮಿಷಾರ್ಧದಲ್ಲಿ ಅವನ ಕಥೆಯನ್ನು ಮುಗಿಸಿ, ಪುನಃ ಅವರ ಗುಂಪು ನಮ್ಮನ್ನು ಹಿಂಬಾಲಿಸಲು ಆರಂಭಿಸಿದರು. ಹುಬಾಬ್ ಬಿನ್ ಮುಂದಿರ್ ಎಂಬ ವ್ಯಕ್ತಿಯು ಉಮಯ್ಯತ್’ನ ಕಾಲಿಗೆ ಒಂದು ಏಟು ಕೊಟ್ಟು ಕೆಳಗೆ ಬೀಳಿಸಿದರು. ಅಮ್ಮಾರ್ ಬಿನ್ ಯಾಸಿರ್ ಅದನ್ನು ತುಂಡರಿಸಿ ಬೇರೆ ಬೇರೆ ಮಾಡಿದರು. ಇನ್ನೂ ಹೇಗೆ ನಾವು ರಕ್ಷೆ ಹೊಂದುವುದು ಎಂದು ಆಲೋಚಿಸುತ್ತಾ ಕೊನೆಗೆ ಅವನನ್ನು ನೆಲದಲ್ಲಿ ಮಲಗಿಸಿ ಅವನ ಮೇಲೆ ನಾನು ಮಲಗಿದೆನು. ಆದರೆ ದಪ್ಪಗಾತ್ರದ ಶರೀರದವನಾಗಿದ್ದ ಉಮಯ್ಯತ್’ನ್ನು ಬಿಲಾಲ್ ಹಾಗೂ ◌ؓ ಅವರ ಗುಂಪು ನೋಡಿ, ಅದೇ ರೀತಿಯಲ್ಲೇ ಉಮಯ್ಯತ್’ನ ದೇಹದೊಳಗೆ ಖಡ್ಗವನ್ನು ತುರುಕಿಸಿದರು. ಇದರ ನಡುವೆ ನನ್ನ ಕಾಲಿಗೂ ಕೂಡ ಸಣ್ಣ ಗಾಯ ಉಂಟಾಗಿತ್ತು.
ನಂತರದ ಕಾಲದಲ್ಲಿ ಈ ಗಾಯವನ್ನು ಇಬ್’ನು ಔಫ್’ರು ◌ؓ ಇತರರಿಗೆ ತೋರಿಸುತ್ತಿದ್ದರು.

ಉಮಯ್ಯತ್ತನ್ನು ಎದುರಿಸುತ್ತಿದ್ದವರ ಸಾಲಿನಲ್ಲಿ ಖುಬೈಬ್ ಬಿನ್ ಯಸಾಫ್ ◌ؓ ಕೂಡ ಇದ್ದರು. ಮೊದಲು ಉಮಯ್ಯತ್ ಖುಬೈಬ್’ರ ಕೈಯನ್ನು ಕತ್ತರಿಸಿದ್ದನು, ನಂತರ ಪ್ರವಾದಿಯವರ ﷺ ಮುಅ್’ಜಿಝತ್ತಿನ (ಪವಾಡ) ಮೂಲಕ ಅದನ್ನು ಪೂರ್ವ ಸ್ಥಳಕ್ಕೆ ಜೋಡಿಸಿದರು. ಆ ನೆನಪು ಕೂಡ ಖುಬೈಬ್’ರಿಗೆ ◌ؓ ಬಂದಿತು, ಅವರು ಮುಂದೆ ಬಂದು ನಾನು ಯಸಾಫಿನ ಮಗ ಎಂದು ಹೇಳುತ್ತಾ, ಉಮಯ್ಯತ್’ನ ಕತ್ತಿನ ಬಳಿ ಮತ್ತೊಂದು ಏಟನ್ನು ಕೊಟ್ಟು, ಅವನ ಕವಚವನ್ನು ಸೊಂಟದ ವರೆಗೆ ಸೀಳಿ ಅದನ್ನು ಹಾಗೂ ಅವನ ಬಳಿಯಿದ್ದ ಇತರ ಆಯುಧಗಳನ್ನು ಎತ್ತಿ ಹಿಂದಕ್ಕೆ ಹೋದರು.

ಬಿಲಾಲ್’ರ ◌ؓ ಈ ಮಧ್ಯಸ್ಥಿಕೆಯ ಬಗ್ಗೆ, ಇಬ್’ನು ಔಫ್’ರು ◌ؓ “ಬಿಲಾಲಿಗೆ ಅಲ್ಲಾಹು ಕರುಣೆ ನೀಡಲಿ.! ಅವರು ನನ್ನ ಕವಚವನ್ನೂ ನಷ್ಟಗೊಳಿಸಿದರು, ಖೈದಿಗಳನ್ನೂ ಕೈತಪ್ಪುವಂತೆ ಮಾಡಿದರು” ಯಾಕೆಂದರೆ ನಾನು ರಣರಂಗದಲ್ಲಿ ಕವಚವನ್ನು ಶೇಖರಿಸುತ್ತಿದ್ದ ಸಂದರ್ಭದಲ್ಲಾಗಿತ್ತು ನಾನು ಉಮಯ್ಯತ್’ನ್ನು ಬಂಧಿಸಿದ್ದು ಎಂದು ಹೇಳಿದರು.

ಗತಕಾಲದ ಕರ್ಮದ ಫಲವಾಗಿತ್ತು ಖುರೈಷಿಗಳಿಗೆ ಬದ್ರ್’ನಲ್ಲಿ ಸಿಕ್ಕಿದ್ದು. ಕಾಲವು ಅವರಿಗಾಗಿ ಕಾಯ್ದಿರಿಸಿದ್ದ ಉಡುಗೊರೆಯಾಗಿತ್ತು ಸತ್ಯ ನಿಷೇಧಿಗಳಿಗೆ ರಣರಂಗದಲ್ಲಿ ಸಿಕ್ಕಿದ್ದು.
ಉಮಯ್ಯತ್’ಗೆ ಲಭಿಸಿದ ಶಿಕ್ಷೆಯ ಬಗ್ಗೆ, ಅರಬಿ ಕವಿಗಳು ವಿವರಿಸಿದ್ದು ಈ ರೀತಿಯಾಗಿತ್ತು.
“ಇನ್ ಖದ್ದ ಳಹ್’ರು ವಲಿಯ್ಯಿಲ್ಲಾಹಿ ಮಿನ್ ದುಬ್ರಿ
ಖದ್ ಖುದ್ದ ಖಲ್’ಬು ಅದುವ್ವಿಲ್ಲಾಹಿ ಮಿನ್ ಖುಬ್’ಲಿ”
(ಹಿಂಬದಿಯಿಂದ ಅಲ್ಲಾಹನ ಮಿತ್ರನ ಬೆನ್ನನ್ನು ಚುಚ್ಚಿ ನೊಯಿಸಿದರೆ, ಈಗ ಮುಂಭಾಗದಿಂದ ಅಲ್ಲಾಹನ ಶತ್ರುವಿನ ಹೃದಯವನ್ನು ಭೇದಿಸಿ ಕಥೆ ಮುಗಿಸಿಲಾಗಿದೆ)

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-252/365

ಬದ್ರ್’ನ ರಣರಂಗದಲ್ಲಿ ಉಮಯ್ಯತ್’ನ ಹಾಗೆ ದಾರುಣವಾಗಿ ಅಂತ್ಯವಾದ ಮತ್ತೊಂದು ವ್ಯಕ್ತಿಯಾಗಿದ್ದರು ನೌಫಲ್ ಬಿನ್ ಖುವೈಲಿದ್. “ಖುರೈಷಿಗಳೇ ಇಂದು ಗೆಲುವಿನ ಹಾಗೂ ಹೆಮ್ಮೆಯ ದಿನವಾಗಿದೆ” ಎಂದು ಯುದ್ಧದ ಆರಂಭದಲ್ಲಿ ಕೂಗಿ ಹೇಳಿದ್ದು ಇದೇ ವ್ಯಕ್ತಿ ಆಗಿದ್ದರು. ಆ ಸಮಯದಲ್ಲಿ ಪ್ರವಾದಿಯವರೇ ﷺ ಖುದ್ದಾಗಿ “ಅಲ್ಲಾಹನೇ, ನೌಫಲ್ ಬಿನ್ ಖುವೈಲಿದ್’ನ್ನು ನನ್ನ ಅಧೀನಕ್ಕೆ ಒಳಪಡಿಸಿ ಕೊಡು ಎಂದು ಪ್ರಾರ್ಥಿಸಿದ್ದರು” ಎಂದು.

ಅವನು ಬಹಳ ವೀರಾವೇಶದಿಂದ ರಣರಂಗದಲ್ಲಿ ಹೊರಾಡುತ್ತಿದ್ದನು. ಸತ್ಯ ನಿಷೇಧಿಗಳಿಗೆ ಸೋಲಾಗುವುದು ಖಂಡಿತ ಎಂದು ಅರ್ಥವಾದಾಗ ಅವನಿಗೆ ಭಯ ಆರಂಭಿಸಿತು. ಅವನು ಅನ್ಸಾರಿಗಳನ್ನು ಕರೆದು, “ನಮ್ಮ ರಕ್ತ ನಿಮಗೆ ಯಾಕೆ.? ನೀವು ಕತ್ತರಿಸಿ ಹಾಕುತ್ತಿರುವುದು ನಿಮಗೆ ಕಾಣುವುದಿಲ್ಲವೇ.? ನೀವು ಹಾಲು ಅಥವಾ ಒಂಟೆಗಳನ್ನು ಮೋಚನೆ ಮೌಲ್ಯಗಳಾಗಿ ಬಯಸುತ್ತೀರೆ.?” ಎಂದು ಕೇಳಿದನು.

ತಕ್ಷಣವೇ ಅಬ್ಬಾರು ಬಿನ್ ಸಖ್’ರ್ ◌ؓ ಅವನನ್ನು ಬಂಧಿಸಿ ಅವನನ್ನು ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಎದುರುಗಿದ್ದ ಅಲಿಯವರನ್ನು ◌ؓ ಕಂಡು ಅವನ ಕಾಲ ಕೆಳಗಿನ ಭೂಮಿ ಕುಸಿದ ಅನುಭವ ಆಗಿ, ಖಂಡಿತವಾಗಿಯೂ ಆ ವ್ಯಕ್ತಿಯೂ ನನ್ನನ್ನು ಈಗ ಸಾಯಿಸುತ್ತಾರೆ ಅದು ಯಾರು ಅಲ್ಲಿ ನಿಂತಿರುವುದು ಎಂದು ಕೇಳಿದಾಗ, ಅದು ಅಲಿಯಾಗಿರುವರು ಎಂಬ ಉತ್ತರ ಕೇಳಿ ಬಂದಿತು. ಮರುಕ್ಷಣವೇ ಅಲಿಯವರ ◌ؓ ಖಡ್ಗ ಅವನನ್ನು ಸೀಳಿ, ಅವನ ಎರಡು ಕಾಲುಗಳು ತುಂಡರಿಸಿದ ಸ್ಥಿತಿಯಲ್ಲಿ ಅವನು ನೆಲಕ್ಕೆ ಉರುಳಿ ಬಿದ್ದನು.
ನಂತರ ಪ್ರವಾದಿಯವರು ﷺ ನೌಫಲ್’ನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತೆ.? ಎಂದು ಕೇಳಿದಾಗ, ಅಲಿಯವರು ◌ؓ ಅವನ ಕಥೆ ಮುಗಿಸಿದೆನು ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ ಸಂತೋಷದಿಂದ ತಕ್’ಬೀರ್ ಹೇಳಿ, ಅವನ ವಿಷಯದಲ್ಲಿ ಪ್ರಾರ್ಥನೆ ಕೇಳಿದ ಅಲ್ಲಾಹನಿಗಾಗಿದೆ ಸರ್ವಸ್ತುತಿ ಎಂದು ಅಲ್ಲಾಹನಿಗೆ ಕೃತಜ್ಞತೆ ತಿಳಿಸಿದರು.

ಪ್ರಾರ್ಥನೆ ಹಾಗೂ ಕಾರ್ಯಾಚರಣೆ ಎರಡೂ ಕೂಡ ಒಟ್ಟಿಗೆ ನಡೆಯುತ್ತಿರುವ ವಿಭಿನ್ನವಾದ ಚಿತ್ರಣವಾಗಿದೆ ಇಲ್ಲಿ ನಮಗೆ ಕಾಣಲು ಸಾಧ್ಯವಾಗುವುದು. ಒಂದು ಕಡೆಯಲ್ಲಿ ಪರಿಶ್ರಮದ ಪ್ರಾಮುಖ್ಯತೆ ಹಾಗೂ ಅದಕ್ಕೆ ಪ್ರತಿಫಲವನ್ನು ತಿಳಿಸುತ್ತಿದ್ದರೆ.? ಇನ್ನೊಂದು ಭಾಗದಲ್ಲಿ ಅಲ್ಲಾಹನಲ್ಲಿ ನಿರಂತರವಾಗಿ ಸಹಾಯ ಕೇಳುತ್ತಲೇ ಇರುವರು.

ಕೆಲವರು ಯಾವುದೇ ಹೋರಾಟ ಮಾಡದೆ ಸೋಲನ್ನು ಒಪ್ಪಿಕೊಂಡರೆ, ಕೆಲವರು ಭೀಕರವಾಗಿ ಹೋರಾಡಿ ಸೋಲನ್ನು ಎದುರಿಸುತ್ತಿದ್ದರು, ಕೆಲವರು ಹೋರಾಟದಲ್ಲಿ ಸಾವನ್ನಪ್ಪುತಿದ್ದರು. ಇದರಲ್ಲಿ ಯಾವುದೇ ಘಟನೆ ನಡೆದರೂ ಅಲ್ಲಾಹನನ್ನು ಸ್ತುತಿಸಿ, ಇದೆಲ್ಲವೂ ಅಲ್ಲಾಹನ ಉದಾರತೆಯಾಗಿದೆ ನಮ್ಮ ವಿಶ್ವಾಸ ಎಂದು ಹೇಳುತ್ತಿದ್ದರು.

ಇಲ್ಲಿ ಕೆಲವರು ಕೇಳಬಹುದು, ಎಲ್ಲವೂ ಅಲ್ಲಾಹನ ಉದಾರತೆ ಆಗಿದ್ದರೆ.? ಮೊದಲೇ ಎಲ್ಲರನ್ನೂ ಯಾವುದೇ ಕಾಳಗ ಇಲ್ಲದೆ ಸತ್ಯವಿಶ್ವಾಸದಲ್ಲಿ ಸೇರಿಸಬಹುದಿತ್ತು ಅಲ್ವಾ.? ಅಥವಾ ಎಲ್ಲಾ ಸತ್ಯ ನಿಷೇಧಿಗಳನ್ನು ಸಾಯುವ ಹಾಗೆ ಮಾಡಬಹುದಿತ್ತು ಅಲ್ವಾ.? ಅಬೂಜಹಾಲ್’ನಂತವರಲ್ಲಿ ಹೋರಾಡುವ ಅಗತ್ಯ ಆದ್ರೂ ಏನಿತ್ತು ಎಂದು.?
ಇಸ್ಲಾಮಿನ ಬಗ್ಗೆ, ಇಸ್ಲಾಮಿನ ಆಚಾರ ವಿಚಾರಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡವರಿಗೆ ಇದರಲ್ಲಿ ಯಾವುದೇ ಸಂಶಯವಿಲ್ಲ, ಕಾರಣ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಕೆಲವು ವಿಷಯಗಳಿವೆ.

ಒಂದು, ಅಲ್ಲಾಹನು ಸಾರ್ವಭೌಮನಾಗಿರುವನು, ಹೀಗಿರುವಾಗ ಅವನು ಏನೇ ಮಾಡಿದರೂ, ಮಾಡದಿದ್ದರೂ, ಅವನನ್ನು ಕೇಳುವವರು ಯಾರೂ ಇಲ್ಲ, ಯಾಕೆಂದರೆ ಅವನಿಗೆ ಅವನದೆಯಾದ ಕಾರಣಗಳಿವೆ.
ಅದರ ಜೊತೆಗೆ, ಸೃಷ್ಟಿಕರ್ತನಾದ ಅವನು, ಜಗತ್ತಿನಲ್ಲಿ ಕೆಲವೊಂದು ನೀತಿ ನಿಬಂಧನೆಗಳನ್ನು ಇಟ್ಟಿರುವನು. ಅದರ ಎಲ್ಲಾ ಸಾರ್ವಭೌಮತ್ವವೂ ಕೂಡ ಅವನ ಕೈಯಲ್ಲೇ ಆಗಿದೆ, ಕೆಲವೊಮ್ಮೆ ಆ ನಿಬಂಧನೆಗಳ ಮೂಲಕ ಕೆಲವೊಂದು ಕಾರ್ಯಗಳನ್ನು ಮಾಡಿ ಕೊಡುವನು. ಆಗಲೂ ಕೃತಜ್ಞತೆಗೆ ಅರ್ಹನು ಅಲ್ಲಾಹನು ಮಾತ್ರ, ಅದಕ್ಕೆ ಅಲ್ಲವೇ.? ನೀರು ಕುಡಿದು ದಾಹವನ್ನು ತಣಿಸಿದ ಹೇಳುವುದು “ಅಲ್ ಹಂದುಲಿಲ್ಲಾಹ್” ಎಂದು. ಕೆಲವೊಮ್ಮೆ ಅವನು ನಮ್ಮ ದಾಹವನ್ನು ಅಸಹಜವಾಗಿ ನಿವಾರಿಸುವನು ಆಗಲೂ ಸ್ತುತಿಸಬೇಕಾದದ್ದು ಅಲ್ಲಾಹನನ್ನು ಮಾತ್ರ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-253/365

ನಾವು ಪುನಃ ರಣರಂಗಕ್ಕೆ ಮರಳೋಣ. ಖುರೈಷಿಗಳ ನಾಯಕರು ಒಂದೊಂದಾಗಿ ಸಾಯುತ್ತಾ ಇರುವ ಹಾಗೆ, ಅವರ ಮನೋಬಲ ಕುಗ್ಗುತ್ತಾ ಹೋಗುತ್ತಿತ್ತು. ಕೆಲವರು ಯುದ್ಧದಿಂದ ಹಿಂತಿರುಗಿ ಓಡಿದರೆ, ಇನ್ನೂ ಕೆಲವರು ಭಯದಿಂದ ಕಂಗಾಲಾಗಿ ಹೋಗಿದ್ದರು. ಮಧ್ಯಾಹ್ನದ ವೇಳೆಗೆ ರಣರಂಗದ ಸಂಪೂರ್ಣ ದೃಶ್ಯವೇ ಖುರೈಷಿಗಳ ವಿರುದ್ಧವಾಗಿತ್ತು. ಸತ್ಯ ನಿಷೇಧಿಗಳ ನಾಯಕರಲ್ಲಿ ಮೇಲೆ ತಿಳಿಸಿದ ಜನರ ಜೊತೆಯಲ್ಲಿ ಇನ್ನೂ ಬಹಳಷ್ಟು ಜನರು ಅಂದರೆ, ರಬೀಅತುಬಿನ್ ಅಲ್ ಅಸ್’ವದ್, ಆಮಿರ್ ಬಿನ್ ಅಲ್’ಹಳ್’ರಮಿ, ಉಬೈದತ್ ಬಿನ್ ಸಈದ್, ಆಸ್ವ್’ಬಿನ್ ಮುನಬ್ಬಿಹ್, ನಬೀಹ್ ಬಿನ್ ಅಲ್ ಹಜ್ಜಾಜ್, ಮುನಬ್ಬಿಹ್ ಬಿನ್ ಅಲ್ ಹಜ್ಜಾಜ್, ಆಮಿರ್ ಬಿನ್ ಕಅಬ್, ಮಸ್’ವೂದ್ ಬಿನ್ ಉಮಯ್ಯ, ಹಾರಿಸ್ ಬಿನ್ ರಬೀಅಃ, ಅಖೀಲ್ ಬಿನ್ ಅಸ್’ವದ್ ಹಾಗೂ ಉಮೈರ್ ಬಿನ್ ಉಸ್’ಮಾನ್ ಮುಂತಾದ ನಾಯಕರು ರಣರಂಗದಲ್ಲೇ ಸಾವನ್ನಪ್ಪಿದ್ದರು.

ಇನ್ನೂ ಬಹಳಷ್ಟು ಜನರು ತಮ್ಮ ಆಯುಧಗಳನ್ನು ನೆಲದಲ್ಲಿಟ್ಟು ಶರಣಾದರು, ಹೋರಾಟವು ಸಮಾಪ್ತಿಯಾಯಿತು. ಪ್ರವಾದಿಯವರು ﷺ ಯುದ್ಧದ ಗತಿಗಳನ್ನು ನೋಡಲು, ಹಾಗೂ ರಣರಂಗದಲ್ಲಿ ಸಿಕ್ಕಿದ ಸಂಪತ್ತುಗಳನ್ನು ಶೇಖರಿಸಲು ಅನುಚರರನ್ನು ನಿಯೋಗಿಸಿ, ಅದಕ್ಕಾಗಿ ಅಬ್ದುಲ್ಲಾಹಿಬಿನು ಕಅಬ್’ರಿಗೆ ◌ؓ ಅದರ ಜವಾಬ್ದಾರಿ ನೀಡಿದರು. ಬದ್ರ್ ರಣರಂಗದಲ್ಲೇ ಅಸರ್ ನಮಾಝ್ ನಿರ್ವಹಿಸಿ, ಆಸ್ವೀಸ್ ಕಾಣಿವೆಯ ಮೂಲಕ ಅಲ್ಲಿಂದ ತಮ್ಮ ಯಾತ್ರೆಯನ್ನು ಆರಂಭಿಸಿ, ಸೂರ್ಯಾಸ್ತಕ್ಕೂ ಮುನ್ನ ಒಂದು ಒಳ್ಳೆಯ ಸ್ಥಳವನ್ನು ಗುರುತಿಸಿ ಅಲ್ಲಿಯೇ ಡೇರೆ ಹಾಕಿದರು. ಯುದ್ಧದಲ್ಲಿ ಮುಸ್ಲಿಮರಿಗೆ ಗೆಲುವೆ ಸಿಕ್ಕಿದ್ದರೂ, ಬಹಳಷ್ಟು ಜನರಿಗೆ ಗಾಯಗಳಾಗಿದ್ದ ಕಾರಣ ಅವತ್ತಿನ ರಾತ್ರಿಯನ್ನು ಅಲ್ಲೇ ಕಳೆಯುವ ತೀರ್ಮಾನ ಮಾಡಲಾಯಿತು. ಪ್ರವಾದಿಯವರು ﷺ ತಮ್ಮ ಅನುಚರರನ್ನು ಕರೆದು, ಇವತ್ತು ನಮಗೆ ಯಾರಾದ್ರೂ ಕಾವಲಿಗೆ ನಿಲ್ಲಬೇಕು ಅಲ್ಲವೇ.? ಎಲ್ಲರೂ ನಿದ್ರಿಸಿದರೆ ಮತ್ತೆ ಯಾರಾದ್ರೂ ಎದುರಾಳಿಗಳು ಅಡಗಿ ಕುಳಿತು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ತಕ್ಷಣಕ್ಕೆ ಯಾರೂ ಉತ್ತರಿಸಿದಿದ್ದರೂ, ಸ್ವಲ್ಪ ಸಮಯದ ನಂತರ ದಖ್’ವಾನ್ ಬಿನ್ ಖೈಸ್ ◌ؓ ಎದ್ದು ನಿಂತರು. ಪಂಜಿನ ಮಂದವಾದ ಬೆಳಕಿನಲ್ಲಿ ಪ್ರವಾದಿಯವರಿಗೆ ﷺ ಅವರ ಪರಿಚಯ ಸಿಗಲಿಲ್ಲ, ಹಾಗಾಗಿ ಯಾರೆಂದು ಕೇಳಿದಾಗ, ಅವರು ತಮ್ಮ ಹೆಸರು ಹೇಳಿದರು. ಪ್ರವಾದಿಯವರು ﷺ ಅವರಲ್ಲಿ ಕುಳಿತುಕೊಳ್ಳಲು ಹೇಳಿದಾಗ, ಇನ್ನೊಬ್ಬ ವ್ಯಕ್ತಿ ಎದ್ದು ನಿಂತರು. ಅದು ಯಾರೆಂದು ಕೇಳಿದಾಗ, ಇಬ್’ನು ಅಬ್ದು ಖುವೈಸ್ ◌ؓ ಎಂದು ಹೇಳಿದರು. ಅವರಲ್ಲಿಯೂ ಪ್ರವಾದಿಯವರು ﷺ ಕುಳಿತುಕೊಳ್ಳಲು ಹೇಳಿದ ನಂತರ ಮೂರನೆದಾಗಿಯು ಒಬ್ಬರು ಎದ್ದು ನಿಂತಾಗ, ಅವರು ತನ್ನ ಹೆಸರು ಅಬೂ ಸಬಅ್ ◌ؓ ಎಂದು ಹೇಳಿದರು, ಅವರಲ್ಲಿಯೂ ಪ್ರವಾದಿಯವರು ﷺ ಕುಳಿತುಕೊಳ್ಳಲು ಹೇಳಿದರು. ಸ್ವಲ್ಪ ಸಮಯದ ನಂತರ ಈ ಮೂವರನ್ನು ಕರೆದು ನೀವು ಮೂವರು ಕಾವಲು ನಿಲ್ಲಿರಿ ಎಂದು ಹೇಳಿದಾಗ ದಖ್’ವಾನ್ ◌ؓ ಒಬ್ಬರೇ ಎದ್ದು ನಿಂತರು. ಬಾಕಿ ಇಬ್ಬರು ಎಲ್ಲಿ ಎಂದು ಕೇಳಿದಾಗ, ಪ್ರವಾದಿಯವರಲ್ಲಿ ﷺ ಮೂರು ಬಾರಿ ಎದ್ದು ನಿಂತದ್ದು ನಾನೇ ಆಗಿದ್ದೆನು, ನೀವು ಮೂರು ಬಾರಿ ಕೇಳಿದಾಗಳೂ ನಾನು ನನ್ನ ಬೇರೆ ಬೇರೆ ಹೆಸರನ್ನು ಹೇಳಿದ್ದೆನು ಎಂದು ಹೇಳಿದರು.
ದಖ್’ವಾನ್’ರ ಧೈರ್ಯವನ್ನು ಕಂಡು ಪ್ರವಾದಿಯವರು ﷺ ಅವರಿಗೆ ಕಾವಲು ನಿಲ್ಲಲು ಅವಕಾಶ ನೀಡಿ, ಅಲ್ಲಾಹನು ನಿಮಗೆ ಕಾವಲು ನೀಡಲಿ ಎಂದು ಆಶೀರ್ವಾದಿಸಿ ಅವರನ್ನು ಕಳುಹಿಸಿದರು.

ಸ್ವಯಂ ತ್ಯಾಗದ ಬಹಳಷ್ಟು ಸುಂದರ ದೃಶ್ಯಗಳನ್ನಾಗಿದೆ ಬದ್ರ್ ರಣರಂಗವು ನಮಗೆ ತೋರಿಸಿ ಕೊಟ್ಟದ್ದು. ಆಸ್ತಿ, ಸಂಪತ್ತು, ಪ್ರಾಣ ಎಲ್ಲವನ್ನೂ ಯಾವುದೇ ಮೋಹವಿಲ್ಲದೆ ಕೇವಲ ಅಲ್ಲಾಹನಿಗಾಗಿ ಮಾತ್ರ ಸಮರ್ಪಣೆ ಮಾಡಿದ ಸುಂದರ ದೃಶ್ಯಗಳು. ತಮ್ಮ ನಾಯಕನ ಕೂದಲಿಗೂ ನೋವಾಗದ ರೀತಿಯಲ್ಲಿ ಸಂಪೂರ್ಣವಾಗಿ ಕಾವಲು ಕಾಯುತ್ತಿದ್ದ ಅನುಚರರು ಒಂದು ಕಡೆಯಾದರೆ, ಪ್ರಪಂಚದಲ್ಲಿ ಯಾರಿಗೂ ಸಿಕ್ಕಿರದ ಅತ್ಯುತ್ತಮ ನಾಯಕ ಮತ್ತೊಂದೆಡೆ. ಯೋಚನಾ ಶಕ್ತಿಗೂ ನಿಲುಕದ ಮುಂದಾಲೋಚನೆ ಮಾಡುವ, ಆಕಾಶ ಲೋಕದಿಂದ ಸೂಚನೆಗಳನ್ನು ಪಡೆಯುವ ಉತ್ತಮವಾದ ನಾಯಕತ್ವ. ಇದೆಲ್ಲವೂ ಒಟ್ಟು ಸೇರಿದ ಒಂದು ಅತ್ಯುತ್ತಮ ತಂಡಕ್ಕೆ ಅಲ್ಲಾಹನು ಉಡುಗೊರೆಯಾಗಿ ನೀಡಿದ ಗೆಲುವಾಗಿದೆ ಬದ್’ರ್. ಬದ್ರ್ ಈಗ ಕೇವಲ ಒಂದು ಊರಿನ ಹೆಸರು ಮಾತ್ರವಾಗಿರದೆ, ಗೆಲುವಿನ ಪರ್ಯಾಯ ಪದವಾಗಿ ಮಾರ್ಪಟ್ಟಿದೆ. ಬದ್ರ್ ಎಂಬ ಪದದ ಅರ್ಥ ಹುಣ್ಣಿಮೆ ಚಂದ್ರ ಎಂದಾಗಿದೆ, ಮನುಷ್ಯ ಕುಲದ ಹುಣ್ಣಿಮೆ ಚಂದ್ರ ಪುಣ್ಯ ಪ್ರವಾದಿಯರಾಗಿರುವರು ಬದ್’ರಿನ ನಿಜವಾದ ನಾಯಕ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-254/365

ಬದ್’ರಿನ ಕಣಿವೆಗೆ ಪ್ರವಾದಿಯವರ ﷺ ಅವಿಸ್ಮರಣೀಯ ವಿಷಯಗಳನ್ನು ತಿಳಿಸಲಿದೆ. ಮಹಾತ್ಮರಾದ ತಮ್ಮ ಸ್ವಹಾಬಗಳಿಗೆ (ಅನುಚರರು) ಆತ್ಮಧೈರ್ಯ ತುಂಬಿದ ಸ್ಥಳವು ಕೂಡ ಇದೆ ಆಗಿತ್ತು. ಉಕ್ಕಾಶರು ◌ؓ ಬಹಳ ಶೌರ್ಯದಿಂದ ರಣರಂಗದಲ್ಲಿ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಬಹಳಷ್ಟು ಜನರನ್ನು ಕತ್ತನ್ನು ಸೀಳಿ ಹೊರಾಡುತ್ತಿರುವಾಗ ಅವರ ಖಡ್ಗವು ತುಂಡಾಯಿತು. ಖಡ್ಗವಿಲ್ಲದ ಕಾರಣ ಯುದ್ಧದಿಂದ ಹಿಂದೆ ಸರಿಯುವುದಾಗಲಿ, ಬೇಸರದಿಂದ ಕೂರುವುದಾಗಲಿ ಸಮಯವಿಲ್ಲ ಎಂದು, ತಕ್ಷಣವೇ ಓಡಿ ಪ್ರವಾದಿಯವರಲ್ಲಿ ﷺ ನಡೆದ ಘಟನೆಯನ್ನು ತಿಳಿಸಿದರು. ಪ್ರವಾದಿಯವರು ﷺ ಸಮಾಧಾನ ಪಡಿಸುತ್ತಾ ಅಲ್ಲೇ ಪಕ್ಕದಲ್ಲಿದ್ದ ಕಟ್ಟಿಗೆ ತುಂಡನ್ನು ಉಕ್ಕಾಶರಿಗೆ ◌ؓ ಕೊಟ್ಟು, ಅದರಲ್ಲಿ ಯುದ್ಧ ಮಾಡಲು ಹೇಳಿದರು. ಉಕ್ಕಾಶರು ◌ؓ ಅದನ್ನು ಸಂತೋಷದಿಂದ ಎತ್ತಿ ರಣರಂಗಕ್ಕೆ ವಾಪಸ್ಸು ಹೋದರು. ಅವರಿಗೆ ಅದರಲ್ಲಿ ಯಾವುದೇ ಬೇಸರವಿರಲಿಲ್ಲ, ಇದರಿಂದ ಏನಾಗಬಹುದು ಎಂಬ ಚಿಂತೆಯೂ ಇರಲಿಲ್ಲ, ನೋಡ ನೋಡುತ್ತಲೇ ಆ ಕಟ್ಟಿಗೆ ತುಂಡು ಹರಿತವಿರುವ, ಹೊಳೆಯುವ ಉಕ್ಕಿನ ಖಡ್ಗವಾಗಿ ಮಾರ್ಪಟ್ಟಿತು.

ಬದ್ರ್ ಯುದ್ಧದ ನಂತರವೂ ಅದನ್ನು ಉಳಿಸಿಕೊಂಡಿದ್ದರು ಧರ್ಮಭ್ರಷ್ಟರೊಂದಿಗೆ ನಡೆದ ಹೋರಾಟದವರೆಗೆ ಅವರು ಎಲ್ಲಾ ಯುದ್ಧದಲ್ಲಿ ಇದೆ ಖಡ್ಗವನ್ನು ಬಳಸಿದ್ದರು. ಅವರು ಈ ಯುದ್ದದ್ದಲ್ಲೇ ಆಗಿತ್ತು ಹುತಾತ್ಮರಾಗಿದ್ದೂ ಕೂಡ. ಉಕ್ಕಾಶರು ◌ؓ ಪ್ರವಾದಿಯವರ ಮುನ್ಸೂಚನೆ ಸಿಕ್ಕಿದ ಅನುಚರ ಆಗಿದ್ದರು. ಒಮ್ಮೆ ಪ್ರವಾದಿಯವರು ﷺ “ನನ್ನ ಸಮುದಾಯದಿಂದ ಎಪ್ಪತ್ತು ಸಾವಿರ ಜನರು ಹುಣ್ಣಿಮೆ ಚಂದಿರನಂತೆ ಹೊಳೆಯುವ ರೀತಿಯಲ್ಲಿ ಸ್ವರ್ಗಕ್ಕೆ ಪ್ರವೇಶ ಮಾಡುವರು, ಅವರಲ್ಲಿ ಯಾವುದೇ ವಿಚಾರಣೆ ಇರುವುದಿಲ್ಲ, ಅವರು ಇಸ್ಲಾಮಿಗೆ ವಿರುದ್ಧವಾದ ಕಾರ್ಯಗಳನ್ನು ಮಾಡದವರು, ಮಾಡಿಸದವರು ಆಗಿರುತ್ತಾರೆ” ಎಂದು ಹೇಳಿದ ತಕ್ಷಣವೇ, ಉಕ್ಕಾಶ ◌ؓ ಎದ್ದು ನಿಂತು ನನ್ನನ್ನು ಕೂಡ ಆ ಗುಂಪಿನಲ್ಲಿ ಸೇರಿಸಲು ನೀವು ಪ್ರಾರ್ಥನೆ ಮಾಡುವಿರ ಪ್ರವಾದಿಯವರೇ ﷺ ಎಂದು
ಕೇಳಿದಾಗ, ಪ್ರವಾದಿಯವರು ಅದೇ ರೀತಿ “ನೀನು ಉಕ್ಕಾಶರನ್ನು ◌ؓ ಅವರ ಸಾಲಿನಲ್ಲಿ ಸೇರಿಸು ಪ್ರಭು” ಎಂದು ಪ್ರಾರ್ಥಿಸಿದರು. “ನೀನು ಅವರ ಸಾಲಿನಲ್ಲಿ ಈಗಲೇ ಸೇರಿರುತ್ತೀಯ ಉಕ್ಕಾಶ ◌ؓ” ಎಂದು ಪ್ರವಾದಿಯವರು ﷺ ಹೇಳಿದ ಉಲ್ಲೇಖವನ್ನೂ ಕಾಣಬಹುದು.
ಇದನ್ನು ಕೇಳಿ ಇನ್ನೊಬ್ಬರು ಎದ್ದು ನಿಂತು, ನನ್ನನ್ನು ಕೂಡ ಸೇರಿಸಬಹುದೇ ಎಂದು ಕೇಳಿದಾಗ, ಪ್ರವಾದಿಯವರು ﷺ “ಸಬಖಕ ಬಿಹಾ ಉಕ್ಕಾಶ” (ನಿಮ್ಮನ್ನು ಉಕ್ಕಾಶ ◌ؓ ದಾಟಿ ಹೋಗಿದ್ದಾರೆ) ಎಂದು ಹೇಳಿದರು.

ಪ್ರವಾದಿಯವರ ﷺ ಅವಿಸ್ಮರಣೀಯವಾದ ಇನ್ನೂ ಕೆಲವು ಘಟನೆಯ ಬಗ್ಗೆ ತಿಳಿಯೋಣ, ರಣರಂಗದಲ್ಲಿ ಹೋರಾಟದ ನಡುವೆ, ಬಾಣ ತಾಗಿ ರಿಫಾಅತ್ ಬಿನ್ ಮಾಲಿಕಿಯವರ ◌ؓ ಕಣ್ಣಿಗೆ ಬಲವಾದ ಗಾಯವಾಗಿತ್ತು. ಪ್ರವಾದಿಯವರು ﷺ ತಮ್ಮ ಪವಿತ್ರ ಜೊಲ್ಲು ರಸವನ್ನು ತೆಗೆದು ಅವರ ಕಣ್ಣಿಗೆ ಸವರಿ ವಾಸಿಯಾಗಳು ಪ್ರಾರ್ಥಿಸಿದರು. ಮರುಕ್ಷಣವೇ ವಿಸ್ಮಯಕಾರಿಯಾಗಿ ಕಣ್ಣಿನ ಗಾಯವು ವಾಸಿಯಾಯಿತು, ನಂತರದ ದಿನಗಳಲ್ಲಿ ಒಂದೇ ಒಂದು ಬಾರಿಯೂ ಕೂಡ ಆ ಕಣ್ಣಿಗೆ ರೋಗ ಬಾಧಿಸಿರಲಿಲ್ಲ.
ಖುಬೈಬ್ ಬಿನ್ ಅಬ್ದುರಹ್ಮಾನ್’ರ ತಾತ ಖುಬೈಬ್’ರು ◌ؓ ಬದ್ರ್ ರಣರಂಗದಲ್ಲಿ ಗಾಯಗೊಂಡು ಅವರ ಒಂದು ಕೈಯ್ಯ ಭಾಗವು ನೇತಾಡುತ್ತಿತ್ತು. ಆ ನೇತಾಡುತ್ತಿದ್ದ ಕೈಯ್ಯನ್ನು ಜೋಡಿಸಿ ಅಲ್ಲಿಗೆ ಪ್ರವಾದಿಯವರು ﷺ ತಮ್ಮ ಪವಿತ್ರ ಜೊಲ್ಲು ರಸವನ್ನು ಸವರಿದ ಮರುಕ್ಷಣವೇ ಆ ಗಾಯವು ವಾಸಿಯಾಗಿ ಖುಬೈಬ್’ರ ◌ؓ ಕೈಯ್ಯು ಪೂರ್ವ ಸ್ಥಾನಕ್ಕೆ ಮರಳಿತ್ತು.
ಹೋರಾಟದ ನಡುವೆ ಸಲಾಮತ್’ಬಿನುಲ್ ಅಸ್’ಲಮಿಯವರ ◌ؓ ಖಡ್ಗವು ತುಂಡಾಗಿತ್ತು, ಅವರು ನೇರವಾಗಿ ಪ್ರವಾದಿಯವರ ﷺ ಬಳಿ ಬಂದು ವಿಷಯ ತಿಳಿಸಿದಾಗ, ಪ್ರವಾದಿಯವರು ﷺ ಖರ್ಜುರದ ಮರದತುಂಡನ್ನು ನೀಡಿದರು, ಆಶ್ಚರ್ಯವೆಂಬಂತೆ ಅದು ಉತ್ತಮವಾದ ಹರಿತವಿರುವ ಖಡ್ಗವಾಗಿ ಬದಲಾಯಿತು. ಅವರು ಅದನ್ನು ತೆಗೆದು ಪ್ರವಾದಿಯವರ ﷺ ಬಳಿಯೇ ನಿಂತು ಹೋರಾಡಿದ್ದರು.
ಖತಾದತ್ ಬಿನ್ ನುಅಮಾನ್’ರ ಕಣ್ಣಿಗೆ ಬಾಣ ತಾಗಿ ಕಣ್ಣು ಕೆಳಗೆ ಬಿದ್ದಿತು, ಅವರು ಆ ಕಣ್ಣನ್ನು ಎತ್ತಿ ಪ್ರವಾದಿಯವರ ﷺ ಬಳಿ ಹೋಗಿ ದೂರು ನೀಡಿದಾಗ, ಪ್ರವಾದಿಯವರು ﷺ ಆ ಕಣ್ಣನ್ನು ಪೂರ್ವ ಸ್ಥಾನದಲ್ಲಿ ಇಟ್ಟುಕೊಟ್ಟಾಗ, ಕಣ್ಣು ಸಂಪೂರ್ಣವಾಗಿ ವಾಸಿಯಾಗಿದ್ದು ಮಾತ್ರವಲ್ಲದೆ, ಕಣ್ಣಿಗೆ ದೃಷ್ಟಿಯೂ ಕೂಡ ಹಿಂದೆ ಇರುದಕ್ಕಿಂತ ಅಧಿಕವಾಯಿತು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-255/365

ಆಧ್ಯಾತ್ಮಿಕ ಚಿಂತನೆಗಳನ್ನು ಹಾಗೂ ಮೌಲ್ಯಗಳನ್ನು ಸೇರಿಸುವ ಮೂಲಕ ಮಾತ್ರ ಬದ್ರ್ ರಣರಂಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಭೌತಿಕವಾದ ಹೋರಾಟ ವೀಕ್ಷಣೆಗಳ ಆಚೆಗೆ ಬಹಳಷ್ಟು ವಿಷಯಗಳು ರಣರಂಗದಲ್ಲಿ ನಡೆದಿರುವುದು ಕಾಣಬಹುದು, ದೈಹಿಕ ಶಕ್ತಿ ಹಾಗೂ ಸೇನಾಬಲವನ್ನೂ ಮೀರಿಸುವ ಆಧ್ಯಾತ್ಮಿಕ ಶಕ್ತಿಯೊಂದು ರಣರಂಗದಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಎಂದು ಒಪ್ಪಿಕೊಂಡಾಗ ಮಾತ್ರವೇ ಮುಸ್ಲಿಂ ಪಕ್ಷವು ವಿಜಯಶಾಲಿಯಾಗಲು ಕಾರಣ ಏನೆಂದು ತಿಳಿಯಲು ಸಾಧ್ಯವಾಗುತ್ತದೆ. ಅದು ಹೇಗೆ ಎಂದು ಅದನ್ನು ವಿವರಿಸಲು ಗೆಲುವು ಸಾಧಿಸಿದ ಪಕ್ಷದ ನಾಯಕರಾದ ಪ್ರವಾದಿಯವರಿಗೆ ﷺ ಮಾತ್ರವೇ ಸಾಧ್ಯ, ಅವರು ಯಾವುದೂ ಕೂಡ ತಮ್ಮ ಸ್ವಂತ ಇಚ್ಛೆಯಿಂದ ಮಾತುಗಳನ್ನು ಆಡುವವರು ಅಲ್ಲ, ಸೃಷ್ಟಿಕರ್ತನಾದ ಅಲ್ಲಾಹನು, ತಾನು ನಿಯೋಗಿಸಿದ ಪ್ರವಾದಿಯವರ ﷺ ಮೂಲಕ, ಲೋಕಕ್ಕೆ ನೀಡಿದ ಅತೀ ಉನ್ನತ ಗ್ರಂಥವಾಗಿದೆ ಪವಿತ್ರ ಕುರ್’ಆನ್. ಬದ್ರ್’ನಲ್ಲಿ ಗೆಲುವು ಸಾಧಿಸಿದ ಸತ್ಯ ವಿಶ್ವಾಸಿಗಳ ಬಗ್ಗೆ ಹಾಗೂ ಸೋತು ಸುಣ್ಣವಾದ, ಅಂಧಕಾರದಲ್ಲಿ ಮುಳುಗಿರುವ ಸತ್ಯ ನಿಷೇಧಿಗಳ ಬಗ್ಗೆಯೂ ಕುರ್’ಆನ್ ಬಹಳ ಸ್ಪಷ್ಟವಾಗಿ ಹೇಳುವುದು ಕಾಣಬಹುದು.

ಪವಿತ್ರ ಕುರ್’ಆನಿನ ಮೂರನೇ ಅಧ್ಯಾಯ ಆಲುಇಮ್ರಾನಿನ ನೂರಇಪ್ಪತ್ಮೂರನೇ ಸೂಕ್ತದಲ್ಲಿ ತಿಳಿಸುವುದು ಕಾಣಬಹುದು, “ನೀವು ಬಹಳ ದುರ್ಬಲರಾಗಿದ್ದ ಕಾರಣ, ಬದ್ರ್’ನಲ್ಲಿ ಅಲ್ಲಾಹನು ನಿಮಗೆ ಸಹಾಯ ಮಾಡಿದ್ದನು, ಹಾಗಾಗಿ ನೀವುಗಳು ಅಲ್ಲಾಹನ ಮೇಲೆ ಭಕ್ತಿಯಿರಿಸಿರಿ, ನೀವು ಅಲ್ಲಾಹನ ಮೇಲೆ ಕೃತಜ್ಞತೆ ಇರುವವರಾಗಳು.”
ಅಲ್ಲಾಹನು ಅವನ ದೇವಚರರಾದ ಮಲಕ್’ಗಳ ಮೂಲಕ ಸಹಾಯ ನೀಡಿದ ಬಗ್ಗೆ ಕುರ್’ಆನ್ ಸ್ಪಷ್ಟವಾಗಿ ತಿಳಿಸುವುದು ಕಾಣಬಹುದು. ಮಲಕ್’ಗಳು (ದೇವಚರ) ಅಲ್ಲಾಹನ ಆಜ್ಞೆಯನ್ನು ಪಾಲಿಸುವವರು ಮಾತ್ರವಾಗಿರುತ್ತಾರೆ, ಅವನ ಆಜ್ಞೆಯನ್ನು ಅನುಗುಣವಾಗಿ ಮಾತ್ರ ಚಲಿಸುವವರಾಗಿರುತ್ತಾರೆ ಮಲಕುಗಳು. ಅವರಲ್ಲಿ ಕೆಲವರು ಬದ್ರ್’ನಲ್ಲಿ ಸಹಾಯ ಮಾಡಿದ ಬಗ್ಗೆ ಕುರ್’ಆನ್ ತಿಳಿಸುವುದು ಕಾಣಬಹುದು.

ಎಂಟನೇ ಅಧ್ಯಾಯ ಅಲ್ಅಂಫಾಲ್’ನ ಒಂಬತ್ತನೇ ಹಾಗೂ ಹತ್ತನೇ ಸೂಕ್ತದಲ್ಲಿ “ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯಕ್ಕಾಗಿ ಬೇಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ, ಸಾವಿರ ದೇವಚರರನ್ನು ಸಾಲು ಸಾಲಾಗಿ ಕಳುಹಿಸಿ ನಿಮಗೆ ಸಹಾಯ ಮಾಡುವನು ಎಂದು ಅವನು ಉತ್ತರಿಸಿದನು. ಅಲ್ಲಾಹನು ಇದನ್ನು ಹೇಳಿದ್ದು ನಿಮ್ಮನ್ನು ಸಂತೋಷ ಪಡಿಸಲು, ಹಾಗೂ ಆ ಕಾರಣದಿಂದ ನಿಮಗೆ ಸಮಾಧಾನ ಸಿಗಲು ಆಗಿತ್ತು. ವಾಸ್ತವದಲ್ಲಿ ಸಹಾಯ ಸಿಗುವುದು ಅಲ್ಲಾಹನಿಂದ ಮಾತ್ರವಾಗಿದೆ, ಅಲ್ಲಾಹನು ಮಹಿಮಾನ್ವಿತನೂ, ತಂತ್ರಜ್ಞಾನಿಯೂ ಆಗಿರುವನು.”

ಸಾವಿರ ದೇವಚರರನ್ನು ಕಳುಹಿಸಿ ಶಕ್ತಿಗೊಳಿಸಿದ ವಿಷಯವನ್ನು ಇಲ್ಲಿ ತಿಳಿಸಿದ್ದಾಗಿದ್ದರೂ, ಮೂರನೇ ಅಧ್ಯಾಯ ಆಲೂಇಮ್ರಾನಿನ ನೂರ ಇಪ್ಪತ್ನಾಲ್ಕನೇ ಸೂಕ್ತದಲ್ಲಿ ಕುರ್’ಆನ್ ತಿಳಿಸುವುದು ಕಾಣಬಹುದು, “ನಿಮ್ಮ ಪ್ರಭು ಮೂರು ಸಾವಿರ ದೇವಚರರನ್ನು ಕಳುಹಿಸಿ, ನಿಮ್ಮನ್ನು ಸಹಾಯ ಮಾಡುವುದು ಸಾಕಲ್ಲವೇ.? ಎಂದು ತಾವು (ಪ್ರವಾದಿಯವರು ﷺ) ಸತ್ಯವಿಶ್ವಾಸಿಗಳಲ್ಲಿ ಹೇಳಿದ ಸಂದರ್ಭ”
ಇಲ್ಲಿ ಮತ್ತೊಂದು ಸೂಕ್ತದಲ್ಲಿ ಇನ್ನೂ ಕೂಡ ವಿಶಾಲವಾದ ಸಹಾಯದ ಬಗ್ಗೆ, ಆಲುಇಮ್ರಾನ್ ಅಧ್ಯಾಯದ ನೂರ ಇಪ್ಪತ್ತೈದನೆ ಸೂಕ್ತದಲ್ಲಿ ಹೇಳಿರುವುದು ಕಾಣಬಹುದು. “ಸಂಶಯವೇ ಬೇಡ, ನೀವು ತಾಳ್ಮೆ ವಹಿಸಿ ಸೂಕ್ಷ್ಮತೆಯಿಂದ ಇರುವುದಾದರೆ, ವಿರೋಧಿಗಳು ಈ ನಿಮಿಷವೇ ನಿಮ್ಮ ಬಳಿ ಬಂದರೆ, ನಿಮ್ಮ ಪ್ರಭು ಯುದ್ಧ ನೈಪುಣ್ಯತೆಯನ್ನು ತಿಳಿದಿರುವ ಐದು ಸಾವಿರದಷ್ಟು ದೇವಚರರನ್ನು ಕಳುಹಿಸಿ ನಿಮಗೆ ಸಹಾಯ ಮಾಡುವನು.”

ದೇವಚರರ ಆಗಮನ, ಹಾಗೂ ಅವರ ಸಹಾಯವೂ ಸತ್ಯವಿಶ್ವಾಸಿಗಳಿಗೆ ಗಮನಕ್ಕೆ ಬರುತ್ತಿತ್ತು. ಹಾಗಾಗಿ ಅವರ ಉತ್ಸಾಹವು ಇಮ್ಮಡಿಯಾಯಿತು, ಪ್ರವಾದಿಯವರಿಗೆ ﷺ ಮಲಕುಗಳನ್ನು ನೇರವಾಗಿ ಕಾಣಲು ಸಾಧ್ಯವಾಗಿತ್ತು. ಇಸ್ಲಾಮಿನ ಕಠಿಣ ಶತ್ರುವಾದ ಪಿಶಾಚಿಯು ಇದ್ದನ್ನರಿತು ಅವನು ಓಡಿ ಹೋದನು. ಪ್ರವಾದಿಯವರ ﷺ ಅನುಚರರಿಗೆ ದೇವಚರರ ಸಹಾಯವೂ ಯಥೇಚ್ಛವಾಗಿ ಸಿಗಲು ಆರಂಭಿಸಿತು.
ಕೇವಲ ಒಂದು ಮಲಕ್’ನಿಂದ ಬಹಳಷ್ಟು ವಿಷಯಗಳು ಸಾಧಿಸಲು ಸಾಧ್ಯವಾಗುವಾಗ ಇಷ್ಟೊಂದು ಮಲಕುಗಳ ಅಗತ್ಯ ಇತ್ತೇ ಎಂಬ ಪ್ರಶ್ನೆಯನ್ನು ಕೆಲವರು ಕೇಳಬಹುದು, ಅವರಲ್ಲಿ ಬದ್ರ್ ರಣರಂಗಕ್ಕೆ ಅಲ್ಲಾಹನು ನೀಡಿದ ಮಹತ್ವ ಅಷ್ಟೊಂದು ಆಗಿತ್ತು ಎಂದಾಗಿದೆ ಉತ್ತರ ಹೇಳಲು ಇರುವುದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-256/365

ಬದ್ರ್ ರಣರಂಗದ ಮಹತ್ವ ಹಾಗೂ ದೇವಚರರ ಉಪಸ್ಥಿತಿಯನ್ನು ತಿಳಿಸುವ ಘಟನೆಯ ಬಗ್ಗೆ ತಿಳಿಯೋಣ. ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ, ಪಿಶಾಚಿ ಅತೀ ಕೋಪಗೊಂಡ ಎರಡು ಸಮಯವಿದ್ದರೆ ಅದು ಬದ್ರ್ ಯುದ್ಧ ಭೂಮಿ ಹಾಗೂ ಅರಫದಲ್ಲಿ ಆಗಿತ್ತು ಎಂದು ಹೇಳಿರುವುದು ಕಾಣಬಹುದು, ಅದಕ್ಕೆ ಕಾರಣ ಅಲ್ಲಾಹನ ಅತಿಯಾದ ಕರುಣೆ ಹಾಗೂ ಪಾಪ ವಿಮೋಚನೆ ಆಗಿತ್ತು. ಆ ಸಂದರ್ಭದಲ್ಲಿ ಒಬ್ಬರು ಪ್ರವಾದಿಯವರಲ್ಲಿ ﷺ, ಏನಾಗಿತ್ತು ಪ್ರವಾದಿಯವರೇ ﷺ ಪಿಶಾಚಿ ಆ ದಿನ ಕಂಡದ್ದು ಎಂದು ಕೇಳಿದಾಗ, ಜಿಬ್ರೀಲರು (ಅ) ಬಹಳಷ್ಟು ದೇವಚರರ ಜೊತೆಯಲ್ಲಿ ರಣರಂಗಕ್ಕೆ ಇಳಿದು ಬಂದ ಕಾರಣವಾಗಿತ್ತು ಎಂದು ಅವರಲ್ಲಿ ಪ್ರವಾದಿಯವರು ﷺ ಹೇಳಿದರು. ರಣರಂಗದಲ್ಲಿ ಬಿಖರವಾಗಿ ಕಾಳಗ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರವಾದಿಯವರು ﷺ “ಅಲ್ಲಿ ನೋಡಿ ಜಿಬ್’ರೀಲರು ದಿಹ್ಯತುಲ್ ಕಲ್ಬಿಯವರ ರೂಪದಲ್ಲಿ ಉಪಸ್ಥಿತರಿವರು, ಗಾಳಿಯನ್ನು ನಿಯಂತ್ರಿಸುತ್ತಿದ್ದಾರೆ, ಪೂರ್ವ ದಿಕ್ಕಿನ ಗಾಳಿಯಿಂದ ನನಗೆ ಬಹಳಷ್ಟು ಸಹಾಯ ಲಭಿಸಿತು, ಪಶ್ಚಿಮ ದಿಕ್ಕಿನ ಗಾಳಿಯಿಂದಾಗಿತ್ತು ಅಂದು ಆದ್ ಸಮುದಾಯ ನಾಶ ಹೊಂದಿದ್ದು” ಎಂದು ಹೇಳಿದ್ದರು.

ಇಬ್’ನು ಅಬ್ಬಾಸ್’ರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಕಾಣಬಹುದು, ಬದ್ರ್ ರಣರಂಗದಲ್ಲಿ ಮುಸ್ಲಿಂ ಸೇನೆಯ ಸೈನಿಕನೊಬ್ಬ ಶತ್ರು ಸೇನೆಯ ಸೈನಿಕನನ್ನು ಹಿಡಿಯಲು ಓಡಿಸುತ್ತಿದ್ದರು. ತಕ್ಷಣವೇ ಹೈಸುಂ (ಮುಂದೆ) ಎಂಬ ಶಬ್ದ ಹಾಗೂ ಚಾವಟಿ ಬೀಸುವ ಶಬ್ದವು ಮೇಲ್ಬಾಗದಿಂದ ಕೇಳಿಸಿತು, ಮುಂದೆ ನೋಡಿದರೆ.! ಎದುರಿನಲ್ಲಿದ್ದ ಸೈನಿಕನು ನೆಲಕ್ಕುರುಳಿ ಬಿದ್ದಿದ್ದನು. ಅವನ ಹತ್ತಿರ ಹೋಗಿ ನೋಡಿದಾಗ, ಅವನ ಮುಖದಲ್ಲಿ ಚಾವಟಿಯ ಏಟು ಬಿದ್ದು ಹೆಪ್ಪುಗಟ್ಟಿದ ಹಸಿರು ಗುರುತು ಹಾಗೂ ಅವನ ಮೂಗು ಗಾಯವಾಗಿ ಸತ್ತು ಬಿದ್ದಿದ್ದನು. ಅದನ್ನು ಕಂಡು ಆ ಸ್ವಹಾಬಿಯು ಓಡಿ ಹೋಗಿ ಪ್ರವಾದಿಯವರಲ್ಲಿ ﷺ ವಿಷಯ ತಿಳಿಸಿದಾಗ, “ನೀನು ಹೇಳಿದ್ದು ನಿಜ, ಅದು ಮುಂಬಾಗದಿಂದ ಸಿಗುವ ಸಹಾಯವಾಗಿದೆ” ಎಂದು ಹೇಳಿದರು.

ಅಸಾಮಾನ್ಯವಾದ ಅದೃಶ್ಯ ಸೈನಿಕ ಶಕ್ತಿಯನ್ನು ಅನುಭವಿಸಿದ ಬಗ್ಗೆ ಇಬ್’ನು ಕಸೀರ್ ಹಾಗೂ ಇತರರು ಉಲ್ಲೇಖಿಸುವುದು ಕಾಣಬಹುದು. ಗಿಫಾರ್ ಜನಾಂಗದ ಅಬೂರಹ್ಮ್ ಎಂಬ ವ್ಯಕ್ತಿಯು ತನ್ನ ಚಿಕ್ಕಪ್ಪನ ಮಗನ ಜೊತೆಯಲ್ಲಿ ಬದ್ರ್’ನ ಪಕ್ಕದಲ್ಲಿರುವ ಬೆಟ್ಟದ ಮೇಲೆ ಹತ್ತಿ ರಣರಂಗದ ದೃಶ್ಯವನ್ನು ನೋಡುತ್ತಿದ್ದರು. ಯಾವ ಸೇನೆ ಸೋತು ಓಡಿಹೋಗುತ್ತದೋ.? ಅವರ ಅಳಿದುಳಿದ ವಸ್ತುಗಳನ್ನು ಕಳ್ಳತನ ಮಾಡುವುದು ಅವರ ಉದ್ದೇಶವಾಗಿತ್ತು. ರಣರಂಗದಲ್ಲಿ ಪ್ರವಾದಿಯವರ ﷺ ಸೈನಿಕರ ಭಾಗದಲ್ಲಿ ಕಡಿಮೆ ಜನ ಹಾಗೂ ವಿರೋಧಿಗಳ ಭಾಗದಲ್ಲಿ ಅಧಿಕ ಜನ ಇರುವುದನ್ನು ಕಂಡು, ಅಬೂರಹ್ಮ್ ನಾವು ಮುಹಮ್ಮದ್’ರ ﷺ ಸೈನ್ಯದ ಬಗ್ಗೆ ಗಮನ ಕೊಡೋಣ ಎಂದು ಹೇಳಿದರು.

ಇದರ ಬಗ್ಗೆ ಅಬೂ ರಹ್ಮ್ ಹೇಳುವುದು ಕಾಣಬಹುದು, ಹೀಗೆ ನಾವು ಮುಸ್ಲಿಂ ಸೇನೆಯ ಒಂದು ಭಾಗದ ಕಡೆಗೆ ಮೆಲ್ಲನೆ ಹೋಗಿ ನೋಡಿದಾಗ, ಇವರು ಖುರೈಷಿಗಳ ಕಾಲು ಭಾಗದಷ್ಟು ಕೂಡ ಇಲ್ಲವಲ್ಲ ಎಂದು ಮುಂದಿನ ಭಾಗದ ಕಡೆಗೆ ಹೋದೆವು, ತಕ್ಷಣವೇ ಒಂದು ಮೋಡ ಬಂದು ನಮ್ಮನ್ನು ಸುತ್ತುವರಿಯಿತು. ಅದರ ನಡುವಿನಿಂದ ಆಯುಧಗಳ, ಸೈನಿಕರ ಶಬ್ದಗಳು ಕೇಳುತ್ತಿದ್ದವು. ಅದರ ನಡುವೆ ಒಬ್ಬರು ಹೈಸುಂ (ಮುಂದೆ ಹೋಗಿ) ಎಂದು ಹೇಳುತ್ತಿದ್ದಾಗ, ಹಿಂದಿನಿಂದ ಸ್ವಲ್ಪ ಮೆಲ್ಲ ಹೋಗಿ, ಬಾಕಿರುವ ಜೊತೆಗಾರರು ಕೂಡ ಬರಲಿ ಎಂದು ಹೇಳುತ್ತಿದ್ದರು. ಅವರು ಬಂದು ಮುಸ್ಲಿಂ ಸೈನ್ಯದ ಬಲ ಭಾಗದಲ್ಲಿ ಬಂದು ನಿಂತರು, ಅವರ ಹಿಂದೆ ಇನ್ನೊಂದು ಗುಂಪು ಕೂಡ ಅದೇ ರೀತಿ ಬಂದಿತು, ಆಮೇಲೆ ನಾವು ನೋಡಿದಾಗ ಮುಸ್ಲಿಂ ಸೈನ್ಯವು ಖುರೈಷಿಗಳಿಗಿಂತ ದುಪ್ಪಟ್ಟಾಗಿ ಕಾಣುತ್ತಿತ್ತು. ಈ ದೃಶ್ಯವನ್ನು ಕಂಡ ನನ್ನ ಚಿಕ್ಕಪ್ಪನ ಮಗನು ಅಲ್ಲೇ ಆಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟನು, ನನಗೂ ಅದನ್ನು ಕಂಡು ಆಘಾತ ಆಗಿದ್ದರೂ ನಾನು ಅದರಿಂದ ಪಾರಾದೆನು, ನಂತರದ ಕಾಲದಲ್ಲಾಗಿತ್ತು ನಾನು ಈ ವಿಷಯವನ್ನು ಪ್ರವಾದಿಯವರಲ್ಲಿ ﷺ ತಿಳಿಸಿದ್ದು.
ಹೈಸುಂ ಎಂದರೆ ಜಿಬ್ರೀಲರ ಕುದುರೆ ಹೆಸರಾಗಿತ್ತು ಅದು. ಈ ಕುದುರೆಯ ಮೇಲಾಗಿತ್ತು ಪ್ರವಾದಿ ಮೂಸರವರನ್ನು (ಅ) ಸೀನ ಬೆಟ್ಟದ ಮೇಲೆ ಕರೆದುಕೊಂಡು ಹೋದದ್ದು ಎಂಬ ಉಲ್ಲೇಖವೂ ಕೂಡ ಇತರ ಗ್ರಂಥಗಳಲ್ಲಿ ಇರುವುದು ಕಾಣಬಹುದು.

ಇನ್ನೂ ಸ್ವಲ್ಪ, ಬದ್ರ್’ರ ಪಕ್ಕದಲ್ಲಿರುವ ಬೆಟ್ಟದ ಆಚೆಗೆ ಸ್ವಲ್ಪ ಸಂಚಾರ ನಡೆಸೋಣ, ಸುಹೈಲ್ ಬಿನ್ ಅಂರ್ ಹೇಳುವುದು ಕಾಣಬಹುದು, ವಿಶೇಷವಾದ ಚಿಹ್ನೆಗಳಿರುವ ಬಿಳಿ ಯುವಕರು ಬಿಳಿ ಹಾಗೂ ಕಪ್ಪು ಮಿಶ್ರಿತ ಕುದುರೆಯ ಮೇಲೆ ಕುಳಿತು, ಆಕಾಶ ಭೂಮಿಯ ನಡುವೆ ಹೊರಾಡುವ ದೃಶ್ಯ ನನಗೆ ಬದ್ರ್ ದಿನದಂದು ಕಾಣಲು ಸಾಧ್ಯವಾಗಿತ್ತು.
ಸುಹೈಲ್’ರು ಮಾತು ಮುಂದುವರಿಸುತ್ತಾ ನನ್ನ ಕಣ್ಣಿನ ದೃಷ್ಟಿ ನಷ್ಟ ಹೊಂದುದಕ್ಕೂ ಮುಂಚೆ ನೀವು ನನ್ನ ಜೊತೆಯಲ್ಲಿ ಬಂದಿರುತ್ತಿದ್ದರೆ, ನಾನು ನಿಮಗೆ ದೇವಚರರು ಇಳಿದು ಬಂದ ಸ್ಥಳವನ್ನು ತೋರಿಸುತ್ತಿದ್ದೆ ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-257/365

ಬದ್ರ್’ನಲ್ಲಿ ದೇವಚರರು ಭೂಮಿಗೆ ಇಳಿದು ಬಂದ ವಿಷಯದಲ್ಲಿ ಇನ್ನೂ ಕೆಲವು ವಿಷಯಗಳು ತಿಳಿಯಲಿವೆ. ಅಲಿಯವರು ◌ؓ ಇದರ ಬಗ್ಗೆ ಹೇಳುವುದು ಕಾಣಬಹುದು, ನಾನು ಬಾವಿಯ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿತು. ಅದು ಹಾಗೆ ಮೂರು ಬಾರಿ ಮುಂದುವರಿಯಿತು, ಅದರ ನಂತರ ಮಿಕಾಯಿಲ್’ರ (ಅ) ಜೊತೆಯಲ್ಲಿ ಬಂದ ಸಾವಿರ ದೇವಚರರ (ಮಲಕ್) ಗುಂಪೊಂದು ಪ್ರವಾದಿಯವರ ﷺ ಬಲಭಾಗದಲ್ಲಿ ಬಂದು ನಿಂತಿತು. ಅದೇ ಸ್ಥಳದಲ್ಲಿ ಅಬೂಬಕ್ಕರ್ ಕೂಡ ಇದ್ದರು, ಇಸ್ರಾಫೀಲ್’ರು ಕೂಡ ಸಾವಿರ ಮಲಕ್’ಗಳ ತಂಡದ ಜೊತೆಯಲ್ಲಿ ಬಂದು ಸೇನೆಯನ್ನು ಸೇರಿದರು, ನಾನು ಕೂಡ ಅವರ ಜೊತೆ ಸೇರಿ ಕೊಂಡೆನು. ಅಷ್ಟೊತ್ತಿಗೆ ಜಿಬ್ರೀಲರು (ಅ) ಕೂಡ ತಮ್ಮ ಗುಂಪಿನ ಜೊತೆಯಲ್ಲಿ ಬಂದು ಸೇರಿದ್ದರು, ಮತ್ತೊಂದು ಉಲ್ಲೇಖದ ಪ್ರಕಾರ ಜಿಬ್ರೀಲರ (ಅ) ಹಾಗೂ ಮಿಕಾಯಿಲ್’ರ (ಅ) ಸೇನೆಯು ಐನೂರು, ಐನೂರು ಎಂಬ ರೀತಿಯಲ್ಲಿ ಇತ್ತು ಎಂದೂ, ಅವರು ಹೋರಾಟದಲ್ಲಿ ಬಾಗಿಯಾಗಿದ್ದರು ಎಂದೂ, ಖೈದಿಗಳನ್ನು ಬಂಧಿಸುವಲ್ಲಿ ಸಹಾಯ ಮಾಡಿದ್ದರು ಎಂದೂ ಕೂಡ ಕಾಣಬಹುದು.

ಸಾಯಿಬು ಬಿನ್ ಅಬೀಹುಬೈಶುಲ್ ಅಸದಿ ಎಂಬ ವ್ಯಕ್ತಿಯು ವಿರೋಧಿಗಳ ಸೇನೆಯಿಂದ ಬದ್ರ್’ನಲ್ಲಿ ಹೋರಾಡಿದ ವ್ಯಕ್ತಿಯಾಗಿದ್ದರು. ಹೋರಾಟದ ನಂತರ ಆತನನ್ನು ಬಂಧಿಸಲಾಯಿತು, ಅವರನ್ನು ಬಂಧಿಸಿದ ಬಗ್ಗೆ ಅವರೇ ಹೇಳುವುದು ಕಾಣಬಹುದು, ನನ್ನನ್ನು ಯುದ್ಧದಲ್ಲಿ ಖೈದಿಯಾಗಿ ಬಂದಿಸಿದ್ದು ಮನುಷ್ಯ ಆಗಿರಲಿಲ್ಲ ಎಂಬುದು ಮಾತ್ರ ಸತ್ಯ. ಅದಕ್ಕೆ ಪಕ್ಕದಲ್ಲಿದ್ದ ಇನ್ನೊಬ್ಬರು ಹಾಗಿದ್ದರೆ ಯಾರಿರಬಹುದು.? ನಿಮ್ಮ ಅರ್ಥದಲ್ಲಿ ಎಂದು ಕೇಳಿದಾಗ, ಅವರು ಮಾತು ಮುಂದುವರಿಸುತ್ತಾ ಸೋತ ಖುರೈಷಿಗಳ ಗುಂಪಿನಲ್ಲಿ ನಾನು ಕೂಡ ಸೇರಿದ್ದೆ, ಅಷ್ಟರಲ್ಲೇ ಆಕಾಶ ಭೂಮಿಯ ನಡುವೆ ಬಿಳಿ ಹಾಗೂ ಕಪ್ಪು ಬಣ್ಣದ ಕುದುರೆಯ ಮೇಲೆ ಕುಳಿತಿದ್ದ ದೈತ್ಯ ಗಾತ್ರದ ಬಿಳಿ ವ್ಯಕ್ತಿಯೊಬ್ಬರು ಬಂದು ನನ್ನನ್ನು ಬಂಧಿಸಿದರು. ಖೈದಿಯಾಗಿದ್ದಾಗ ನನ್ನ ಬಳಿ ಅಬ್ದುರಹ್ಮಾನ್ ಬಿನ್ ಔಫ್’ರು ◌ؓ ಬಂದು ಇವರನ್ನು ಯಾರು ಬಂದಿಸಿದ್ದು ಎಂದು ಉಳಿದ ಸೈನಿಕರಲ್ಲಿ ಕೇಳಿದಾಗ, ಅವರಿಗೆ ಯಾರಿಗೂ ವಿಷಯವೇ ಗೊತ್ತಿರಲಿಲ್ಲ, ಕೊನೆಗೆ ನನ್ನನ್ನು ಪ್ರವಾದಿಯವರ ﷺ ಬಳಿ ಕರೆದುಕೊಂಡು ಹೋದರು. ಅವರು ಕೂಡ ನನ್ನಲ್ಲಿ, ನಿನ್ನನ್ನು ಯಾರು ಬಂಧಿಸಿದ್ದು ಎಂದು ಕೇಳಿದಾಗ, ನಾನು, ನನಗೆ ಗೊತ್ತಿಲ್ಲ ಎಂದು ಹೇಳಿದೆನು. ಅಷ್ಟೇ ಅಲ್ಲ ಅಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಲು ಅವರು ನನ್ನಲ್ಲಿ ಹೇಳಿಯೂ ಇಲ್ಲ, ಆದರೆ ಪ್ರವಾದಿಯವರು ﷺ ಅದು “ಗೌರವಾನ್ವಿತ ಮಲಕ್ ಆಗಿರಬಹುದು” ಇವನನ್ನು ಬಂಧಿಸಿದ್ದು ಎಂದು ಹೇಳಿ, ನಂತರ ಇಬ್’ನು ಔಫ್’ರನ್ನು ಕರೆದು ನೀನು ಕರೆದುಕೊಂಡು ಬಂದ ಖೈದಿಯನ್ನು ನೀನೆ ಕೊಂಡು ಹೋಗು ಎಂದು ಹೇಳಿದರು. ಆದರೆ ಪ್ರವಾದಿಯವರ ﷺ ಮಾತು ಮಾತ್ರ ನನ್ನ ಮನಸ್ಸಿಗೆ ತಾಗಿತ್ತು, ಆದರೂ ನಾನು ಇಸ್ಲಾಮ್ ಸ್ವೀಕರಿಸಲು ಬಹಳಷ್ಟು ತಡ ಮಾಡಿದ್ದೆನು.
ಈ ವಿಷಯವನ್ನು ಅವರು ತಿಳಿಸಿದ್ದು, ಉಮರ್’ರವರ ◌ؓ ಆಳ್ವಿಕೆಯ ಸಂದರ್ಭದಲ್ಲಿ ಆಗಿತ್ತು. ಉಮಾಮತ್ ಬಿನ್ ಸಹಲ್ ಎಂಬ ವ್ಯಕ್ತಿಯು, ತಮ್ಮ ತಾತ ಹೇಳಿರುವುದಾಗಿ ಹೇಳುವುದು ಕಾಣಬಹುದು. ಮಗನೇ, ನಮ್ಮ ಸೇನೆಯ ಒಬ್ಬ ವ್ಯಕ್ತಿಯು ಶತ್ರುಸೇನೆಯ ಇನ್ನೊಬ್ಬ ಸೈನಿಕನನ್ನು ಹಿಂಬಾಲಿಸುತ್ತಿದ್ದರು. ಕೊನೆಗೆ ಅವನ ವಿರುದ್ಧ ಖಡ್ಗ ಬೀಸಿದ್ದೆ ತಡ, ಅವರ ಖಡ್ಗ ಅವನ ಕತ್ತಿಗೆ ತಗುಲುದ್ದಕ್ಕೂ ಮುನ್ನವೇ ಆ ಸೈನಿಕ ತಲೆಯು ಉರುಳಿ ನೆಲಕ್ಕೆ ಬಿದ್ದಿತು. ಇದು ನಾನು ಖುದ್ದಾಗಿ ಕಂಡ ದೃಶ್ಯವಾಗಿದೆ ಮಗನೇ ಎಂದು ಹೇಳಿದರು.

ಬದ್ರ್’ನಲ್ಲಿ ಸತ್ತು ಬಿದ್ದವರಲ್ಲಿ ಕತ್ತು ಹಾಗೂ ಕೈಗಳ ಭಾಗದಲ್ಲಿ ಸುಟ್ಟ ಗಾಯಗಳು ಇದ್ದರೆ, ಅವರನ್ನು ಕೊಂದದ್ದು ದೇವಚರರು ಆಗಿದ್ದರು ಎಂದು ಪರಿಗಣಿಸಲಾಗುತ್ತಿತ್ತು. ಇದರ ಬಗ್ಗೆ ಹಕೀಮ್ ಬಿನ್ ಹಿಝಾಂರು ಹೇಳುವುದು ಕಾಣಬಹುದು, ಬದ್ರ್ ದಿನದಂದು ನಾನು ಆಕಾಶದಿಂದ ಇರುವೆಗಳ ಹಿಂಡುಗಳು ಬರುವುದನ್ನು ನೋಡಿದ್ದೆನು, ಅದು ನೇರವಾಗಿ ಕಣಿವೆಯ ಮೂಲಕ ಉಕ್ಕಿ ಹರಿಯಿತು. ಅದು ಪ್ರವಾದಿಯವರಿಗೆ ﷺ ಸಹಾಯ ಮಾಡಲು ಆಕಾಶ ಲೋಕದಿಂದ ಕಳುಹಿಸಿದ್ದಾಗಿದೆ ಎಂದು ಅದನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿತ್ತು.
ಜುಬೈರ್ ಬಿನ್ ಮತ್’ಇಮ್’ರು ಹೇಳುವುದು ಏನೆಂದರೆ, ಶತ್ರು ಸೇನೆಯು ಸೋಲುದಕ್ಕೂ ಮುಂಚೆ, ಅಂದರೆ ಯುದ್ಧ ಭೀಕರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಪಟ್ಟೆಯುಳ್ಳ ವಸ್ತ್ರದಂತಹ ವಸ್ತುವು ಆಕಾಶ ಲೋಕದಿಂದ ಕೆಳಗಿಳಿಯುವುದು ಕಂಡುಬಂದಿತು. ವಾಸ್ತವದಲ್ಲಿ ಅದು ದೇವಚರರ ಗುಂಪಾಗಿತ್ತು, ತಕ್ಷಣವೇ ಶತ್ರುಗಳ ಸೈನ್ಯವು ಸೋಲಲ್ಪಟ್ಟಿತು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-258/365

ದೇವಚರರು ರಣರಂಗದಲ್ಲಿ ಪ್ರತಿಯೊಬ್ಬರ ಹತ್ತಿರ ಬಂದದ್ದು ಅವರಿಗೆ ಪರಿಚಯ ಇರುವ ವ್ಯಕ್ತಿಗಳ ರೂಪದಲ್ಲಿ ಆಗಿತ್ತು. ಆ ಕಾರಣದಿಂದ ಅವರಿಗೆ ಇನ್ನಷ್ಟು ಉತ್ಸಾಹದಿಂದ ಹೊರಾಡಲು ಅದು ಕಾರಣವಾಯಿತು. ಅವರಿಗೆ ವಿಶೇಷವಾದ ಗುರುತುಗಳು ಕೂಡ ಇತ್ತು, ದೇವಚರರು ಬದ್ರ್ ರಣರಂಗದಲ್ಲಿ ಕಪ್ಪು ಪೇಟವನ್ನು ತಲೆಗೆ ಸುತ್ತಿಯಾಗಿತ್ತು ಬಂದಿದ್ದು. ಅದೇ ರೀತಿ ಉಹುದು ರಣರಂಗದಲ್ಲಿ ಕೆಂಪು ಬಣ್ಣದ ಪೇಟ ಧರಿಸಿಯಾಗಿತ್ತು ಬಂದಿದ್ದು. ದೇವಚರರು ಧರಿಸಿದ್ದ ಪೇಟದ ಬಣ್ಣದ ಬಗ್ಗೆ ವಿಭಿನ್ನವಾದ ಬಹಳ ಉಲ್ಲೇಖಗಳು ಕಾಣಬಹುದು, ಕೆಲವರು ಕಪ್ಪು, ಕೆಂಪು ಅಥವಾ ಹಳದಿ ಹೀಗೆ ವಿವಿಧ ಅಭಿಪ್ರಾಯಗಳನ್ನು ವಿವರಿಸಿದವರೂ ಇದ್ದಾರೆ. ಬೇರೆ ಬೇರೆ ಸೇನೆಯ ತಂಡವು, ಬೇರೆ ಬೇರೆ ಬಣ್ಣದ ಪೇಟ ಧರಿಸಿತ್ತು ಎಂದು ಹೇಳುವಾಗ, ಉಲ್ಲೇಖಗಳಲ್ಲಿ ಭಿನ್ನಾಭಿಪ್ರಾಯ ಬರುವುದಿಲ್ಲ.

ಹಳದಿ ಪೇಟ ಧರಿಸಿದ್ದ ಝುಬೈರ್’ರ ◌ؓ ಬಳಿ, ಅದೇ ರೂಪದಲ್ಲಾಗಿತ್ತು ದೇವಚರರು ಬಂದಿದ್ದು ಎಂಬ ಒಂದು ಉಲ್ಲೇಖವೂ ಕಾಣಬಹುದು. ಹಂಝರು ◌ؓ ಉಷ್ಟ್ರಪಕ್ಷಿಯ ಗರಿ, ಝುಬೈರ್’ರು ◌ؓ ಹಳದಿ ಬಣ್ಣದ ಪೇಟ, ಅಬೂದುಜಾನರು ◌ؓ ಪೇಟ, ಅಲಿಯವರು ◌ؓ ಬಿಳಿ ರುಮಾಲಾಗಿತ್ತು ತಮ್ಮ ಗುರುತಿಗಾಗಿ ಧರಿಸಿದ್ದದ್ದು. ಈ ರೀತಿಯ ಕೆಲವು ಗುರುತುಗಳು ದೇವಚರರ ಕುದುರೆಗಳಿಗೂ ಇದ್ದವು, ಅವುಗಳ ತಲೆಯ ಮೇಲೆ ಹಾಗೂ ಬಾಲದಲ್ಲಿ ಬಿಳಿ ರೋಮ ಅಥವಾ ಕೆಂಪು ಹತ್ತಿಯ ರೀತಿಯ ಗುರುತುಗಳಾಗಿತ್ತು ಇದ್ದದ್ದು. ದೇವಚರರನ್ನು ಹಿಂಬಾಲಿಸಿ ನೀವುಗಳು ಕೂಡ ನಿಮ್ಮ ಕುದುರೆಗಳಿಗೆ ಗುರುತುಗಳನ್ನು ಇಡಿರಿ ಎಂದು ಪ್ರವಾದಿಯವರು ﷺ ಹೇಳಲು ಆರಂಭಿಸಿದ್ದು ಬದ್ರ್’ನ ನಂತರವಾಗಿತ್ತು ಎಂದು ಕೆಲವೊಂದು ಉಲ್ಲೇಖಗಳಲ್ಲಿ ಕಾಣಬಹುದು.

ದೇವಚರರ ಆಗಮನದ ಬಗ್ಗೆ ತಿಳಿಸುವಾಗ ಇನ್ನೊಂದು ಘಟನೆಯನ್ನು ಕೂಡ ತಿಳಿಸುವುದು ಉತ್ತಮವಾಗಿರುತ್ತದೆ. ದೇವಚರರ ಸಾನಿಧ್ಯದ ಅನುಭವವು ಪ್ರವಾದಿಯವರಿಗೆ ಮಾತ್ರವಲ್ಲ ಶತ್ರು ಸೇನೆಯ ಸೈನಿಕರಿಗೂ ಅದರ ಅನುಭವ ಉಂಟಾಗುತ್ತದೆ ಎಂದು ಸ್ವತಃ ಕುರ್’ಆನ್ ತಿಳಿಸುವುದು ಕಾಣಬಹುದು. ನಲ್ವತ್ತೊಂದನೇ ಅಧ್ಯಾಯದ ಮೂವತ್ತು ಹಾಗೂ ಮುವ್ವತ್ತೊಂದನೆ ಸೂಕ್ತದಲ್ಲಿ ಅದನ್ನು ನಮಗೆ ಅರ್ಥಮಾಡಿಕೊಳ್ಳಬಹುದು. ನಮ್ಮ ಪ್ರಭು ಅಲ್ಲಾಹನಾಗಿರುವನು ಎಂದು ಘೋಷಣೆ ಮಾಡಿ, ಅದೇ ಆದರ್ಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸೆಟೆದು ನಿಂತ ಜನರಲ್ಲಿ ದೇವಚರರು, “ನೀವು ಭಯಪಡಬೇಡಿರಿ, ಬೇಸರಪಡಬೇಡಿರಿ, ನಿಮಗೆ ಭರವಸೆ ನೀಡಿದ ಸ್ವರ್ಗಕ್ಕೆ ಸಂಬಂಧಿಸಿದ ಶುಭವಾರ್ತೆಯಲ್ಲಿ ಸಂತೋಷ ಪಡಿರಿ, ಉಭಯ ಲೋಕದಲ್ಲೂ ನಾವುಗಳು ನಿಮ್ಮ ಮಿತ್ರರಾಗಿರುತ್ತೇವೆ, ನಿಮಗೆ ಅಲ್ಲಿ ನೀವು ಆಸೆ ಪಡುವ ಎಲ್ಲಾ ವಸ್ತುಗಳು ನಿಮಗೆ ಲಭಿಸಲಿದೆ, ನಿಮಗೆ ಅಲ್ಲಿ ನೀವು ಬಯಸುವ ಎಲ್ಲವು ಸಿಗಲಿದೆ” ಎಂದು ಹೇಳುವರು.

ಬದ್ರ್ ರಣರಂಗದ ದೇವಚರರ ಉಪಸ್ಥಿತಿಯು, ಸೈನಿಕ ಸಹಾಯಕ್ಕೆ ಬದಲು ಸತ್ಯ ವಿಶ್ವಾಸಿಗಳ ಪರಿಗಣನೆ, ಪರಿಹಾರ ಎಂದು ಹೇಳಿದರೂ ತಪ್ಪಾಗಲಾರದು. ಪ್ರವಾದಿಯವರು ﷺ ಹಾಗೂ ಅವರ ಅನುಚರರಿಗೆ, ಅಲ್ಲಾಹನ ಸಂತೃಪ್ತಿ ಸಂಪಾದಿಸಲು, ಅವನ ಧರ್ಮಕ್ಕೆ ಸಹಾಯಕ್ಕೆ ಸಿಗುವ ಪ್ರತಿಫಲಕ್ಕಾಗಿ ಎಡೆ ಮಾಡಿಕೊಟ್ಟದ್ದಾಗಿತ್ತು ಬದ್ರ್ ರಣರಂಗವು. ಎಲ್ಲಾ ನಿರ್ಣಯದ ಹಿಂದಿನ ಅಧಿಕಾರ ಅಲ್ಲಾಹನಿಗೆ ಮಾತ್ರವಾಗಿದೆ, ಕೆಲವೊಮ್ಮೆ ಅವನು ಅವನ ದೇವಚರರ ಮೂಲಕ ಇಡೀ ಒಂದು ಸಮೂಹವನ್ನೇ ನಾಶ ಮಾಡುವನು. ಪ್ರವಾದಿ ಲೂಥ್’ರ (ಅ) ಇಡೀ ಸಮೂಹವನ್ನು, ಅವರ ಏಳು ಪ್ರತಿಷ್ಠಿತ ನಗರಗಳನ್ನು, ಅಡಿಮೇಲು ಮಾಡಿ ನಾಶಮಾಡಲು, ಅಲ್ಲಾಹನ ಆಜ್ಞೆಯ ಮೇರೆಗೆ ಜಿಬ್ರೀಲರ ಒಂದು ರೆಕ್ಕೆ ಬಡಿತ ಮಾತ್ರ ಸಾಕಾಗಿತ್ತು.
ಅಂದು ಅದೇ ರೀತಿ ಮಾಡಿದ ಹಾಗೆ ಇಲ್ಲಿ ಇವರಿಗೂ ಮಾಡಬಹುದಿತ್ತಲ್ಲವೇ.? ಎಂದು ಪ್ರಶ್ನೆ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ, ಕಾರಣ ಸಕಲ ಬ್ರಹ್ಮಾಂಡವನ್ನು, ಅದರ ಎಲ್ಲಾ ನಿಯಂತ್ರಣಗಳನ್ನು ನಿಯಂತ್ರಿಸುವ ಅಲ್ಲಾಹನಿಗೆ ಎಲ್ಲವೂ ಗೊತ್ತಿದೆ, ಯಾವಾಗ ಏನು ಮಾಡಬೇಕು ಎಂಬುವುದು ಎಂದು ಮಾತ್ರವೇ ಅದಕ್ಕೆ ಉತ್ತರ ನೀಡಬಹುದು.

ಬದ್ರ್’ನ ರಣರಂಗಕ್ಕೆ ದೇವಚರರು ಬಂದಿಳಿದ ಸ್ಥಳದ ಬಗ್ಗೆ ಡಾ ಅಬ್ದುಲ್ ಯಮಾನಿಯವರು ಹೇಳುವುದೇನೆಂದರೆ, ನಾನು ಬದ್ರ್’ನ ರಣರಂಗವನ್ನು ಹಾಗೂ ಅದರ ಸುತ್ತಲಿನ ಪರಿಸರವನ್ನು ಒಮ್ಮೆ ನೋಡಿದ್ದೆನು, ಅಲ್ಲಿ ಮದೀನಕ್ಕೆ ತೆರಳುವ ದಾರಿಯ ಎಡ ಭಾಗದಲ್ಲಿ ಬಹಳ ಎತ್ತರವಾದ ಒಂದು ಬೆಟ್ಟವಿದೆ, ಅದರ ಪಕ್ಕದಲ್ಲಿ ಅಲ್’ಮಸ್ಸ್ ಎಂಬ ಹೆಸರಿನ ಸಣ್ಣದಾದ ಕಾಲುದಾರಿಯಿದೆ, ಈ ದಾರಿಯ ಮೂಲಕವಾಗಿತ್ತು ಅಬೂಸೂಫಿಯಾನ್ ತನ್ನ ತಂಡದ ಜೊತೆಯಲ್ಲಿ ಓಡಿ ತಪ್ಪಿಸಿಕೊಂಡದ್ದು. ಶೈಖ್ ಬಾಕ್ಕಿಶಮೀಲ್’ರವರು ಈ ಬೆಟ್ಟದ ಬಗ್ಗೆಯಾಗಿತ್ತು, ದೇವಚರರು ಇಳಿದ ಬೆಟ್ಟದ ಎಂದು ಪರಿಚಯಿಸಿದ್ದು, ಈ ಅಭಿಪ್ರಾಯಕ್ಕೆ ಹಲವಾರು ಜನರು ತಮ್ಮ ಸಹಮತವನ್ನೂ ಸೂಚಿಸಿದ್ದಾರೆ. ಆದರೆ ರಣರಂಗದ ಬಲಭಾಗದ ಗುಡ್ಡದ ಮೇಲಾಗಿತ್ತು ಎಂಬ ಪ್ರಬಲವಾದ ಉಲ್ಲೇಖವಿರುವುದು ಕೂಡ ಕಾಣಬಹುದು, ಮೇಲೆ ತಿಳಿಸಿದ ಬೆಟ್ಟಕ್ಕೆ ದೇವಚರರ ಬೆಟ್ಟ ಎಂದು ಹೇಳುವುದಕ್ಕೆ ಈ ಕಾರಣವೂ ಇರಬಹುದು, ಅಥವಾ ಗಿಫಾರ್ ಜನಾಂಗದ ವ್ಯಕ್ತಿ ಹಾಗೂ ಅವನ ಸಂಭಂದಿ ದೇವಚರರನ್ನು ನೋಡಿದ ಸ್ಥಳ ಎಂಬ ಕಾರಣದಿಂದಲೂ ಆಗಿರಬಹುದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-259/365

ರಣರಂಗದಲ್ಲಿ ಯುದ್ಧ ಕಹಳೆಯು ಮೊಳಗಿತು, ಸತ್ಯವಿಶ್ವಾಸಿಗಳ ಸೇನೆಯು ಗೆಲುವು ಸಾಧಿಸಿತು. ಜಗತ್ತಿನಲ್ಲಿ ನಡೆದ ಇತರ ಯುದ್ಧಗಳಲ್ಲಿದ್ದ ಸಾಮಾನ್ಯ ನೋಟವನ್ನೇ ಬದ್ರ್ ಕದನವು ಬದಲಾಯಿಸಿತು, ಸತ್ಯ ವಿಶ್ವಾಸಿಗಳ ಸೇನೆಯಿಂದ ಹುತಾತ್ಮರಾದವರು ಸ್ವರ್ಗ ಲೋಕಕ್ಕೆ ಹಾರಿ ಹೋದರು, ಅವರ ಸಂಬಂಧಿಗಳು ನಾವು ಅಲ್ಲಾಹನ ದಾರಿಯಲ್ಲಿ ಹುತಾತ್ಮರಾದವರ ಸಂಬಂಧಿಗಳು ಎಂದು ಅಭಿಮಾನದಿಂದ ಹೇಳಿಕೊಳ್ಳಲು ಆರಂಭಿಸಿದರು. ಬದ್ರ್ ಕದನದ ಯೋಧರು ಶೌರ್ಯತೆಯ ಪ್ರತೀಕವಾಗಿ ಗುರುತಿಸಿಕೊಂಡರು. ಅಲ್ಲಾಹನ ದಾರಿಯಲ್ಲಿ ಹುತಾತ್ಮರಾದವರ ಬಗ್ಗೆ ಪವಿತ್ರ ಕುರ್’ಆನಿನ ಮೂರನೇ ಅಧ್ಯಾಯ ಆಲುಇಮ್ರಾನಿನ ನೂರ ಆರುವತ್ತೊಂಬತ್ತು ಹಾಗೂ ನೂರ ಎಪ್ಪತ್ತರ ಸೂಕ್ತಗಳಲ್ಲಿ ಉಲ್ಲೇಖಸಿದ್ದನ್ನು ಇಬ್’ನು ಅಬ್ಬಾಸ್’ರು ವಿವರಿಸುವುದು ಕಾಣಬಹುದು.

“ಅಲ್ಲಾಹನ ದಾರಿಯಲ್ಲಿ ಹುತಾತ್ಮರಾದವರನ್ನು ಮರಣಹೊಂದಿರುವರು ಎಂದು ಅಂದುಕೊಳ್ಳಬೇಡಿರಿ, ವಾಸ್ತವದಲ್ಲಿ ಅವರ ಪ್ರಭುವಿನ ಬಳಿ ಅವರು ಜೀವಂತವಾಗಿರುವರು. ಅವರಿಗೆ ಅಲ್ಲಿ ಬೇಕಾದಷ್ಟು ಆಹಾರಗಳನ್ನು ನೀಡಲಾಗುತ್ತದೆ, ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದರಲ್ಲಿ ಅವರು ಸಂತುಷ್ಟರಾಗಿರುವರು, ತಮ್ಮ ಹಿಂದೆ ಇರುವವರ ಬಗ್ಗೆ, ಹಾಗೂ ತಮ್ಮಜೊತೆಯಲ್ಲಿ ಬರದವರ ಬಗ್ಗೆಯೂ ಅವರು ಸಂತುಷ್ಟರಾಗಿರುವರು. ಅವರಿಗೆ ಭಯಪಡುವುದಾಗಲಿ, ದುಃಖಿಸುವುದಾಗಲಿ ಇಲ್ಲವೆಂದು ಅವರಿಗೆ ತಿಳಿದಿರುವ ಕಾರಣದಿಂದಾಗಿದೆ ಅದು.”

ಅಲ್ಲಾಹನ ದಾರಿಯಲ್ಲಿ ಹುತಾತ್ಮರಾದವರ ಮಹತ್ವ ಹಾಗೂ ಸ್ಥಾನದ ಬಗ್ಗೆ ಪ್ರವಾದಿಯವರು ﷺ ಹೇಳುವುದು ಕಾಣಬಹುದು, ಇಬ್’ನು ಅಬ್ಬಾಸ್’ರು ಉಲ್ಲೇಖಿಸಿದ ಹದೀಸಿನಲ್ಲಿ ಪ್ರವಾದಿಯವರು ﷺ ಹೇಳುತ್ತಾರೆ, ಉಹ್’ದ್ ರಣರಂಗದಲ್ಲಿ ಹುತಾತ್ಮರಾದ ನಿಮ್ಮ ಸಹೋದರರ ಆತ್ಮಗಳನ್ನು ಅಲ್ಲಾಹನು ಹಸಿರು ಬಣ್ಣದ ಪಕ್ಷಿಗಳಿಗೆ ಹಾಕಿರುವನು. ಅದು ಸ್ವರ್ಗ ಲೋಕದ ತೊರೆಗಳ ಬಳಿ ಹಾರಿ ಹೋಗಿ, ಅಲ್ಲಿರುವ ಉದ್ಯಾನವನದಲ್ಲಿ ಸಂತೋಷದಿಂದ ಹಾರಾಡುತ್ತದೆ, ಅದು ಅರ್ಶ್’ನ (ಅಲ್ಲಾಹನ ಸಿಂಹಾಸನ) ಕೆಳಭಾಗದಲ್ಲಿ ನೇತಾಕಿರುವ ದೀಪಗಳ ಮೇಲೆ ಹಾರಾಡುತ್ತಿರುತ್ತದೆ ಎಂದು.

ಹುತಾತ್ಮರು (ಶುಹದಾಗಳು) ತಮಗೆ ಸಿಕ್ಕಿದ್ದ ಆಹಾರ ವಸ್ತುಗಳ ರುಚಿಯನ್ನು ಸವಿದು, ನಮಗೆ ಸಿಕ್ಕಿದ ಈ ಸಂತೋಷದ ಬಗ್ಗೆ ಭೂಮಿಯಲ್ಲಿರುವ ನಮ್ಮ ಸಹೋದರರಿಗೆ ತಿಳಿದರೆ ಏನಾಗಬಹುದು ಎಂದು ಕೇಳಿದ್ದರು. ಇನ್ನೊಂದು ಉಲ್ಲೇಖದ ಪ್ರಕಾರ, “ನಾವು ಸ್ವರ್ಗದಲ್ಲಿ ಜೀವಂತವಾಗಿ, ಎಲ್ಲಾ ಸಂತೋಷಗಳನ್ನು ಅನುಭವಿಸುತ್ತಿದ್ದೇವೆ ಎಂದು ಭೂಲೋಕದಲ್ಲಿರುವ ನಮ್ಮ ಸಹೋದರರಿಗೆ ಯಾರು ತಿಳಿಸುವರು.? ಹಾಗೆ ತಿಳಿದರೆ ಅವರು, ರಣರಂಗದಲ್ಲಿ ಯಾವುದೇ ಉದಾಸೀನತೆ ತೋರಿಸದೆ ಇನ್ನಷ್ಟು ಉತ್ಸಾಹದಿಂದ ಹೋರಾಡುತ್ತಿದ್ದರು, ಎಂದು ಹೇಳಿದಾಗ ತಕ್ಷಣವೇ ಅಲ್ಲಾಹನು ನಾನು ಅವರಿಗೆ ಹೇಳುತ್ತೇನೆ ಎಂದು ಹೇಳಿದನು. ಆ ಕಾರಣಕ್ಕೇ ಆಗಿತ್ತು ಮೇಲೆ ತಿಳಿಸಿದ ಕುರ್’ಆನ್ ಸೂಕ್ತವು ಅವತರಿಸಿದ್ದು.

ಇದರ ಬಗ್ಗೆ ಕುತೂಹಲಕಾರಿಯಾದ ಇನ್ನೊಂದು ಉಲ್ಲೇಖವನ್ನೂ ಕಾಣಬಹುದು. ಅಲ್ಲಾಹನ ದಾರಿಯಲ್ಲಿ ಹುತಾತ್ಮರಾದ ಜಾಬಿರ್’ರ ◌ؓ ಮಗನಾದ ಜಾಬಿರ್’ನ್ನು ಪ್ರವಾದಿಯವರು ﷺ ಭೇಟಿಯಾದಾಗ, ಅವರು ಬಹಳಷ್ಟು ಬೇಸರದಲ್ಲಿದ್ದರು. ಪ್ರವಾದಿಯವರು ﷺ ಕಾರಣ ಕೇಳಿದಾಗ, ನನ್ನ ತಂದೆಯವರು ಅಲ್ಲಾಹನ ದಾರಿಯಲ್ಲಿ ಹುತಾತ್ಮರಾಗಿ ಹೋದರು, ಈಗ ಸಾಲ ಕುಟುಂಬವೆಲ್ಲವು ಬಾಕಿಯಾಗಿದೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ನಿಮ್ಮ ತಂದೆಯನ್ನು ಅಲ್ಲಾಹನು ಹೇಗೆ ಸ್ವಾಗತಿಸಿದ್ದು ಎಂದು ನಿಮಗೆ ಗೊತ್ತಿದೆಯೇ.? ಎಂದು ಕೇಳಿದಾಗ, ಜಾಬಿರ್’ರು ◌ؓ ಇಲ್ಲ ಎಂದು ಹೇಳಿದರು. ಪ್ರವಾದಿಯವರು ﷺ ಮಾತು ಮುಂದುವರಿಸುತ್ತಾ, ಅಲ್ಲಾಹನು ಯಾರೊಂದಿಗೂ ಮುಸುಕಿನ ಹಿಂದಿನಿಂದಲ್ಲದೆ ಮಾತುಕತೆ ನಡೆಸಿರಲಿಲ್ಲ, ಆದರೆ ನಿಮ್ಮ ತಂದೆಯವರಲ್ಲಿ ಯಾವುದೇ ಮುಸುಕಿಲ್ಲದೆ ನೇರವಾಗಿ ಆಗಿತ್ತು ಮಾತುಕತೆ ನಡೆಸಿದ್ದು. ಆಗ ಅಲ್ಲಾಹನು ಅವರಲ್ಲಿ “ನನ್ನ ದಾಸನೇ ಈಗ ನೀನು ಬಯಸುದಾದರೂ ಏನು.? ಅದನ್ನು ನಾನು ನೆರೆವೇರಿಸಿ ಕೊಡುತ್ತೇನೆ” ಎಂದು ಹೇಳಿದಾಗ, ನಿಮ್ಮ ತಂದೆ ಹೇಳಿದ್ದು, ನನಗೆ ನೀನು ಪುನರ್ಜನ್ಮ ನೀಡಲು ಸಾಧ್ಯವಿದೆಯೇ.? ಹಾಗೆ ನೀಡಿದರೆ, ನಾನು ಮತ್ತೊಮ್ಮೆ ನಿನಗಾಗಿ ಹುತಾತ್ಮನಾಗಿ ಬರುತ್ತಿದ್ದೆ ಎಂದು ಹೇಳಿದರು ಎಂದಾಗಿತ್ತು.
ಅದಕ್ಕೆ ಅಲ್ಲಾಹನು…

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-260/365

ಅದಕ್ಕೆ ಅಲ್ಲಾಹನು ಅವರಲ್ಲಿ ಮರಣ ಹೊಂದಿದ ವ್ಯಕ್ತಿಯನ್ನು ಹಿಂತಿರುಗಿ ಕಳುಹಿಸಾಗುವುದಿಲ್ಲ ಎಂದು ಮೊದಲೇ ನಿಶ್ಚಯಿಸಿದ ಸಂಗತಿಯಾಗಿದೆ ಎಂದು ಹೇಳಿದಾಗ, ಅಬೂಜಾಬಿರ್’ರು ◌ؓ ಹಾಗಿದ್ದರೆ ನಾವು ಇರುವ ಈಗಿನ ಪರಿಸ್ಥಿತಿಯ ಬಗ್ಗೆ, ನಮ್ಮ ಈ ಜೀವನದ ಬಗ್ಗೆ ನೀನು ನಮ್ಮ ಹಿಂಬಾಲಕರಿಗೆ ತಿಳಿಸಿಕೊಡು ಎಂದು ಹೇಳಿದರು. ಆ ಕಾರಣಕ್ಕೆ ಆಗಿತ್ತು ಈ ಮೇಲಿನ ಸೂಕ್ತ ಅವತರಿಸಿದ್ದು ಎಂಬ ಅಭಿಪ್ರಾಯ ಇರುವುದು ಕೂಡ ಕಾಣಬಹುದು.
ತಮ್ಮ ಮರಣದ ನಂತರ ಹುತಾತ್ಮರಿಗೆ ಉಳಿದವರಿಗಿಂತ ವಿಭಿನ್ನವಾಗಿ, ಸುಂದರವಾದ ಜೀವನವನ್ನಾಗಿದೆ ಅಲ್ಲಾಹನು ನೀಡುವುದು ಎಂಬುದನ್ನು ನಾವು ವಿಶ್ವಾಸವಿರಿಸಬೇಕಾದದ್ದು ಕಡ್ಡಾಯವಾಗಿದೆ. ಇದನ್ನು ಕೇವಲವಾಗಿ ಕಾಣುವುದಾಗಲಿ, ಅದನ್ನು ವಿರೋಧಿಸುವುದಾಗಲಿ ಮಾಡುವುದು ಸರಿಯಲ್ಲ.

ಮುಸ್ಲಿಮರ ಸೇನೆಯಿಂದ ಬದ್ರ್ ರಣರಂಗದಲ್ಲಿ ಹುತಾತ್ಮರಾದದ್ದು ಒಟ್ಟು ಹದಿಮೂರು ಮಂದಿ ಆಗಿದ್ದರು. ಆದರೆ ಇನ್ನೊಂದು ಪ್ರಸಿದ್ಧ ಉಲ್ಲೇಖದ ಪ್ರಕಾರ ಹದಿನಾಲ್ಕು ಎಂದು ಇರುವುದು ಕಾಣಬಹುದು.

1. ದುಶ್ಶಿಮಾಲೈನಿ ಬಿನ್ ಅಂರ್ ◌ؓ : ಉಮೈರ್ ಬಿನ್ ಅಂರ್ ◌ؓ ಎಂದಾಗಿದೆ ಅವರ ನಿಜವಾದ ಹೆಸರು, ಅವರು ಮಕ್ಕಾದಲ್ಲಿ ಇಸ್ಲಾಮ್ ಸ್ವೀಕರಿಸಿದ್ದರು. ಬನೂ ಸಹ್’ರ ಬಿನ್ ಕಿಲಾಬ್’ನ ಆತ್ಮೀಯ ಮಿತ್ರರಾದ ಅವರು, ನಂತರದ ದಿನಗಳಲ್ಲಿ ಮದೀನಕ್ಕೆ ಪಲಾಯನ ಮಾಡಿದ್ದರು. ಝೈದ್ ಬಿನ್ ಖೈಸಮರ ಬಳಿ ತಲುಪಿದ ಅವರು, ಮದೀನದಲ್ಲಿ ಯಝೀದ್ ಬಿನ್ ಹಾರಿಸ್ ಬಿನ್ ಫುಸ್’ಹುಂರ ಆದರ್ಶ ಸಹೋದರನಾಗಿದ್ದರು. ಒಂದೇ ಸಂದರ್ಭದಲ್ಲಿ ಎರಡು ಕೈಗಳಿಂದ ಕೆಲಸ ಮಾಡುತ್ತಿದ್ದ ಕಾರಣ ಎರಡು ಕೈಯಲ್ಲಿ ಸಾಮರ್ಥ್ಯವಿರುವ ವ್ಯಕ್ತಿ ಎಂಬ ಅರ್ಥದಲ್ಲಿ ಅವರಿಗೆ ದುಶ್ಶಿಮಾಲೈನಿ ಎಂಬ ಹೆಸರು ಬಂದಿತು. ಬದ್ರ್’ನಲ್ಲಿ ಇವರ ಮೇಲೆ ದಾಳಿ ಮಾಡಿದ್ದು ಯಾರು ಎಂಬ ಮಾಹಿತಿ ಲಭ್ಯವಿಲ್ಲ, ಆ ಸಮಯದಲ್ಲಿ ಅವರ ವಯಸ್ಸು ಮುವ್ವತ್ತೆರಡು ಆಗಿತ್ತು.

2. ಸ್ವಫ್ವಾನ್ ಬಿನ್ ವಹಬ್ ◌ؓ: ತಾಯಿಯ ಹೆಸರಿನೊಂದಿಗೆ ಸೇರಿಸಿ, ಇಬ್’ನು ಅಲ್ ಬೈಳಾ ಅಥವಾ ಬೈಳಾಯಿಯ ಮಗ ಎಂಬ ಹೆಸರಿನಲ್ಲಿ ಅವರನ್ನು ಕರೆಯಲಾಗುತ್ತದೆ. ಅಬ್ದುಲ್ಲಾಹಿಬಿನು ಜೈಷಿಯವರ ◌ؓ ತಂಡದಲ್ಲಿ ಸೈನಿಕ ಕಾರ್ಯಾಚರಣೆ ಭಾಗವಾಗಿ ಕಾರ್ಯನಿರ್ವಹಿಸಿದ್ದರು. ಮದೀನದಲ್ಲಿ ಇವರ ಆದರ್ಶ ಸಹೋದರನಾಗಿ ಇದ್ದದ್ದು, ರಾಫಿ ಬಿನ್ ಅಲ್ ಮುಅಲ್ಲ ◌ؓ ಎಂಬ ಅನ್ಸಾರಿ ಆಗಿದ್ದರು. ತುಐಮತ್ ಬಿನ್ ಅದಿಯ್ಯಾನ್ ಆಗಿತ್ತು ಇವರನ್ನು ಬದ್ರ್ ರಣರಂಗದಲ್ಲಿ ಕೊಲೆಮಾಡಿದ್ದು. ಇವರು ಬದ್ರ್’ನಲ್ಲಿ ಕೊಲೆಯಾಗಿ ಇರಲಿಲ್ಲವೆಂದೂ, ನಂತರದ ಕಾಲದಲ್ಲಿ ಜೋರ್ಡಾನ್’ನಲ್ಲಿ ಅಮ್ಮಾವಸ್ ಪ್ಲೇಗ್ ತಗುಲಿ ಮರಣಹೊಂದಿದ್ದು ಆಗಿತ್ತೆಂದೂ, ಇವರ ಬಗ್ಗೆ ಅಭಿಪ್ರಾಯಗಳಿರುವುದು ಕಾಣಬಹುದು.

3. ಮೊದಲನೆದಾಗಿ ಮಕ್ಕಾದ ದಾರುಲ್ ಅರ್’ಖಮಿನಲ್ಲಿ ಪ್ರವಾದಿಯವರೊಂದಿಗೆ ﷺ ಒಪ್ಪಂದ ಮಾಡಿಕೊಂಡದ್ದು, ಆಖಿಲ್ ಹಾಗೂ ಅವರ ಸಹೋದರರಾದ ಆಮಿರ್, ಇಯಾಸ್ ಹಾಗೂ ಖಾಲಿದ್ ಆಗಿತ್ತು. ಅಂದು ಖಾಲಿದ್’ರ ಹೆಸರು ಗಾಫಿಲ್ (ಶ್ರದ್ಧೆ ಇಲ್ಲದವ) ಎಂದಾಗಿತ್ತು, ಅದನ್ನು ಬದಲಾಯಿಸಿ ಆಖಿಲ್ (ಬುದ್ದಿವಂತ) ಎಂಬ ಹೆಸರನ್ನು ಪ್ರವಾದಿಯವರು ﷺ ಕೊಟ್ಟರು. ಮದೀನಕ್ಕೆ ಪಲಾಯನ ಮಾಡಿ ತಲುಪಿದ್ದು, ರಿಫಾಅತ್ ಬಿನ್ ಅಬ್ದುಲ್ ಮುಂದಿರ್’ರ ◌ؓ ಬಳಿಯಾಗಿತ್ತು. ಆದರೆ ಇವರು ಆದರ್ಶ ಸಹೋದರನಾಗಿ ಇದ್ದದ್ದು, ಮುಬಷಿರ್ ಬಿನ್ ಅಬ್ದುಲ್ ಮುಂದಿರ್’ರ ಜೊತೆಯಲ್ಲಾಗಿತ್ತು, ಅವರಲ್ಲ ಮುಜಸ್ಸರ್ ಬಿನ್ ಝಿಯಾದ್ ◌ؓ ಎಂಬ ಅಭಿಪ್ರಾಯವೂ ಇದೆ. ಬದ್ರ್’ನಲ್ಲಿ ಕೊಲೆಯಾಗುವಾಗ ಮುವ್ವತ್ನಾಲ್ಕು ವಯಸ್ಸಾಗಿತ್ತು ಅವರಿಗೆ ಇದ್ದದ್ದು. ಮಾಲಿಕ್ ಬಿನ್ ಝುಹೈರ್ ಅಲ್ ಜುಷಮಿಕ್ ಎಂಬ ವ್ಯಕ್ತಿಯಾಗಿತ್ತು ಮಹಾನರನ್ನು ಕೊಲೆಮಾಡಿದ್ದು.

4. ಉಬೈದತ್ ಬಿನುಲ್ ಹಾರಿಸ್ ◌ؓ: ಪ್ರವಾದಿಯವರು ﷺ ದಾರುಲ್ ಅರ್’ಖಮಿನಲ್ಲಿ ಸೇರುವುದಕ್ಕೆ ಮುನ್ನವೇ.? ಉಬೈದರು ◌ؓ ಇಸ್ಲಾಮ್ ಸ್ವೀಕರಿಸಿದ್ದರು, ಪ್ರವಾದಿಯವರಿಗಿಂತ ﷺ ಹತ್ತು ವರ್ಷ ಹಿರಿಯ ವ್ಯಕ್ತಿಯಾಗಿದ್ದರು ಅವರು. ಸಹೋದರರಾದ ತುಫೈಲ್ ಹಾಗೂ ಹುಸೈನ್’ರ ಜೊತೆಯಲ್ಲಿ ಮದೀನಕ್ಕೆ ಪಲಾಯನ ಮಾಡಿ ಬಂದದಾಗಿತ್ತು ಅವರು. ಇವರಿಗೆ ಆದರ್ಶ ಸಹೋದರನಾಗಿ ಪ್ರವಾದಿಯವರು ﷺ ಬಿಲಾಲ್’ರನ್ನು ◌ؓ ಕೊಟ್ಟಿದ್ದರು. ಅವರಲ್ಲ ಉಮೈರ್ ಬಿನ್ ಅಲ್ ಹುಮಾಮಿಯವರಾಗಿದ್ದರು ◌ؓ ಎಂಬ ಅಭಿಪ್ರಾಯವೂ ಕೂಡ ಇದೆ. ಅರುವತ್ತು ಮುಹಾಜಿರ್’ಗಳು ಮಾತ್ರ ಇದ್ದ ಸೈನಿಕ ಕಾರ್ಯಾಚರಣೆ ರಾಬಗಿ ಎಂಬ ಸ್ಥಳಕ್ಕೆ ಹೊರಟಾಗ ಅದರ ಧ್ವಜ ಹಿಡಿದಿದ್ದದ್ದು ಇವರಾಗಿದ್ದರು. ಬದ್ರ್ ರಣರಂಗದಲ್ಲಿ ಶೈಬತ್ ಬಿನ್ ರಬೀಅನ ಜೊತೆಯಲ್ಲಿ ದ್ವಂದ ಯುದ್ಧ ನಡೆಸಿ, ಏಟು ತಿಂದು ಕೆಳಗೆ ಬಿದ್ದಾಗ, ಹಂಝ ◌ؓ ಹಾಗೂ ಅಲಿಯವರು ◌ؓ ಬಂದು ಶೈಬತ್ತನ್ನು ಸಾಯಿಸಿದ್ದರು. ಅದೇ ನೋವಿನಲ್ಲಿದ್ದ ಉಬೈದರು ಹಿಂತಿರುಗಿ ಹೋಗುವ ದಾರಿಯಲ್ಲಿ ಸೇಫ್ರಾಅ್’ನಲ್ಲಿ ಮರಣ ಹೊಂದಿದರು, ಅಂದು ಅವರಿಗೆ ಅರುವತ್ತು ಮೂರು ವಯ್ಯಸ್ಸಾಗಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-261/365

5. ಮಿಹ್’ಜಉ ಬಿನ್ ಸ್ವಾಲಿಹ್ ◌ؓ: ಆರಂಭದ ದಿನಗಳಲ್ಲೇ ಇಸ್ಲಾಂ ಸ್ವೀಕರಿಸಿದ್ದ ಅವರು ಉಮರ್’ರ ◌ؓ ಸೇವಕನಾಗಿದ್ದರು. ಅವರ ಮೇಲೆ ಕರುಣೆ ತೋರಿಸಿ ಉಮರ್’ರು ◌ؓ ಅವರನ್ನು ಗುಲಾಮಗಿರಿಯಿಂದ
ಮುಕ್ತಿಗೊಳಿಸಿದರು. ಮದೀನಕ್ಕೆ ಪಲಾಯನ ಮಾಡುವಾಗಲೂ ಹಾಗೆ ಆರಂಭದಲ್ಲೇ ಹೋಗಿದ್ದರು. ಬದ್ರ್ ರಣರಂಗದಲ್ಲಿ ಪ್ರವಾದಿಯವರ ﷺ ಜೊತೆ ಸೇರಿ ಯುದ್ಧದಲ್ಲಿ ಹೊರಾಡಿದ್ದ ಅವರು, ಪ್ರವಾದಿಯವರ ﷺ ಇಬ್ಬರು ಅನುಚರರ ನಡುವೆ ನಿಂತಿದ್ದರು. ಆಮಿರ್ ಬಿನ್ ಅಲ್ ಹಳ್’ರಮಿ ಎಂಬ ವ್ಯಕ್ತಿ ಬಿಟ್ಟ ಬಾಣವು ತಾಗಿ ರಣರಂಗದಲ್ಲೇ ಕುಸಿದು ಬಿದ್ದು ಮರಣ ಹೊಂದಿದರು. ಮಹಾಜಿರ್’ಗಳಿಂದ ಪ್ರಥಮವಾಗಿ ಹುತಾತ್ಮರಾದದ್ದು ಇವರೇ ಆಗಿದ್ದರು.

6. ಉಮೈರ್ ಬಿನ್ ಅಬೀ ವಖ್ಖಾಸ್ ◌ؓ: ಖ್ಯಾತ ಸ್ವಹಾಬಿ ಸಅದ್ ಬಿನ್ ಅಬೀ ವಖ್ಖಾಸ್’ರ ◌ؓ ಸಹೋದರನಾಗಿದ್ದರು ಅವರು. ಆರಂಭದಲ್ಲೇ ಮದೀನಕ್ಕೆ ಪಲಾಯನ ಮಾಡಿ ಬಂದಿದ್ದರು, ಹಾಗೂ ಸಅದ್ ಬಿನ್ ಮುಆದ್’ರ ◌ؓ ಸಹೋದರನಾದ, ಅಂರ್ ಬಿನ್ ಮುಆದ್’ರ ಆದರ್ಶ ಸಹೋದರನಾಗಿದ್ದರು. ಬದ್ರ್ ಯುದ್ಧದಲ್ಲಿ ಹೋರಾಡಲೆಂದು ಬಂದಾಗ, ಸಣ್ಣ ವಯ್ಯಸಿನ ಹುಡುಗನಾಗಿದ್ದ ಕಾರಣ ಅವರಿಗೆ ಪ್ರವಾದಿಯವರು ﷺ ಅನುಮತಿ ನೀಡರಲಿಲ್ಲ. ಆ ಸಂದರ್ಭದಲ್ಲಿ ಅವರು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಾಗ, ಬೇರೆ ದಾರಿಯಿಲ್ಲದೆ ಪ್ರವಾದಿಯವರು ﷺ ಅನುಮತಿ ನೀಡಿದರು. ಭೀಕರವಾದ ಹೋರಾಟದ ನಂತರ ರಣರಂಗದಲ್ಲೇ ಅವರು ಧೀರ ಮರಣ ಹೊಂದಿದರು. ಅಂರ್ ಬಿನ್ ಅಬ್ದುವುದ್ದ್ ಅಲ್ ಆಮಿರಿ ಎಂಬ ವ್ಯಕ್ತಿಯಾಗಿತ್ತು, ಈ ಹದಿನಾಲ್ಕರ ಹರೆಯದ ಬಾಲಕನನ್ನು ಕೊಲೆ ಮಾಡಿದ್ದು.

ಇನ್ನೂ ನಾವು ಅನ್ಸಾರಿಗಳಲ್ಲಿ ದೀರ ಮರಣ ಹೊಂದಿದ ಹುತಾತ್ಮರ ಬಗ್ಗೆ ತಿಳಿಯೋಣ.

7. ರಾಫಿಉ ಬಿನ್ ಅಲ್ ಮುಅಲ್ಲ ◌ؓ : ಖಝ್’ರಜ್ ವಂಶಸ್ಥನಾದ ಇವರನ್ನು, ಜನರು ಅಬೂಸಈದ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಸಫ್’ವಾನ್ ಬಿನ್ ಬೈಳಾರ ◌ؓ ಆದರ್ಶ ಸಹೋದರನಾಗಿದ್ದರು ಅವರು. ಇವರ ಸಹೋದರ ಹಿಲಾಲ್ ◌ؓ ಕೂಡ ಬದ್ರ್’ನಲ್ಲಿ ಹೊರಾಡಿದ್ದರು, ಇವರನ್ನು ಕೊಲೆ ಮಾಡಿದ್ದು ಇಕ್’ರಿಮತು ಬಿನ್ ಅಬೀಜಹಲ್ ಆಗಿತ್ತು.

8. ಹಾರಿಸ್ ಬಿನ್ ಸುರಾಖತ್ ಬಿನ್ ಮಾಲಿಕ್ ಬಿನ್ ಆಮಿರ್ ◌ؓ : ಅನಸ್’ರ ◌ؓ ಅತ್ತೆ ರಬಯ್ಯರ ಮಗನಾಗಿದ್ದರು ಇವರು. ಬದ್ರ್ ರಣರಂಗದಲ್ಲಿ ನಿರೀಕ್ಷಕನಾಗಿ ಕಾರ್ಯ ನಿರ್ವಹಿಸುತಿದ್ದ ಅವರು, ನೀರು ಕುಡಿಯಲೆಂದು ತೊಟ್ಟಿಯ ಬಳಿ ಬಂದು, ನೀರು ಕುಡಿಯಲೆಂದು ಪಾತ್ರೆಯನ್ನು ತುಟಿಗೆ ಇಟ್ಟ ಸಂದರ್ಭದಲ್ಲಿ, ದೂರದಿಂದ ಹಿಬ್ಬಾನ್ ಬಿನ್ ಅಲ್ ಅರ್’ಖ ಎಂಬ ವ್ಯಕ್ತಿಯು ಬಾಣ ಬಿಟ್ಟರು. ಅದು ನೇರವಾಗಿ ಹಾರಿಸ್’ರ ◌ؓ ಹೃದಯಯನ್ನು ಭೇದಿಸಿತು, ಅವರು ಅಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು. ಅನ್ಸಾರ್’ಗಳಲ್ಲಿ ಮೊದಲನೆದಾಗಿ ಹುತಾತ್ಮರಾದದ್ದು ಇವರೇ ಆಗಿದ್ದರು. ಮಗನ ವಿಯೋಗದಿಂದ ದುಃಖಿತರಾದ ಹಾರಿಸ್’ರ ತಾಯಿಯನ್ನು ಸಮಾಧಾನಿಸುವ ಘಟನೆಯನ್ನು ಈಗಾಗಲೇ ನಾವು ಓದಿದ್ದೇವೆ.

9. ಉಮೈರ್ ಬಿನ್ ಅಲ್ ಹುಮಾಂ ◌ؓ: ಖಝ್’ರಜ್’ಗಳಿಗೆ ಸೇರಿದ ಅನ್ಸಾರಿ ಸ್ವಹಾಬಿ (ಅನುಚರ) ಆಗಿದ್ದ ಅವರು, ಉಬೈದತ್ತು ಬಿನ್ ಅಲ್ ಹಾರಿಸ್’ರ ◌ؓ ಆದರ್ಶ ಸಹೋದರನಾಗಿದ್ದರು. ಒಂದು ಖರ್ಜುರ ತಿನ್ನುವಷ್ಟು ಸಮಯವನ್ನು ಪೋಲು ಮಾಡದೆ ಸ್ವರ್ಗವನ್ನು ಆಸೆ ಪಟ್ಟ ವ್ಯಕ್ತಿಯಾಗಿದ್ದರು ಅವರು. ವೀರಾವೇಶದಿಂದ ರಣರಂಗಕ್ಕೆ ಇಳಿದ ಅವರು, ಖಾಲಿದ್ ಬಿನ್ ಆಲಮ್’ನ ಜೊತೆಗಿನ ಹೋರಾಟದಲ್ಲಿ ಹುತಾತ್ಮರಾದರು.

10. ಸಅದ್’ಬಿನ್ ಖೈಸಮತು ಬಿನ್ ಅಲ್’ಹಾರಿಸ್ ◌ؓ: ಔಸ್ ಜನಾಂಗದ ಅನ್ಸಾರಿ ಸ್ವಹಾಬಿ ಆಗಿದ್ದರು ಅವರು. ಎರಡನೇ ಅಖಬದಲ್ಲಿ ಪ್ರವಾದಿಯವರೊಂದಿಗೆ ﷺ ಒಪ್ಪಂದ ಮಾಡಿಕೊಂಡಿದ್ದವರಲ್ಲಿ ಇವರೂ ಒಬ್ಬರಾಗಿದ್ದರು. ಅನ್ಸಾರಿಗಳ ಹನ್ನೆರಡು ಜನರ ಸಮಾಲೋಚನೆ ಸಮಿತಿಯ ಸದಸ್ಯರಾಗಿದ್ದರು ಇವರು. ಪ್ರವಾದಿಯವರು ﷺ ಮದೀನಕ್ಕೆ ತಲುಪಿದ್ದ ಸಂದರ್ಭದಲ್ಲಿ ಜನರನ್ನು ಸ್ವೀಕರಿಸಲು ಸಅದ್’ರ ಮನೆಯಲ್ಲಾಗಿತ್ತು ಸೇರುತ್ತಿದ್ದದ್ದು, ಅಬೂಸಲಮ ◌ؓ ಆಗಿದ್ದರು ಇವರ ಆದರ್ಶ ಸಹೋದರ. ಮಕ್ಕದಿಂದ ಬರುತ್ತಿದ್ದ ಮುಹಾಜಿರ್’ಗಳಿಗೆ ಸಅದ್’ರ ಮನೆಯು ಆಶ್ರಯ ಕೇಂದ್ರವಾಗಿತ್ತು, ಬಹಳ ಶೌರ್ಯದಿಂದ ಬದ್ರ್ ರಣರಂಗದಲ್ಲಿ ಹೋರಾಡಿದ ಇವರು, ಅಂರ್ ಬಿನ್ ಅಬ್ದುವುದ್ದ್’ರ ಜೊತೆಗಿನ ಹೋರಾಟದಲ್ಲಿ ಧೀರ ಮರಣ ಹೊಂದಿದರು. ಇದರ ಬಗ್ಗೆ ಅವರಲ್ಲ ತುಐಮತ್ ಬಿನ್ ಅದಿಯ್ಯನಾಗಿತ್ತು ಅವರನ್ನು ಕೊಂದದ್ದು ಎಂಬ ಅಭಿಪ್ರಾಯವೂ ಇದೆ, ಇವರ ತಂದೆ ಖೈಸಮ ಉಹ್’ದ್ ರಣರಂಗದಲ್ಲಿ ಹುತಾತ್ಮರಾದರು. ಬದ್ರ್’ನಲ್ಲಿ ಹೋರಾಡಲು ತಂದೆ ಮಗನ ನಡುವೆ ಚರ್ಚೆ ಉಂಟಾಗಿ ಚೀಟಿ ಹಾಕಿದಾಗ, ಮಗನ ಪರವಾಗಿ ಆಗಿತ್ತು ಚೀಟಿ ಬಂದಿದ್ದು. ಅಂದು ಅವರು ಹೇಳಿದ್ದ ಮಾತು ಪ್ರಸಿದ್ಧವಾಗಿತ್ತು “ಅಪ್ಪ ಬಹುಶಃ ಸ್ವರ್ಗಕ್ಕೆ ತಲುಪುವ ವಿಷಯ ಅಲ್ಲದೆ ಇರುತ್ತಿದ್ದರೆ.? ನಾನು ಈ ರೀತಿ ಮಾಡುತ್ತಿರಲಿಲ್ಲ” ಎಂದು. ಈ ಮಾತು ಸಅದ್’ರ ನೈಜ ವಿಶ್ವಾಸಕ್ಕೆ ಪ್ರಮಾಣವಾಗಿದೆ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-262/365

11. ಮುಬಶ್ಶಿರ್ ಬಿನ್ ಅಬ್ದಿಲ್ ಮುನ್’ದಿರ್ ◌ؓ: ಔಸ್ ಜನಾಂಗದ ಬನೂ ಉಮ್ಮಯ್’ಗೆ ಸೇರಿದ್ದ ಸ್ವಹಾಬಿ. ಆಖಿಲ್ ಬಿನ್ ಬುಕೈರಿನ ◌ؓ ಆದರ್ಶ ಸಹೋದರನಾಗಿದ್ದರು ಅವರು, ಅವರ ಸಹೋದರರಾದ ಅಬೂಲುಬಾಬ ಹಾಗೂ ರಿಫಾಅತ್ ಕೂಡ ಬದ್ರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು.

12. ಔಫ್ ಬಿನ್ ಅಲ್ ಹಾರಿಸ್ ◌ؓ: ಬನೂ ಗನಮ್’ಗೆ ಸೇರಿದ್ದ ಸ್ವಹಾಬಿ ಆಗಿದ್ದರು ಅವರು. ಬದ್ರ್’ನಲ್ಲಿ ಅಬ್ದು ರಹ್ಮಾನ್ ಬಿನ್ ಔಫ್’ರ ಜೊತೆ ನಿಂತಿದ್ದರು. ಅದೇ ರೀತಿ ಅವರ ಸಹೋದರ ಮಅವ್ವಿದ್ ◌ؓ ಕೂಡ ಇದ್ದರು, ಅಬೂಜಹಲ್’ನ ಮೇಲೆ ದಾಳಿ ಮಾಡಿದ ನಂತರ, ರಣರಂಗದಲ್ಲೇ ಕೊಲೆಯಾದರು.

13. ಮುಅವ್ವಿದ್ ಬಿನ್ ಅಲ್ ಹಾರಿಸ್ ◌ؓ: ಔಫ್ ಬಿನ್ ಅಲ್ ಹಾರಿಸ್’ನ ಸಹೋದರನಾಗಿರುವರು ಅವರು. ಅವರು ಅಬುಜಹಾಲ್’ನ ಮೇಲೆ ದಾಳಿ ಮಾಡಿದ ನಂತರ ಕೊಲೆಯಾದರು. ಇವರಿಬ್ಬರೂ ಕೂಡ ಅಖಬಾ ಒಪ್ಪಂದದಲ್ಲಿ ಪಾಲ್ಗೊಂಡಿದ್ದರು.

14. ಮುಆದ್ ಬಿನ್ ಅಲ್ ಹಾರಿಸ್ ◌ؓ: ಮುಅವ್ವಿದ್ ◌ؓ ಹಾಗೂ ಔಫ್’ರ ◌ؓ ಸಹೋದರನಾಗಿದ್ದರು ಇವರು. ಇವರು ಮೂವರನ್ನೂ ಕೂಡ ಅಫ್ರಾಅ್’ನ ಮಕ್ಕಳೆಂದೇ ಆಗಿತ್ತು ಕರೆಯುತ್ತಿದ್ದದ್ದು.

15. ಯಝೀದ್ ಬಿನ್ ಅಲ್ ಹಾರಿಸ್ ◌ؓ: ಹಾರಿಸ್ ಬಿನ್ ಖಝ್’ರಜ್’ನಿಂದ ಬಂದಿರುವ ಸ್ವಹಾಬಿ. ಇವರ ಆದರ್ಶ ಸಹೋದರ ದುಶ್ಶಿಮಾಲೈನಿ ಆಗಿದ್ದರು, ನೌಫಲ್ ಬಿನ್ ಮುಅವ್ವಿಯ್’ಯ ಜೊತೆಗಿನ ಹೋರಾಟದಲ್ಲಾಗಿತ್ತು ಇವರು ಹುತಾತ್ಮರಾದದ್ದು. ಅದಲ್ಲ ತುಐಮತು ಬಿನ್ ಅದಿಯ್ಯ್ ಆಗಿತ್ತು ಎಂಬ ಅಭಿಪ್ರಾಯವೂ ಇದೆ.

16. ಹಿಲಾಲ್ ಬಿನ್ ಅಲ್ ಮುಅಲ್ಲ. ಬನೂ ಜುಷಮ್ ಬಿನ್ ಖಝ್’ರಜಿನಿಂದ ಬಂದಿರುವ ಅನ್ಸಾರಿ ಸ್ವಹಾಬಿ. ಸಹೋದರ ರಿಫಾಯಿಯ ಜೊತೆಯಲ್ಲಿ ಬದ್ರ್’ನಲ್ಲಿ ಪಾಲ್ಗೊಂಡು ಧೀರ ಮರಣ ಹೊಂದಿದರು.

ಬದ್ರ್ ರಣರಂಗದಲ್ಲಿ ಹುತಾತ್ಮರಾದ ಧೀರ ಯೋಧರನ್ನು ಅಲ್ಲೇ ಸಮಾಧಿ ಮಾಡಲಾಯಿತು. ಈ ಸಮುದಾಯದಿಂದ ಮೊತ್ತ ಮೊದಲಾಗಿ ಸ್ವರ್ಗಕ್ಕೆ ಪ್ರವೇಶಿಸಲು ಅನುಮತಿ ಸಿಕ್ಕಿದ್ದು ಬದ್ರ್’ನಲ್ಲಿ ಧೀರ ಮರಣ ಹೊಂದಿದ್ದ ಮಿಹ್’ಜಅ್ ಆಗಿದ್ದರು. ಇವರ ಬಗ್ಗೆ ಪವಿತ್ರ ಕುರ್’ಆನಿನ ಇಪ್ಪತ್ತೊಂಬನೇ ಅಧ್ಯಾಯದ ಒಂದನೇ ಹಾಗೂ ಎರಡನೇ ಸೂಕ್ತದಲ್ಲಿ ವಿವರಿಸುವುದು.
“ಜನರು ಅಂದುಕೊಂಡಿದ್ದಾರ.? ನಾವು ವಿಶ್ವಾಸವಿರಿಸಿದ ಕಾರಣಕ್ಕೆ ಅವರನ್ನು ಪರೀಕ್ಷೆಗೋಳಪಡಿಸದೆ ಬಿಟ್ಟು ಬಿಡಲಾಗುವುದು ಎಂದು.?”

ಇವತ್ತಿಗೂ ಸಾವಿರಾರು ಜನರು ಬದ್ರ್ ಹುತಾತ್ಮರ ಸಂದರ್ಶನ ಮಾಡುತ್ತಾರೆ. ಇಂದು ಆ ಸ್ಥಳದಲ್ಲಿ ಆ ಊರಿನವರ ಸಮಾಧಿಯನ್ನು ಕೂಡ ಮಾಡಲಾಗುತ್ತಿದೆ. ಇವತ್ತಿನ ಅತ್ಯಾಧುನಿಕ ವ್ಯವಸ್ಥೆಗಳ ಮೂಲಕ ಬಹಳ ಸುಲಭವಾಗಿ ಬಹಳಷ್ಟು ಜನರು ಬಂದು ಝಿಯಾರತ್ ಮಾಡಿ ಹೋಗುತ್ತಾರೆ.
ಹುತಾತ್ಮರಾದ ಸೈನಿಕರು ಸ್ವರ್ಗಕ್ಕೆ ತಲುಪಿದ ಸಂತೋಷವನ್ನು ತಿಳಿಸಿ ಸಮಾರಾರ್ಜಿತ ವಸ್ತುಗಳ ಜೊತೆಯಲ್ಲಿ ಮುಸ್ಲಿಮರು ಹಿಂತಿರುಗಿವ ತಯಾರಿ ಮಾಡುತ್ತಿದ್ದರು.

ಪ್ರತಿ ಯುದ್ಧ ಕಳೆದ ನಂತರವೂ, ಪ್ರವಾದಿಯವರು ﷺ ರಣರಂಗವನ್ನು ನೋಡುತ್ತಿದ್ದರು. ರಣರಂಗದಲ್ಲಿ ಬಿದ್ದಿರುವ ಮೃತ ದೇಹಗಳನ್ನು ಸತ್ಯವಿಶ್ವಾಸಿಗಳ ಸೈನಿಕ, ಎದುರಾಳಿಗಳ ಸೈನಿಕ ಎಂಬ ವ್ಯತ್ಯಾಸವಿಲ್ಲದೆ ಎಲ್ಲಾ ಮೃತ ದೇಹಗಳನ್ನು ಅಲ್ಲೇ ಸಮಾಧಿ ಮಾಡಲು ಆದೇಶ ನೀಡುವರು. ಆದರೆ ಬದ್ರ್ ರಣರಂಗದಲ್ಲಿ ಎದುರಾಳಿಗಳ ಸೈನಿಕರ ಮೃತದೇಹವು ಅಧಿಕವಿದ್ದ ಕಾರಣ, ಬೇರೆ ಬೇರೆಯಾಗಿ ಸಮಾಧಿ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹಾಗಾಗಿ ಅವರೆಲ್ಲರ ಮೃತ ದೇಹವನ್ನು ಅಲ್ಲೇ ಪಕ್ಕದಲ್ಲಿದ್ದ ಹಾಳು ಬಾವಿಯ ಒಳಗೆ ಹಾಕಿ, ಅದರ ಮೇಲೆ ಮಣ್ಣು ಹಾಕಿ ಸಮಾಧಿ ಮಾಡಿದರು. ಅವರ ಸಮಾಧಿಯ ನಂತರ, ಪ್ರವಾದಿಯವರು ﷺ ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ, “ನಮಗೆ ಅಲ್ಲಾಹನು ಭರವಸೆ ನೀಡಿದ ಹಾಗೆ ಗೆಲವು ನೀಡಿದನು. ನಿಮಗೆ ನೀಡಿರುವ ಎಚ್ಚರಿಕೆ ನಿಮಗೆ ನೆನಪಿದೆ ಅಲ್ಲವೇ.?” ಎಂದು ಕೆಲವು ಉಪದೇಶಗಳನ್ನು ಕೊಟ್ಟರು.

ಮತ್ತೊಂದು ಭಾಗದಲ್ಲಿ, ಸೋಲನ್ನು ಎದುರಿಸಿ, ಸಹಿಸಲಾಗದ ನೋವನ್ನು ಅನುಭವಿಸುತ್ತಾ, ಮಕ್ಕಾದ ಪ್ರೀತಿಯ ಮಕ್ಕಳನ್ನು ಬದ್ರ್’ನ ಹಾಳು ಬಾವಿಯಲ್ಲಿ ಬಿಟ್ಟು ಹೋದರು. ಮಾನ, ಪ್ರಾಣ, ಜೀವನ ಎಲ್ಲವನ್ನೂ ಕಳೆದುಕೊಂಡ ಬೇಸರದಲ್ಲಿ ಊರಿಗೆ ಹಿಂತಿರುಗಿ ಹೋದರು. ಗಾನಮೇಳದೊಂದಿಗೆ ಸಂತೋಷದಿಂದ ಬಂದ ಸೇನೆಯು, ಸಹಿಸಲಾಗದ ನೋವಿನೊಂದಿಗೆ ಆಗಿತ್ತು ಹಿಂತಿರುಗಿ ಹೋದದ್ದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّم

Mahabba Campaign Part-263/365

ಬದ್ರ್’ನಿಂದ ಹಿಂತಿರುಗಿ ಬರುವಾಗ ಗೆಲುವಿನಿಂದ ಸಂತೋಷದಿಂದ ಹಿಂತಿರುಗಿ ಬರುವರು ಎಂದು ಅಂದುಕೊಂಡಿದ್ದ ಮಕ್ಕಾ ನಿವಾಸಿಗಳಿಗೆ ಬದ್ರ್’ನಿಂದ ಸಿಕ್ಕಿದ್ದು ದುಃಖದ ಸುರಿಮಳೆಯಾಗಿತ್ತು. ದುಃಖದ ವಾರ್ತೆಯನ್ನು ಮೊದಲು ಬಂದು ತಿಳಿಸಿದ್ದು, ಹೈಸಮಾನು ಬಿನ್ ಇಯಾಸ್ ಬಿನ್ ಅಬ್’ದಿಲ್ಲಾ ಎಂಬ ವ್ಯಕ್ತಿಯಾಗಿದ್ದರು. ಇವರು ಆ ಸಮೂಹದ ಒಬ್ಬ ನಾಯಕನೂ, ನಂತರದ ಕಾಲದಲ್ಲಿ ಇಸ್ಲಾಂ ಸ್ವೀಕರಿಸಿದ ವ್ಯಕ್ತಿಯೂ ಆಗಿದ್ದರು. ಅವರು ಬದ್ರ್’ನಿಂದ ಹಿಂತಿರುಗಿ ಬಂದಾಗ, ಮಕ್ಕ ನಿವಾಸಿಗಳು ಅವರಲ್ಲಿ ಯುದ್ಧದ ಹಾಗುಹೋಗುಗಳ ಬಗ್ಗೆ ಕೇಳಿದಾಗ, ಅವರು ಅಬುಲ್ ಹಕಮ್ ಬಿನ್ ಹಿಷಾಮ್, ಉತ್’ಬತ್ ಬಿನ್ ರಬೀಅಃ, ಶೈಬತ್ ಬಿನ್ ರಬೀಅಃ, ಸಂಅತ್ ಬಿನ್ ಅಸ್’ವದ್, ಉಮಯ್ಯತ್ ಬಿನ್ ಖಲಫ್, ನಬೀಹ್ ಮುನಬ್ಬಿಹ್, ಅಬುಲ್ ಬುಖ್’ತಿರಿ ಮುಂತಾದವರು ರಣರಂಗದಲ್ಲೇ ಕೊಲೆಯಾಗಿದ್ದಾರೆ ಎಂದು ಹೇಳಿದರು.

ಮಕ್ಕಾ ನಿವಾಸಿಗಳಿಗೆ ಇದನ್ನು ಕೇಳಿದರೂ, ಅದರ ಮೇಲೆ ನಂಬಿಕೆ ಬರಲಿಲ್ಲ. ಎಲ್ಲಾ ಪ್ರತಿಷ್ಠಿತ ನಾಯಕರು ಕೊಲೆಯಾದರು ಎಂದು ಹೇಳಿದಾಗ, ಮಕ್ಕಾದ ಜನರು ಹೈಸಮನಿಗೆ ಬಹುಶಃ ಹುಚ್ಚು ಹಿಡಿದಿರಬೇಕು ಎಂದು ಅಂದುಕೊಂಡಿದ್ದರು. ಆ ವಿಷಯವನ್ನು ಕೇಳಿದ ಸಫ್’ವಾನ್ ಬಿನ್ ಉಮಯ್ಯನಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗಿಲ್ಲ. ಅವನು ಖುರೈಷಿಗಳನ್ನು ಕರೆದು “ಇವರು ಏನೇನೋ ಹೇಳುತ್ತಿದ್ದಾರೆ, ಇವರಿಗೆ ನಾನು (ಸಫ್’ವಾನ್) ಎಲ್ಲಿದ್ದೇನೆ ಎಂದು ಕೇಳಿಯಂತೆ” ಎಂದು ಗೇಲಿ ಮಾಡಿದಾಗ, ಹೈಸಮ ಅವನು ಕಅಬಾದ ಬಳಿಯೇ ಇದ್ದಾನೆ, ಅವನ ತಂದೆ ಹಾಗೂ ಅವನ ಸಹೋದರ ಕೊಲೆಯಾಗಿರುವುದನ್ನು ಈಗಷ್ಟೇ ನಾನು ನೋಡಿ ಬಂದಿದ್ದೇನೆ ಎಂದು ಹೇಳಿದರು.

ಈ ಮಾತನ್ನು ಕೇಳಿ ಮಕ್ಕ ಜನತೆಯ ಆಕ್ರಂದನ ಮುಗಿಲು ಮುಟ್ಟಿತು. ಅವರು ತಲೆ ಬೋಳಿಸಿ, ಪ್ರಾಣಿಗಳನ್ನು ಕಡಿದು ಶೋಕಾಚರಣೆ ಮಾಡಿದರು. ಬದ್ರ್’ನಿಂದ ಹಿಂತಿರುಗಿ ಬರುವ ಕುದುರೆಗಳ, ಒಂಟೆಗಳ ಮುಂದೆ ತಮ್ಮ ಎದೆಗೆ ಹೊಡೆದು ಅಳುವ ಮಹಿಳೆಯರ ಗುಂಪೇ ಸೇರ ತೊಡಗಿತು. ಅನುಯಾಯಿಗಳನ್ನು ಸಮಾಧಾನ ಪಡಿಸಲು ಸಾಧ್ಯವಾಗದೆ, ಖುರೈಷಿ ನಾಯಕರು ಸೋತು ಹೋದರು. ಕೊನೆಗೆ ಅವರು ಇದಕ್ಕೆ ಖಂಡಿತ ಸೇಡು ತೀರಿಸಲೇ ಬೇಕು, ಇದನ್ನು ಹೀಗೆ ಸುಮ್ಮನೆ ಬಿಟ್ಟು ಬಿಡಬಾರದು ಎಂದು ಹೇಳುತ್ತಾ, ನೀವು ಹೀಗೆ ಅಳುತ್ತಾ ಕುಳಿತಿರುವುದು ಮುಹಮ್ಮದ್ ﷺ ಹಾಗೂ ಅವರ ಅನುಚರರಿಗೆ ತಿಳಿದರೆ ಖಂಡಿತ ಅವರು ಸಂತೋಷ ಪಡುವರು ಅದು ಆಗಕೂಡದು. ಹಾಗಾಗಿ ಈ ಕಿರಿಚಾಟ ಎಲ್ಲವನ್ನೂ ನಿಲ್ಲಿಸಿರಿ, ಅದೇ ರೀತಿ ಅವರ ಬಳಿ ಖೈದಿಯಾಗಿ ಇರುವ ವ್ಯಕ್ತಿಗಳನ್ನು ಸ್ವತಂತ್ರಗೊಳಿಸಲು ಅವಸರಪಡಬೇಡಿ ಕಾರಣ ಮುಹಮ್ಮದ್ ﷺ ಹಾಗೂ ಅವರ ಅನುಚರರು ಅದಕ್ಕಾಗಿ ದುಬಾರಿ ಮೊತ್ತವನ್ನು ಕೇಳಬಹುದು.

ವಿರಹದ ನೋವನ್ನು ಅತ್ತು ತೀರಿಸಲಾಗಲಿ, ಖೈದಿಗಳನ್ನು ಬಿಡಿಸಿಕೊಳ್ಳಲಾಗಲಿ ಆಗದೆ ಮಕ್ಕಾ ನಿವಾಸಿಗಳು ಒಳಗೊಳಗೆ ಬಹಳ ದುಃಖಪಟ್ಟರು. ನಿನ್ನೆಯ ವರೆಗೆ ಪ್ರವಾದಿಯವರು ﷺ ಹಾಗೂ ಅವರ ಅನುಚರರನ್ನು ಅವಮಾನ ಮಾಡುತ್ತಿದ್ದ ಜನರು ಇಂದು ಎಲ್ಲವನ್ನು ಕಳೆದುಕೊಂಡು ತಲೆ ತಗ್ಗಿಸಿ ನಿಂತಿರುವರು. “ಕಿಸ್ರಾ ಖೈಸರವನ್ನು ವಶಪಡಿಸಿಕೊಳ್ಳಲು ಯಾರಿದ್ದಾರೆ? ಇಲ್ಲಿದ್ದಾರೆ ಭೂಮಿಯ ರಾಜರುಗಳು” ಎಂಬ ರೀತಿಯಲ್ಲಿ ಸ್ವಹಾಬಿಗಳನ್ನು ಗೇಲಿ ಮಾಡಿದ್ದವರಲ್ಲಿ ಅಸ್’ವದ್ ಬಿನ್ ಸಂಅ ಕೂಡ ಒಬ್ಬನು. ಅವನೀಗ ದೃಷ್ಟಿ ಕಳೆದುಕೊಂಡು ನಿಂತಿದ್ದಾನೆ, ಅವನ ಮೂರು ಮಕ್ಕಳು ಕೂಡ ಬದ್ರ್’ನಲ್ಲಿ ಕೊಲೆಯಾಗಿದ್ದಾರೆ. ಅವನ ಆಕ್ರಂದನ ಮುಗಿಲು ಮುಟ್ಟಿತ್ತು, ಅಳಬೇಡಿ ಎಂದು ಖುರೈಷಿಗಳು ಹೇಳಿದ ನಂತರ, ಅಳಲು ಕೂಡ ಆಗುವುದಿಲ್ಲವಲ್ಲ ಎಂಬ ನೋವಿನಿಂದ ಒಳಗೊಳಗೆಯೇ ಕೊರಗ ತೊಡಗಿದನು. ಅವನು ತನ್ನ ಸೇವಕನನ್ನು ಕರೆದು ಆಗಾಗ ಕೇಳುತ್ತಿದ್ದನು, ಅಳಲು ಅನುಮತಿ ಸಿಕ್ಕಿದೆಯೇ ಎಂದು.? ಕೊನೆಗೆ ಸೇವಕನ ಜೊತೆಯಲ್ಲಿ ಕಾಡಿಗೆ ಹೋಗಿ ಯಾರೂ ಇಲ್ಲದ ಸ್ಥಳದಲ್ಲಿ ಅತ್ತು ಅತ್ತು ಸಮಾಧಾನ ಪಟ್ಟು ಬರುತ್ತಿದ್ದರು. ಹೀಗಿರುವಾಗ ಒಂದು ದಿನ ರಾತ್ರಿ ಒಬ್ಬಳು ಹೆಣ್ಣಿನ ಅಳುವ ಶಬ್ದವು ಕೇಳಲು ಸಾಧ್ಯವಾಯಿತು. ಅವರು ಸೇವಕನನ್ನು ಕರೆದು, ನೀನು ಹೋಗಿ ನೋಡಿ ಬಾ ಅಳಲು ಅನುಮತಿ ಸಿಕ್ಕಿದೆಯೇ ಎಂದು ಕಳುಹಿಸಿದನು. ಅವನು ಆ ಹೆಣ್ಣಿನ ಬಳಿ ಹೋಗಿ, ವಿಷಯ ತಿಳಿದು ಅವಳು ಅಳುತ್ತಿರುವುದು ತನ್ನ ಬಂಧುಗಳ ಕೊಲೆ ಆಗಿರುವುದಕ್ಕೆ ಅಲ್ಲ, ಬದಲಾಗಿ ತನ್ನ ಒಂಟೆ ಕಳೆದುಕೊಂಡ ಬೇಸರದಲ್ಲಾಗಿದೆ ಎಂದು ಹೇಳಿದನು. ಅದನ್ನು ಕೇಳಿ ಅಸ್’ವದ್’ನ ಬೇಸರವು ಇನ್ನಷ್ಟು ಅಧಿಕವಾಯಿತು, ಅದೇ ಬೇಸರದಲ್ಲಿ ಅವನು ಕವಿತೆ ಹೇಳಲು ಆರಂಭಿಸಿನು.

“ಅತಬ್’ಕಿ ಅನ್ ಯಳಿಲ್ಲ ಲಹಾ ಬಊರು..”

ಒಂಟೆ ಕಳೆದುಕೊಂಡ ಕಾರಣಕ್ಕೆ ಅವಳು ನಿದ್ರೆಯು ಮಾಡದೆ ಅಳುತಿದ್ದಾಳೆ

ಕಳೆದುಕೊಂಡ ಒಂಟೆಯನ್ನು ಬಿಟ್ಟು ಬದ್ರ್’ನಲ್ಲಿ ಕಳೆದುಕೊಂಡವರ ಬಗ್ಗೆ ದುಃಖ ಪಡು

ಅಬುಲ್ ವಲೀದ್’ನ ಗುಂಪನ್ನು ಹಾಗೂ ಮಖ್’ಸೂಮ್ ಹಝೀಝಿನ ಮಕ್ಕಳನ್ನು ನೆನೆದು ದುಃಖ ಪಡು ನೀನು

ನರಸಿಂಹ ಹಾರಿಸನನ್ನು ನೆನೆದು ಬೇಸರ ಪಡು ನೀನು, ಇನ್ನೂ ಅಳುವುದಾದರೆ ಅಬೂ ಅಖೀಲನ್ನೂ ಕೂಡ ನೆನೆದು

ಹೆಸರು ಲೆಕ್ಕ ಹಾಕದೆ ಎಲ್ಲರನ್ನು ಸ್ಮರಿಸು, ಆದ್ರೆ ಅಬುಲ್ ಹಕಮನ್ನು ಖಂಡಿತ ಮರೆಯಬೇಡ, ಅದರಲ್ಲಿ ಕೆಲವರು ನಾಯಕರಾಗಿದ್ದರು, ಬದ್ರ್ ಅವರಿಗೊಂದು ಅವಕಾಶ ನೀಡಿತ್ತು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-264/365

ಖುರೈಷಿಗಳ ಬಹಳಷ್ಟು ಉನ್ನತ ದರ್ಜೆಯ ನಾಯಕರು, ಬದ್ರ್’ನಲ್ಲಿ ಭಾಗವಹಿಸಿ ಸಾವನ್ನಪ್ಪಿದ್ದರು. ಇದರ ನಡುವೆ ನಾವು ಗಮನಿಸಬೇಕಾದ ಗಮನಾರ್ಹ ವಿಷಯವೇನೆಂದರೆ.? ಖುರೈಷಿಗಳ ಪ್ರತಿಷ್ಠಿತ ನಾಯಕರಲ್ಲಿ ಒಬ್ಬನಾದ ಅಬೂಲಹಬ್ ಬದ್ರ್’ಗೆ ಹೋಗಿರಲಿಲ್ಲ. ಅವನ ಬದಲಿಗೆ ಆಸ್ವ್ ಬಿನ್ ಹಿಷಾಮನ್ನು ನಾಲ್ಕು ಸಾವಿರ ದಿರ್’ಹಂ ಹಣವನ್ನು ಕೊಟ್ಟು ಕಳುಹಿಸಿದ್ದನು. ಅವನು ಸಈದ್ ಬಿನ್ ಆಸ್’ರ ◌ؓ ಕೈಯಿಂದ ಕೊಲ್ಲಲ್ಪಟ್ಟಿದ್ದನು. ಇದರ ಬಗ್ಗೆ ಅಬ್ಬಾಸ್’ರ ◌ؓ ಸೇವಕನಾದ ಅಬೂರಾಫಿ ಹೇಳುವುದು ಕಾಣಬಹುದು, ಬದ್ರ್’ನಿಂದ ಬರುತ್ತಿದ್ದ ಸುದ್ದಿಗಳನ್ನು ಕೇಳಿ, ಮಕ್ಕಾ ನಿವಾಸಿಗಳು ಗೊಂದಲಕ್ಕೆ ಒಳಗಾಗಿದ್ದರು. ನಾವು ಮಕ್ಕಾದ ಸೈನಿಕರಿಗಾಗಿ ಝಂಝಂ ಬಾವಿಯ ಬಳಿಯಿರುವ ಒಂದು ಕೋಣೆಯಲ್ಲಿ, ಬಾಣ ತಯಾರು ಮಾಡುತ್ತಿದ್ದೆವು. ಆದರೂ ನಮ್ಮ ಮನಸ್ಸಿನ ಒಳಗಿದ್ದ ಸತ್ಯ ವಿಶ್ವಾಸವು ನಮ್ಮನ್ನು ಒಳಗೊಳಗೆ ಬಹಳಷ್ಟು ಸಂತುಷ್ಟಗೊಳಿಸಿತ್ತು. ಆದರೂ ಅದನ್ನು ಹೊರಗೆ ತೋರಿಸುವಂತೆ ಇರಲಿಲ್ಲ.

ಕೊನೆಗೆ ಈ ಸುದ್ದಿಯು ಅಬೂಲಹಬಿನ ಕಿವಿಗೂ ಬಿತ್ತು. ಅದನ್ನು ಕೇಳಿ ಅವರಿಗೆ ಬಹಳಷ್ಟು ಆಘಾತ ವಾಗಿತ್ತು. ಹೀಗಿರುವಾಗ ಅವರು ನಾವು ಬಾಣ ತಯಾರಿಸುತ್ತಿದ್ದ ಕೋಣೆಯ ಒಳಗೆ ಬಂದು, ಶಿಬಿರಕ್ಕೆ ಕಟ್ಟಿ ಹಾಕಿದ್ದ ಹಗ್ಗದ ಮೇಲೆ, ನನಗೆ ನೇರವಾಗಿ ಬಂದು ಕುಳಿತರು. ಅಷ್ಟೊತ್ತಿಗೆ ಯಾರೋ ಒಬ್ಬರು, ಅಬೂಸೂಫಿಯಾನ್ ಬಿನ್ ಅಲ್ ಹಾರಿಸ್ ಬಂದಿದ್ದಾರೆ ಎಂದು ಹೇಳಿದರು. ಅಬೂಲಹಬ್, ಅಬುಸೂಫಿಯಾನ್’ರಲ್ಲಿ ಏನಾದರೂ ವಿಶೇಷತೆ ಇದೆಯೇ.? ಎಂದು ಕೇಳಿದಾಗ, ಅಬೂಸುಫಿಯಾನ್, ಅಬೂಲಹಬಿನ ಬಳಿ ಬಂದು ಕುಳಿತು ಎಲ್ಲಾ ವಿಷಯಗಳನ್ನು ಹೇಳಲು ಆರಂಭಿಸಿದರು. ಅದರ ಬಗ್ಗೆ ಏನೂ ಹೇಳಿಯೂ ಪ್ರಯೋಜನವಿಲ್ಲ, ನಾವು ಎದುರಿಸಿದ ಸೈನ್ಯವು, ಅವರ ಇಷ್ಟದಂತೆ ಸಾಯಿಸಲು, ಸೈನಿಕರನ್ನು ಬಂಧಿಸಲು ನಾವೇ ಬಿಟ್ಟು ಕೊಟ್ಟ ಹಾಗಿತ್ತು. ದೇವರಾಣೆಗೂ, ಅದು ನಮ್ಮ ಸೈನಿಕರ ಕೊರತೆಯಲ್ಲ, ಆಕಾಶ ಭೂಮಿಯ ನಡುವಿನಿಂದ ಹಲವಾರು ಬಿಳಿ ಹಾಗೂ ಕಪ್ಪು ಬಣ್ಣದ ಕುದುರೆಗಳು ಬರಲು ಆರಂಭಿಸಿದವು, ಅವುಗಳ ಮೇಲೆ ಕೆಲವರು ಕುಳಿತಿದ್ದರು. ಅವರ ಮುಂದೆ ನಮ್ಮ ಸೈನಿಕರು ಏನೂ ಮಾಡಲಾಗದೆ ಸುಮ್ಮನೆ ನಿಂತು ಕೊಳ್ಳಬೇಕಾಯಿತು.

ನಂತರ ಅಬೂರಾಫಿ ಮಾತು ಮುಂದುವರಿಸುತ್ತಾ, ಆ ಮಾತುಗಳನ್ನು ಕೇಳಿ ನಾನು ಅವರ ನಡುವೆ ಹೋಗಿ, ಅವರೆಲ್ಲರೂ ಮಲಕ್’ಗಳು ಆಗಿರುವರು ಎಂದು ಕೂಗಿ ಹೇಳಿದೆನು. ಆದರೆ ಆ ಮಾತು ಅಬೂಲಹಬಿಗೆ ಇಷ್ಟವಾಗಿರಲಿಲ್ಲ ಹಾಗಾಗಿ ಅವನು ನನ್ನ ಮೇಲೆ ಮುಗಿಬಿದ್ದು, ನನ್ನನ್ನು ಕೆಳಗೆ ತಳ್ಳಿ ಹಾಕಿ, ಅವನ ಮಂಡಿಯನ್ನು ನನ್ನ ಮೇಲೆ ಇಟ್ಟು, ನನ್ನನ್ನು ಹೊಡೆಯಲು ಆರಂಭಿಸಿದನು. ನಾನು ದುರ್ಬಲನಾಗಿದ್ದ ಕಾರಣ, ಏನೂ ಮಾಡಲು ಸಾಧ್ಯವಾಗದೆ ಸುಮ್ಮನೆ ನಿಂತುಕೊಳ್ಳಬೇಕಾಯಿತು. ಆದರೆ ಅಬ್ಬಾಸ್’ನ ಪತ್ನಿ ತಕ್ಷಣ ಓಡಿಬಂದು, ಯಜಮಾನ ಇಲ್ಲದ ಸಮಯದಲ್ಲಿ ಅವನ ಸೇವಕನ ಮೇಲೆ ಹಲ್ಲೆ ನಡೆಸುತ್ತಿದ್ದೀರೆ.? ಎಂದು ಕೋಪದಲ್ಲಿ ಹೇಳುತ್ತಲೇ, ಅಬೂಲಹಬಿನ ತಲೆಗೆ ಹೊಡೆದರು.

ಅಬೂಲಹಬ್ ಅವಮಾನದಿಂದ, ಏನೂ ಮಾತಾಡದೆ ಸುಮ್ಮನೆ ಎದ್ದುನಿಂತನು. ಬದ್ರ್’ನಲ್ಲಿ ಸೋತ, ಬೇಸರ ಹಾಗೂ ನೊಂದ ಮನಸ್ಸಿನಿಂದ ಕೋರುಗುತ್ತಲೇ, ಒಂದು ವಾರದ ನಂತರ ಸಿಡುಬು ರೋಗಕ್ಕೆ ತುತ್ತಾಗಿ ಮರಣ ಹೊಂದಿದನು. ಎಲ್ಲಿ ನಮಗೂ ರೋಗ ಹರಡಬಹುದೇ.? ಎಂಬ ಭಯದಿಂದ ಸ್ವಂತ ಮಕ್ಕಳು ಕೂಡ ಅವರಿಂದ ದೂರ ಸರಿದು ಬಿಟ್ಟರು. ಕೊನೆಗೆ ಮೃತ ದೇಹ ಊದಿಕೊಂಡು, ಸಹಿಸಲು ಅಸಾಧ್ಯವಾದ ದುರ್ವಾಸನೆ ಬರಲು ಆರಂಭವಾದಾಗ ಮಕ್ಕಳು ಗಾಬರಿಗೊಂಡರು. ಕೊನೆಗೆ ಅವನ ಶರೀರದ ಮೇಲೆ ನೀರು ಎರಚಿ, ಕಟ್ಟಿಗೆ ತುಂಡಿನಿಂದ ದೂರದಿಂದಲೇ ಗುಂಡಿಯ ಒಳಗೆ ತಳ್ಳಿ ಹಾಕಿ ಸಮಾಧಿ ಮಾಡಿದರು.

ಪ್ರವಾದಿಯವರು ﷺ ಸತ್ಯ ಸಂದೇಶದ ಘೋಷಣೆ ಮಾಡಿದ್ದ ಸಂದರ್ಭದಲ್ಲಿ, ತಬ್ಬಲ್ ಅಥವಾ ನಾಶ ಎಂದು ಕೂಗಿ ಹೇಳಿದ್ದ ವ್ಯಕ್ತಿಯು, ಮಕ್ಕಾ ನಿವಾಸಿಗಳ ನಡುವೆ ನಾಶವಾಗಿ ಹೋದನು. ಪವಿತ್ರ ಕುರ್’ಆನಿನ ನೂರಹದಿನೊಂದನೇ ಅಧ್ಯಾಯವು ಸಾಕ್ಷಾತ್ಕಾರವಾದ ಸಂದರ್ಭವಾಗಿತ್ತು ಅದು. “ಅಬೂಲಹಬಿನ ಎರಡು ಕೈಗಳು ನಾಶವಾಗಲಿ, ಅವನಿಗೆ ನಾಶವಾಗಿದೆ, ಅವನ ಸಂಪತ್ತಾಗಲಿ, ಅವನ ಮಕ್ಕಳಾಗಲಿ ಅವನಿಗೆ ಉಪಯೋಗಕ್ಕೆ ಬರಲಾರವು. ಅವನು ಬೆಂಕಿಯ ಜ್ವಾಲೆಯಾದ ನರಕಕ್ಕೆ ಹೋಗಿ ಸೇರುವನು.”

ಪ್ರವಾದಿಯವರನ್ನು ﷺ ಗೇಲಿ ಮಾಡಿ ಅಹಂಕಾರದಿಂದ ಮೆರೆಯುತ್ತಿದ್ದ ಒಂದು ಗುಂಪು, ಬದ್ರ್’ನಲ್ಲಿ ಕೊನೆಗೊಂಡಿತು. ಬದ್ರ್’ನಲ್ಲಿ ಭಾಗವಹಿಸದೆ ಮನೆಯಲ್ಲಿ ಕುಳಿತರೆ, ರಕ್ಷೆ ಹೊಂದಬಹುದು ಎಂದು ಭಾವಿಸಿದವರೂ ಕೂಡ ಬಾಕಿಯಗಲಿಲ್ಲ. ಕಾಲವೇ ನೇರವಾಗಿ ಪಾಠ ಕಲಿಸಿದ ದಿನಗಳ ಮೂಲಕವಾಗಿದೆ, ಇನ್ನೂ ಮುಂದಿನ ಪಯಣ ಸಾಗಬೇಕಾದದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-265/365

ಬದ್ರ್ ಯುದ್ಧವು ಕೊನೆಗೊಂಡಿತು. ಅದರ ಜೊತೆಯಲ್ಲಿ ಜಗತ್ತಿಗಾಗಿ ಕೆಲವೊಂದು ವಿಷಯಗಳನ್ನು ಶಾಶ್ವತವಾಗಿ ತೀರ್ಮಾನಿಸಬೇಕಾದ ಪರಿಸ್ಥಿತಿಯೂ ಉಂಟಾಗಿತ್ತು. ಮಕ್ಕಾದಲ್ಲಿ ದಿನದಿಂದ ದಿನಕ್ಕೆ, ಸತ್ಯ ಸಂದೇಶವು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡಿ ಸಾವಿರಾರು ಜನರು ಸತ್ಯ ಸಂದೇಶವನ್ನು ಒಪ್ಪಿಕೊಳ್ಳಲು ಆರಂಭಿಸಿದ್ದರು. ಹೀಗೆ ಹಲವಾರು ಜನರು ಇಸ್ಲಾಮಿನ ಆದರ್ಶವನ್ನು ಒಪ್ಪಿಕೊಳ್ಳಲು ಆರಂಭಿಸಿದಾಗ, ಇಸ್ಲಾಮ್ ಸಾಮಾಜಿಕ ವ್ಯವಹಾರಗಳ ಬಗ್ಗೆ ಅನಿವಾರ್ಯವಾಗಿ ತಿಳಿಯಲೇ ಬೇಕಾದ ಪರಿಸ್ಥಿತಿ ಬಂದಾಗ, ಸಾಮಾಜಿಕ ಶಿಕ್ಷಣಗಳನ್ನು ಕಲಿಸಲು ಆರಂಭಿಸಿತು. ನಂತರ ಸಹನೆ ಹಾಗೂ ಸಹಿಷ್ಣುತೆಯನ್ನು ಕಲಿಸುತ್ತಿದ್ದ ಇಸ್ಲಾಮಿಗೆ, ಅನಿವಾರ್ಯವಾಗಿ ಪ್ರತಿರೋಧವನ್ನು ಎದುರಿಸಬೇಕಾಗಿ ಬಂದಿತು. ಆ ಸಂದರ್ಭದಲ್ಲಿ ಬದುಕಿನ ಬಗ್ಗೆ ಮಾತಾಡಬೇಕಾಗಿ ಬಂದಿತು. ಹಾಗಾಗಿ ಪ್ರತಿರೋಧಕ್ಕಾಗಿ ಆಯುಧಗಳನ್ನು ಎತ್ತಬೇಕಾಯಿತು, ಆ ಕಾರಣದಿಂದ ಇಸ್ಲಾಂ ಉತ್ತಮ ರೀತಿಯ ಸುಂದರ ವಾತಾವರಣ ಉಂಟಾಯಿತು. ಚಾಟಿ ಏಟಿನಿಂದ ತತ್ತರಿಸಿದ ಜನರು, ತಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಲು ಬಹಳಷ್ಟು ಸಹಿಸಬೇಕಾಗಿತ್ತು, ದಬ್ಬಾಳಿಕೆ ಸಹಿಸಲು ಅಸಾಧ್ಯವಾದಾಗ ಪಲಾಯನ ಮಾಡಬೇಕಾಗಿ ಬಂದಿತ್ತು. ಪಲಾಯನ ಮಾಡಿದ ಸ್ಥಳದಲ್ಲೂ ನೆಮ್ಮದಿಯಿಂದ ಜೀವಿಸಲು ಬಿಡದೆ ಇದ್ದಾಗ, ಅನಿವಾರ್ಯವಾಗಿ ಪ್ರತಿರೋಧವನ್ನು ಮಾಡಲೇ ಬೇಕಾಯಿತು. ಗೆದ್ದ ನಂತರ ಯಾವುದೇ ಕಾರಣಕ್ಕೂ ಅಹಂಕಾರದಿಂದ ವರ್ತಿಸಬೇಡಿರಿ ಎಂದು ಹೇಳಿದ್ದರು. ಇನ್ನೂ ತಮ್ಮ ಬಂಧನದಲ್ಲಿರುವ ಖೈದಿಗಳನ್ನು ಏನು ಮಾಡಬೇಕು ಎಂಬ ಚರ್ಚೆಗಳನ್ನಾಗಿದೆ ನಡೆಸಬೇಕಾದದ್ದು.

ಬದ್ರ್’ನಲ್ಲಿ ಎಪ್ಪತ್ತು ಎದುರಾಳಿ ಸೇನೆಯ ಸೈನಿಕರ ಕೊಲ್ಲಲ್ಪಟ್ಟಿದ್ದರು. ಬಹುತೇಕ ಅಷ್ಟೇ ಜನರನ್ನು ಖೈದಿಗಳಾಗಿ ಬಂಧಿಸಲಾಗಿತ್ತು. ಇನ್ನೂ ಈ ಖೈದಿಗಳನ್ನು ಏನು ಮಾಡಬೇಕು.? ಅವರಲ್ಲಿ ಯಾವ ರೀತಿ ವರ್ತಿಸಬೇಕು.? ಎಂಬ ವಿಷಯದಲ್ಲಿ ಕುರ್’ಆನ್ ನೇರವಾಗಿ ಯಾವುದೇ ವಿಷಯವನ್ನು ತಿಳಿಸಿರಲಿಲ್ಲ. ಪ್ರವಾದಿಯವರು ﷺ ಕೂಡ ಇದರ ಬಗ್ಗೆ ಏನೂ ಹೇಳಿರಲಿಲ್ಲ. ಹಾಗಾಗಿ ಇದರ ಬಗ್ಗೆ ತಮ್ಮ ಅನುಚರರಲ್ಲಿ ಚರ್ಚೆ ಮಾಡಲು ಆರಂಭಿಸಿದರು. ಎಲ್ಲಾ ನಿಯಮಗಳನ್ನು ಜನರಿಗೆ ತಲುಪಿಸಲು ಕೆಲವೊಂದು ದಾರಿಗಳು ಇರುತ್ತಿತ್ತು. ಕೆಲವೊಮ್ಮೆ ಅಲ್ಲಾಹನು ನೇರವಾಗಿ ತಿಳಿಸುತ್ತಿದ್ದನು. ಕೆಲವೊಮ್ಮೆ ಪ್ರವಾದಿಯವರ ﷺ ಮೂಲಕ ತಿಳಿಸಿಕೊಡುವನು. ಇಲ್ಲಿಯೂ ಕೂಡ ಅದೇ ರೀತಿಯ ಚರ್ಚೆಗಳನ್ನಾಗಿದೆ ಅನುಸರಿಸಿದ್ದು.

ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ, ಚರ್ಚೆಗಳನ್ನು ನಡೆಸಲು ಆರಂಭಿಸಿ, ಅವರ ಅಭಿಪ್ರಾಯವನ್ನು ತಿಳಿಸಲು ಸಂಪೂರ್ಣ ಅನುಮತಿಯನ್ನು ನೀಡಿದರು. ಪ್ರವಾದಿಯವರ ﷺ ಅನುಚರರಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನವಾದ ಚಿಂತನೆಗಳಿವೆ, ಕೆಲವರಿಗೆ ಶೌರ್ಯತೆಯಾದರೆ, ಇನ್ನೂ ಕೆಲವರಿಗೆ ಉದಾರತೆ ಈ ರೀತಿಯ ವಿವಿಧ ಚಿಂತನೆಗಳ ನಡುವಿನ ಅನುಚರರ ಮಧ್ಯೆಯಾಗಿದೆ ಚರ್ಚೆಗಳನ್ನು ನಡೆಸುತ್ತಿರುವುದು. “ಅಬೂಬಕ್ಕರ್ ◌ؓ ಮುಂದೆ ಬಂದು, ಖೈದಿಗಳೆಲ್ಲರೂ ನಮ್ಮದೇ ಜನರಾಗಿರುವರು, ಅವರೆಲ್ಲರೂ ನಮ್ಮ ಸಹೋದರರಾಗಿರುವರು, ಚಿಕ್ಕಪ್ಪನ ಮಕ್ಕಳು, ಮಾವನ ಮಕ್ಕಳು ಹೀಗೆ ನಮ್ಮ ಸಂಬಂಧಿಕರೆ ಆಗಿರುವರು. ಅವರ ಮೇಲಿನ ಎಲ್ಲಾ ಅಧಿಕಾರವನ್ನು ಈಗ ನಿಮಗೆ ಅಲ್ಲಾಹನು ನೀಡಿರುವನು, ಹಾಗಾಗಿ ಅವರಿಂದ
ವಿಮೋಚನೆಯ ಮೌಲ್ಯಗಳನ್ನು ಪಡೆದು ಅವರನ್ನು ಬಿಡುಗಡೆ ಮಾಡಿ ಕಳುಹಿಸೋಣ ಎಂಬುದಾಗಿದೆ ನನ್ನ ಅಭಿಪ್ರಾಯ, ನಾವು ಅವರಿಂದ ಪಡೆಯುವ ಮೌಲ್ಯವು, ಸತ್ಯನಿಷೇಧಿಗಳ ಎದುರು ಒಂದು ಬಲವಾಗಲಿದೆ, ತಮ್ಮ ಈ ರೀತಿಯ ತೀರ್ಮಾನದಿಂದ ಯಾರಾದರೂ ಸತ್ಯ ದಾರಿಗೆ ಬಂದು, ನಮ್ಮೊಂದಿಗೆ ಸೇರಲು ಬಹುದು ಎಂದು ಹೇಳಿದರು.”

ಅಬೂಬಕ್ಕರ್’ರ ಮಾತುಗಳನ್ನು, ಪ್ರವಾದಿಯವರು ﷺ ಗಮನವಿಟ್ಟು ಕೇಳುತ್ತಿದ್ದರು. ಆದರೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟರಲ್ಲಿ ಉಮರ್ ◌ؓ ಎದ್ದುನಿಂತು, “ಪ್ರವಾದಿಯವರೇ ﷺ, ಅವರು ನಿಮ್ಮನ್ನು ವಿರೋಧಿಸಿದರು, ನಿಂದಿಸಿ, ಊರಿಂದ ಹೊರಗೂ ಹಾಕಿದರು. ಅಷ್ಟೇಯಲ್ಲ ನಿಮ್ಮ ವಿರುದ್ಧ ಯುದ್ಧವನ್ನು ಸಾರಿದರು, ಹಾಗಾಗಿ ಅಬೂಬಕ್ಕರ್’ರ ಅಭಿಪ್ರಾಯ ನನಗಿಲ್ಲ, ನಿಮ್ಮ ಬಳಿ ಖೈದಿಗಳು ಇರಬೇಕು ಎಂಬ ಅಭಿಪ್ರಾಯ ನನಗಿಲ್ಲ, ಈ ಖೈದಿಗಳಲ್ಲಿರುವ ನನ್ನ ಸಂಬಂಧಿಕರನ್ನು ನನಗೆ ಒಪ್ಪಿಸಿ, ನಾನು ಅವರ ತಲೆಯನ್ನು ತುಂಡರಿಸಿ ಬಿಡುತ್ತೇನೆ. ಅಲಿಯವರಿಗೆ ◌ؓ ಸಹೋದರ ಅಖೀಲನ್ನು, ಹಂಝ’ರಿಗೆ ◌ؓ ಸಹೋದರ ಅಬ್ಬಾಸ್’ರನ್ನು, ಹೀಗೆ ಒಬ್ಬೊಬ್ಬರಿಗೆ ಅವರವರ ಸಂಬಂಧಿಗಳನ್ನು ನೀಡಿರಿ, ಅವರು ಅವರ ತಲೆಯನ್ನು ಕತ್ತರಿಸಲಿ. ಅದರೊಂದಿಗೆ ಮುಸ್ಲಿಮರಿಗೆ ಸತ್ಯ ನಿಷೇಧಿಗಳಲ್ಲಿ ಯಾವುದೇ ಕರುಣೆ ಇಲ್ಲ ಎಂದು ತಿಳಿಯಲಿ. ಈ ಸಂಬಂಧಿಕರೆಲ್ಲರೂ ಖುರೈಷಿಗಳ ನಾಯಕರು ಅಲ್ಲವೇ.? ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-266/365

ಪ್ರವಾದಿ ﷺ ಅಬೂಬಕರ್ (ರ) ಮತ್ತು ಉಮರ್ (ರ) ಅವರ ಅಭಿಪ್ರಾಯಗಳನ್ನು ಆಲಿಸಿದರು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಅಬ್ದುಲ್ಲಾಹಿ ಬಿನ್ ರವಾಹ(ರ) ಹೇಳತೊಡಗಿದರು. “ಹೆಚ್ಚು ಮರವಿರುವ ಕಣಿವೆಯನ್ನು ಹುಡುಕಿ. ಅಲ್ಲಿ ಎಲ್ಲರನ್ನು ಕೂಡಿಹಾಕಿ ಸುಟ್ಟುಹಾಕಿ.” ಈ ಅಭಿಪ್ರಾಯ ಸ್ವಲ್ಪ ಕಠಿಣವಾಗಿತ್ತು. ಇದನ್ನು ಕೇಳಿದ ಇಬ್ನ್ ಅಬ್ಬಾಸ್ (ರ) ಮಧ್ಯಪ್ರವೇಶಿಸಿದರು. “ನಿನ್ನ ಸಂಬಂಧಿಕರೆಲ್ಲರೂ ಒಟ್ಟಿಗೆ ನಾಶವಾಗುತ್ತಾರೆ ಮತ್ತೆ ನಿನಗೆ ವಿಷಾದ ಜೀವನದೊಂದಿಗೆ ಬದುಕಬಹುದು!”

ಇಷ್ಟೆಲ್ಲಾ,ಘಟನೆ ನಡೆಯುವಾಗ ಸಹಾಬಿಗಳು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ಮತ್ತು ಅವರಲ್ಲಿ ಕೆಲವರು ಅಬೂಬಕರ್ (ರ)ರವರನ್ನು ಬೆಂಬಲಿಸಿದರು.ಇನ್ನು ಕೆಲವರು ಉಮರ್ (ರ)ರವರ ಅಭಿಪ್ರಾಯವನ್ನು ಒಪ್ಪಿದರು.ಇಬ್ನ್ ರವಾಹ್ (ರ) ರವರ ಅಭಿಪ್ರಾಯ ವನ್ನು ಬೆಂಬಲಿಸುವವರೂ ಅಲ್ಪಪ್ರಮಾಣದಲ್ಲಿ ಇದ್ದರು.

ಪ್ರವಾದಿ ﷺ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಗುಡಿಸಲನ್ನು ಪ್ರವೇಶಿಸಿದರು. ಅಬೂಬಕರ್ (ರ) ರವರ ಅಭಿಪ್ರಾಯದ ಕಡೆಗೆ ಪ್ರವಾದಿ ﷺ ರವರ ಒಲವಿತ್ತು.ಪ್ರವಾದಿ ﷺ ಗುಡಿಸಲಿನಿಂದ ಹೊರಬಂದು ಉಮರ್ (ರ) ರನ್ನು ಕೇಳಿದರು.”ಓ ಅಬೂ ಹಪ್ಸ್ ನಾನು ಅಬ್ಬಾಸ್ (ರ) ರವರನ್ನು ಕೊಲ್ಲಬೇಕೆಂದು ನೀವು ಬಯಸುತ್ತೀರಾ?” ಉಮರ್ (ರ)ರವರ ಅಭಿಪ್ರಾಯವನ್ನು ಆಧರಿಸಿ ಈ ಪ್ರತಿಕ್ರಿಯೆ ನಬಿ ﷺರವರಿಂದ ಬಂದಿತ್ತು. ಅದನ್ನು ಕೇಳಿದ ಕೂಡಲೇ ಉಮರ್ (ರ.ಅ) ರವರಿಗೆ ವಿಷಯದ ಗಾಂಭೀರ್ಯತೆ ಮನವರಿಕೆಯಾಯಿತು. ಕೂಡಲೇ ಅವರು ಅಳಲು ತೋಡಿಕೊಂಡರು. “ಅಯ್ಯೋ ಉಮರ್‌ನ ಕಷ್ಟಕಾಲವೇ..! ತಾಯಿ ಮರಣಹೊಂದಿದ ದುಃಖವನ್ನು ಉಮರ್ ಅನುಭವಿಸಲಿ!”
ಅಷ್ಟೊತ್ತಿಗೆ ಪ್ರವಾದಿ ﷺ ರವರು ಹೇಳತೊಡಗಿದರು. “ಅಲ್ಲಾಹನು ಕೆಲವರ ಹೃದಯಗಳನ್ನು ಮೃದುಗೊಳಿಸುತ್ತಾನೆ, ಆಗ ಅವರು ಹಾಲಿಗಿಂತ ಮೃದುವಾಗಿರುತ್ತಾರೆ ಇನ್ನು ಕೆಲವರ ಹೃದಯಗಳನ್ನು ಗಟ್ಟಿಗೊಳಿಸುತ್ತಾನೆ, ಆಗ ಅವರು ಕಲ್ಲಿಗಿಂತಲೂ ಕಠಣ ಹೃದಯಿಗಳಾಗುತ್ತಾರೆ”

ನಂತರ ಪ್ರವಾದಿ ﷺ ಸಿದ್ದೀಕ್ (ರ.ಅ) ಅವರನ್ನು ಉದ್ದೇಶಿಸಿ ಹೀಗೆ ಹೇಳಿದರು. ಓ ಅಬೂಬಕರ್! ನೀವು ಮಲಕುಗಳ ಸಮೂಹದಿಂದ ಕರುಣೆಯೊಂದಿಗೆ ಬರುವ ಮೀಕಾಈಲ್ (ಅ)ರಿಗೆ ಸಮಾನವಾಗಿದ್ದೀರಿ. ಅದೇ ರೀತಿ ಪ್ರವಾದಿಗಳ ಪೈಕಿ ಇಬ್ರಾಹೀಮ್ (ಅ) ರಂತೆ ತಾವಾಗಿದ್ದೀರಿ. ಏಕೆಂದರೆ ಅವರು ಅಲ್ಲಾಹನೊಂದಿಗೆ ಹೇಳಿದ್ದು ಅದನ್ನೇ. “ನನ್ನನ್ನು ಅನುಸರಿಸುವವರು ನನಗೆ ಸೇರಿದವರು ಅಥವಾ ನನ್ನ ಅನುಯಾಯಿಗಳು. ಓ ಅಲ್ಲಾಹ್ ಯಾರು ನನ್ನನ್ನು ಅನುಸರಿಸುವುದಿಲ್ಲ ಅವರು ನನಗೆ ಅವಿಧೇಯರಾಗುತ್ತಾರೆ. ಆದರೆ ಅವರ ಮೇಲೆ ಕರುಣೆ ತೋರಿ ಅವರನ್ನು ಕ್ಷಮಿಸು ಅಲ್ಲಾಹ್!

ಓ ಅಬೂಬಕರ್! ನೀವು ಅಳವಡಿಸಿಕೊಂಡಿರುವ ನಿಲುವು ಪ್ರವಾದಿ ಈಸ (ಅ) ತನ್ನ ಜನತೆಯ ಬಗ್ಗೆ ತೆಗೆದುಕೊಂಡ ನಿಲುವಾಗಿದೆ. ಅವರು ಅಲ್ಲಾಹನಿಗೆ ಹೇಳಿದರು. ಓ ಸೃಷ್ಟಿಕರ್ತನೇ, ನೀನು ಅವರನ್ನು ಶಿಕ್ಷಿಸಿದರೆ, ಅವರು ನಿಮ್ಮ ದಾಸರು, ಅಥವಾ ನಿನಗೆ ಶಿಕ್ಷಿಸಲು ಅಧಿಕಾರವಿದೆ. ಆದರೆ ನೀನು ಅವರನ್ನು ಕ್ಷಮಿಸಿದರೆ, ಖಂಡಿತವಾಗಿಯೂ ನೀನು ತಂತ್ರಜ್ಞಾನಿಯೂ ಮತ್ತು ಪ್ರತಾಪಶಾಲಿಯಾಗಿರುವೆ.ಅಧಿಕಾರ ಮತ್ತು ಔದಾರ್ಯತೆಯಿರುವ ನಿನ್ನಲ್ಲಿ ಔದಾರ್ಯಕ್ಕಾಗಿ ನಾನು ಹಂಬಲಿಸುತ್ತೇನೆ ಎಂದರ್ಥ.

ಓ ಉಮರ್ (ರ)! ನೀನು ದೇವದೂತರಲ್ಲಿ ಜಿಬ್ರೀಲ್‌‌ಗೆ ಸಮಾನವಾಗಿದ್ದೀರಿ. ಜಿಬ್ರೀಲ್ (ಅ) ಅಲ್ಲಾಹನ ಶತ್ರುಗಳ ವಿರುದ್ಧ ಶಿಕ್ಷೆ ಮತ್ತು ವಿಪತ್ತಾಗಿ ಪ್ರತ್ಯಕ್ಷಗೊಳ್ಳುತ್ತಾರೆ.

ಹಾಗೆಯೇ, ನೀವು ಪ್ರವಾದಿಗಳಲ್ಲಿ ಪ್ರವಾದಿ ನೂಹ್ (ಅ) ರಂತೆ. ನೂಹ್(ಅ) ಹೀಗೆ ಪ್ರಾರ್ಥಿಸಿದರು: “ಸೃಷ್ಠಿಕರ್ತನೇ!
ಈ ಅವಿಶ್ವಾಸಿಗಳಲ್ಲಿ ಯಾರನ್ನೂ ಈ ಭೂಮಿಯ ಮೇಲೆ ಬಿಡಬೇಡ! ನೀನು ಅವರನ್ನು ಮಾತ್ರ ಬಿಟ್ಟರೆ, ಅವರು ನಿನ್ನ ದಾಸರನ್ನು ದಾರಿ ತಪ್ಪಿಸುತ್ತಾರೆ.ಹಾಗೂ ಕೆಟ್ಟವರಿಗೆ ಮತ್ತು ಸತ್ಯನಿಷೇಧಿಗಳಿಗೆ ಅವರು ಜನ್ಮ ನೀಡುತ್ತಾರೆ.”

ನೀವು ಪ್ರವಾದಿ ಮೂಸಾ (ಸ) ರಿಗೆ ಸಮಾನವಾಗಿದ್ದೀರಿ. ಅವರ ಪ್ರಾರ್ಥನೆ ಹೀಗಿತ್ತು, “ಅವರ ಸಂಪತ್ತನ್ನು ನಾಶಮಾಡು. ಕಠಿಣ ಶಿಕ್ಷೆಯನ್ನು ಎದುರುಗೊಳ್ಳುವವರೆಗೂ ವಿಶ್ವಾಸಹೊಂದದ ರೀತಿಯಲ್ಲಿ ಅವರ ಮನಸ್ಸನ್ನು ಕಠಿಣಗೊಳಿಸು”

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-267/365

 

Mahabba Campaign Part-268/365

ಈ ಸಂಚಿಕೆಯಲ್ಲಿ
ಯುದ್ಧ ಕೈದಿಗಳ ವ್ಯವಹಾರಗಳು ಮತ್ತು ಒಡನಾಟಗಳ ಕುರಿತು ವಾಚಿಸೋಣ.

ಆರಂಭದಲ್ಲಿ ಖುರೈಷಿಗಳು ಪರಿಹಾರಧನ ಪಾವತಿಸಿ ಸಂಬಂಧಪಟ್ಟವರನ್ನು ಬಿಡುಗಡೆ ಮಾಡುವಲ್ಲಿ ಹೆಚ್ಚು ಉತ್ಸಾಹ ತೋರಲಿಲ್ಲ.
ಕಾರಣ ಹೀಗೆ ಮಾಡುವುದರಿಂದ ಮುಸ್ಲಿಮರು ಸಂತೋಷಭರಿತಾಗುವರು ಮತ್ತು ನಮ್ಮ ಮೇಲೆ ಷರತ್ತುಗಳನ್ನು ವಿಧಿಸುವರೆಂಬ ಆತಂಕ ಖುರೈಷಿಗರನ್ನು ಕಾಡುತ್ತಿತ್ತು.

ಮುತ್ತಲಿಬ್ ಬಿನ್ ಅಬಿ ವದಾ‌ಅ ಎಂಬ ವ್ಯಕ್ತಿ ಪರಿಹಾರಧನ ಪಾವತಿಸುವ ಬೇಡಿಕೆಯೊಂದಿಗೆ ಮದೀನಾಕ್ಕೆ ಮೊದಲು ಬಂದವರು. ಖುರೈಷಿಗಳ ತೀಕ್ಷ್ಣವಾದ ಟೀಕೆಗೆ ಹೆದರಿ ಅವರು ಅತ್ಯಂತ ರಹಸ್ಯವಾಗಿ ಮದೀನಾ ತಲುಪಿ ನಬಿ ﷺ ರವರನ್ನು ಬೇಟಿಯಾಗಿ ನಾಲ್ಕು ಸಾವಿರ ದಿರ್ಹಮ್ ಕೊಟ್ಟು ತನ್ನ ತಂದೆಯನ್ನು ಬಿಡುಗಡೆ ಮಾಡಿದರು.ನಂತರ ಒಬ್ಬೊಬ್ಬರೂ ಮದೀನಾಗೆ ಆಗಮಿಸಲು ಆರಂಭಿಸಿದರು.

ಈ ಮಧ್ಯೆ,ಜುಬೈರ್ ಬಿನ್ ಮುತ್‌ಇಮ್ ಎಂಬ ವ್ಯಕ್ತಿ ಯುದ್ಧಕೈದಿಗಳ ವಿಷಯದಲ್ಲಿ ಪ್ರವಾದಿ ﷺ ರೊಂದಿಗೆ ಮಾತುಕತೆ ನಡೆಸಲು ಮದೀನಾಕ್ಕೆ ಬಂದರು. ಪ್ರವಾದಿ ﷺ ಅವರ ಬಳಿ ಹೀಗೆ ಹೇಳಿದರು: ನಿಮ್ಮ ವಯಸ್ಸಾದ ತಂದೆ ಬದುಕಿದ್ದರೆ ಮತ್ತು ಅವರು ಈ ವಿಷಯದಲ್ಲಿ ನನ್ನ ಬಳಿ ಮಾತುಕತೆ ನಡೆಸಿದ್ದರೆ,ನಾನು ಖೈದಿಗಳನ್ನು ಬಿಡುಗಡೆ ಮಾಡುತ್ತಿದ್ದೆ.ಪ್ರವಾದಿ ﷺ ಈ ರೀತಿಯಾಗಿ ಹೇಳಲು ಒಂದು ಕಾರಣವಿತ್ತು.ಅದೇನೆಂದರೆ,ಪ್ರವಾದಿ ﷺ ತಾಯಿಫ್‌ನಿಂದ ಮರಳಿದಾಗ, ಜುಬೈರ್ ರವರ ತಂದೆಯಾದ ಮುತ್ಇಮ್ ನಬಿ ﷺರವರಿಗೆ ಆಶ್ರಯ ನೀಡಿದ್ದರು. ಹಾಗೂ ಪ್ರವಾದಿ ﷺ ರವರ ಮೇಲೆ ಮಕ್ಕಾ ಖುರೈಷಿಗಳು ಅನಗತ್ಯವಾಗಿ ಮಾಡಿದ ಬಹಿಷ್ಕಾರ ಒಪ್ಪಂದವನ್ನು ದುರ್ಬಲಗೊಳಿಸಿದವರು ಕೂಡಾ ಇದೇ ಮುತ್‌ಇಮ್ ಎಂಬ ವ್ಯಕ್ತಿಯಾಗಿದ್ದರು.ಹಾಗಾಗಿ ಗತಕಾಲದ ನೆನಪನ್ನು ಸ್ಮರಿಸುವ ಹಾಗೂ ಅವರು ಮಾಡಿದ ಉಪಕಾರಕ್ಕೆ ಋಣ ತೀರಿಸುವ ಭಾಧ್ಯತೆಯೂ ನಬಿ ﷺ ರವರ ಮೇಲೆ ಇತ್ತು.

ಬಂಧನಮುಕ್ತರಾದ ಖೈದಿಗಳು ಮಕ್ಕಾಕ್ಕೆ ಬರಲಾರಂಭಿಸಿದರು. ಖುರೈಷಿ ನಾಯಕ ಅಬೂ ಸುಫ್ಯಾನ್‌ ರವರ ಪುತ್ರ ಹನ್‌ಲಲಾ ಎಂಬಾತನು ಬದ್ರ್‌ನಲ್ಲಿ ಕೊಲ್ಲಲ್ಪಟ್ಟಿದ್ದನು.ಮತ್ತೋರ್ವ ಪುತ್ರ ಅಮ್ರ್‌ನನ್ನು ಅಲಿ (ರ) ಸೆರೆಹಿಡಿದಿದ್ದರು.ಒಬ್ಬ ಪುತ್ರನು ಈಗಾಗಲೇ ಕೊಲ್ಲಲ್ಪಡುವ ಮೂಲಕ ತನ್ನ ರಕ್ತವನ್ನು ನೀಡಿದ್ದಾನೆ. ಮತ್ತೋರ್ವ ಪುತ್ರನನ್ನು ಪರಿಹಾರ ಧನ ನೀಡಿ ಬಿಡುಗಡೆ ಮಾಡಲು ಅಬೂಸುಫ್ಯಾನ್ ರವರಿಗೆ ಸ್ವಾಭಿಮಾನ ಅಡ್ಡಿಯಾಗಿತ್ತು. ಬದಲಿಗೆ ಅವರು ಒಂದು ತಂತ್ರವನ್ನು ಬಳಸಿದರು.ಉಮ್ರಾ ನಿರ್ವಹಿಸಲು ಮದೀನಾದಿಂದ ಮಕ್ಕಾಕ್ಕೆ ಬಂದ ಸ‌ಅದು ಬಿನ್ ಅಮಾನ್ (ರ) ಅವರನ್ನು ಸೆರೆಹಿಡಿದು ಖೈದಿಯನ್ನಾಗಿ ಮಾಡಿದರು.ಖುರೈಷಿಗಳೊಂದಿಗಿನ ಒಪ್ಪಂದದ ಪ್ರಕಾರ,ಉಮ್ರಾ ಯಾತ್ರಿಕರನ್ನು ಹಾಗೆ ಬಂಧಿಸಬಾರದು.ಆದರೆ ಅವರು ಒಪ್ಪಂದವನ್ನು ಮುರಿದರು. ಅಂತಿಮವಾಗಿ,ಪ್ರವಾದಿ ﷺ ರವರ ಸೂಚನೆಯ ಮೇರೆಗೆ, ಅಬೂಸುಫ್ಯಾನ್ ಪುತ್ರ ಅಮ್ರ್‌ನ್ನು ಬಿಡುಗಡೆ ಮಾಡಲಾಯಿತು ಮತ್ತು ಸಅದ್ ರವರನ್ನು ರಕ್ಷಿಸಲಾಯಿತು.

ಬದ್ರ್‌ನಲ್ಲಿ ಸೆರೆಹಿಡಿಯಲ್ಪಟ್ಟವರಲ್ಲಿ ಪ್ರವಾದಿ ﷺ ರವರ ಪುತ್ರಿ ಝೈನಬ್ ರವರ ಪತಿ ಅಬುಲ್ಅಸ್ ಕೂಡ ಇದ್ದರು. ಅಂದು ಅವರು ಶತ್ರು ಪಾಳೆಯಲ್ಲಿದ್ದರು ಪತಿಯನ್ನು ವಿಮೋಚಿಸಲು ಪ್ರವಾದಿ ಪುತ್ರಿ ಝೈನಬ್ (ರ) ತನ್ನ ಚಿನ್ನದ ಹಾರವನ್ನು ಪ್ರವಾದಿ ﷺ ರವರ ಪವಿತ್ರ ಸನ್ನಿಧಿಗೆ ಕಳುಹಿಸಿಕೊಟ್ಟರು.ಅದು ಪ್ರವಾದಿ ﷺ ರವರ ಪ್ರೀತಿಯ ಪತ್ನಿ ಖದೀಜಾ(ರ) ಧರಿಸಿದ್ದ ಹಾರವಾಗಿತ್ತು. ಅದನ್ನು ನೋಡಿದ ಕೂಡಲೇ ಪ್ರಥಮ ವಿಶ್ವಾಸಿನಿಯೂ, ತನ್ನ ಪ್ರೀತಿಯ ಪತ್ನಿಯೂ ಆದ ಖದೀಜಾ(ರ) ರವರ ನೆನಪುಗಳು ನಬಿ ﷺ ರವರನ್ನು ಬಹಳವಾಗಿ ಕಾಡಿತು.ಖದೀಜಾ (ರ) ರವರ ತಾಳ್ಮೆ ಮತ್ತು ಇಸ್ಲಾಂ ಬೆಳೆಯುವುದನ್ನು ಕಾತರದಿಂದ ನೋಡುತ್ತಿದ್ದ ಅವರ ಅತೀವ ಬಯಕೆ ಎಲ್ಲವೂ ಒಮ್ಮೆಲೇ ನೆನಪಾಗಿ,ತನ್ನ ಅನುಚರರೊಂದಿಗೆ ನಬಿ ﷺ ಕೇಳಿದರು. “ನಿಮಗೆ ಅಭ್ಯಂತರವಿಲ್ಲದಿದ್ದರೆ,ಈ ಹಾರವನ್ನು ಸ್ವೀಕರಿಸದೆ ಅಬುಲ್ ಆಸ್‌ರನ್ನು ಬಿಡುಗಡೆ ಮಾಡಬಹುದೇ?” ಅನುಚರರು ಆ ಬೇಡಿಕೆಯನ್ನು ಒಕ್ಕೊರಲಿನಿಂದ ಒಪ್ಪಿಕೊಂಡರು. ವಿಶ್ವಾಸಿನಿಯಾದ ಝೈನಬ್ (ರ) ರವರನ್ನು ಮದೀನಾಕ್ಕೆ ಕಳುಹಿಸಬೇಕೆಂಬ ಷರತ್ತಿನ ಮೇಲೆ ಅಬುಲ್ ಆಸ್ ರನ್ನು ಬಿಡುಗಡೆ ಮಾಡಲಾಯಿತು.

ಈ ಘಟನೆಯು ಪ್ರವಾದಿ ﷺ ತೋರಿದ ನ್ಯಾಯ ಪ್ರಜ್ಞೆ ಮತ್ತು ಸಮಾಲೋಚನೆಗೆ ಉತ್ತಮ ಉದಾಹರಣೆಯಾಗಿದೆ.ಸ್ವಂತ ಪುತ್ರಿಯ ಗಂಡನ ವಿಷಯದಲ್ಲಿ ತನ್ನ ಪರಮಾಧಿಕಾರವನ್ನು ಬಳಸಿ ಏನನ್ನು ಬೇಕಾದರೂ ನಿರ್ಧರಿಸುವ ಅವಕಾಶ ನಬಿ ﷺ ರವರಿಗಿತ್ತು.ಆ ವಿಷಯದಲ್ಲಿ ಯಾರೂ ಪ್ರವಾದಿ ﷺ ರವರನ್ನು ಪ್ರಶ್ನೆ ಮಾಡುತ್ತಿರಲಿಲ್ಲ.ಅಷ್ಟೊಂದು ಸ್ವಾತಂತ್ರ್ಯ,ಅಧಿಕಾರ ಮತ್ತು ಮನ್ನಣೆ ನಬಿ ﷺ. ರವರಿಗೆ ಇತ್ತು ಆದರೆ ಅದನ್ನು ಅವರು ಬಳಸಿಲ್ಲ.

ಬರಹಗಳ ಸಾಲುಗಳ ನಡುವೆ ಗಮನಿಸಬೇಕಾದ ಇನ್ನೊಂದು ವಿಷಯವಿದೆ.ಅತ್ಯುನ್ನತ ನಾಯಕತ್ವದ ಸ್ಥಾನದಲ್ಲಿದ್ದಾಗಲೂ ಆ ಸ್ಥಾನಮಾನಗಳು ಯಾವುದು ತಮ್ಮ ಪ್ರೀತಿಯ ಪತ್ನಿಯ ನೆನಪುಗಳನ್ನು ದೂರ ಮಾಡಲಿಲ್ಲ.ಖದೀಜಾ (ರ) ರವರ ಮರಣದ ನಂತರ ಇತರ ಪತ್ನಿಯರ ಆಗಮನವಾಗಿಯೂ ಕೂಡಾ ನಬಿ ﷺ ರವರಿಗೆ ಮರಣ ಹೊಂದಿದ ಪತ್ನಿಯನ್ನು ಭಾವನಾತ್ಮಕವಾಗಿ ನೆನಪಿಸಿಕೊಳ್ಳಲು ಅವರ ಮನಸ್ಸಿನಲ್ಲಿ ಜಾಗವಿತ್ತು.ಆ ಸ್ನೇಹಸಂಬಧದ ಆಳ ಎಷ್ಟಿತ್ತೆಂದರೆ ಖದೀಜಾ (ರ) ಧರಿಸಿರುವ ಒಂದು ಹಾರವನ್ನು ಕಂಡಕೂಡಲೇ ಅನುರಾಗದ ಪ್ರೇಮವು ಸಂಪೂರ್ಣವಾಗಿ ಹೊರಸೂಸುವಷ್ಟು! ಎಂದು ಸಾರಂಶ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-269/365

ಅಬುಲ್ ಆಸ್ ಬಿಡುಗಡೆಗೊಂಡು ಮಕ್ಕಾ ತಲುಪಿದರು.ಝೈನಬ (ರ) ರವರನ್ನು ಮದೀನಾಕ್ಕೆ ಕಳುಹಿಸಿಕೊಡಲಾಯಿತು.ನಂತರ ಅಬುಲ್ ಆಸ್ ಇಸ್ಲಾಂ ಸ್ವೀಕರಿಸಿದರು.ಆದರೆ ಅಲ್ಪ ದಿನ ಕಳೆದಾಗ ಝೈನಬ್ (ರ) ಇಹಲೋಕ ತ್ಯಜಿಸಿದರು. ಇದರ ಕುರಿತು ಸವಿಸ್ತಾರವಾಗಿ ಈ ಹಿಂದೆ ಬರೆಯಲಾಗಿದೆ.

ಬದರ್‌ನಿಂದ ಸೆರೆಹಿಡಿಯಲ್ಪಟ್ಟ ಯುದ್ದಖೈದಿಗಳ ಕುರಿತಾದ ಪ್ರಮುಖ ಅಧ್ಯಾಯವೊಂದನ್ನು ವಾಚಿಸೋಣ. ಖುರೈಷಿಗಳ ಪೈಕಿ ಸುಹೈಲ್ ಬಿನ್ ಅಂರ್ರ್ ಅಲ್ ಆಮಿರಿ ಎಂಬ ವ್ಯಕ್ತಿ ಯುದ್ಧಖೈದಿಯಾಗಿ ಬಂಧಿಯಾಗಿದ್ದರು.ಅವರು ಪ್ರಸಿದ್ಧ ವಾಗ್ಮಿ ಹಾಗೂ ವಿದ್ಯಾ ಸಂಪನ್ನರಾಗಿದ್ದರು.ಕಟುವಾಗಿ ಇಸ್ಲಾಮನ್ನು ಮತ್ತು ಪ್ರವಾದಿ ﷺ ರವರನ್ನು ವಿರೋಧಿಸಿ ಅವರು ನಡೆಸಿದ ಪ್ರಭಾಷಣಗಳು ಮತ್ತು ಸಂಭಾಷಣೆಗಳು ಇಸ್ಲಾಂ ಧರ್ಮದ ಪ್ರಚಾರಕ್ಕೆ ಅಡ್ಡಿ ಉಂಟುಮಾಡಿದ್ದವು.ಹಾಗಾಗಿ ಸಹಜವೆಂಬಂತೆ ಉಮರ್ (ರ) ಪ್ರವಾದಿ ﷺ ರವರ ಬಳಿ ಕೇಳಿದರು. “ನಾನು ಅವರ ಹಲ್ಲುಗಳನ್ನು ಉದುರಿಸುತ್ತೇನೆ,ಮತ್ತೆ ಎಂದಿಗೂ ಅವರು ಸತ್ಯದ ವಿರುದ್ಧ ಮಾತನಾಡಲಾರರು.” ಕೂಡಲೇ ಪ್ರವಾದಿ ﷺ ಹೇಳಿದರು.”ಅವರನ್ನು ವಿರೂಪ ಗೊಳಿಸಿದರೆ,ನಾನು ಪ್ರವಾದಿಯಾಗಿಯೂ ಕೂಡಾ ಸ್ವತಃ ವಿರೂಪಗೊಳ್ಳಲ್ಪಡುವೆನು ಮನುಷ್ಯನನ್ನು ಹಾಗೆ ಅಂಗವಿಕಲಗೊಳಿಸಬಾರದು. ಬಹುಶಃ ಮುಂದೊಂದು ದಿನ ಅವರು ಸತ್ಯದ ಹಾದಿಗೆ ಬಂದು ಯಾವುದೇ ಟೀಕೆಗೆ ಒಳಗಾಗದ ಉತ್ತಮ ಸ್ಥಾನಕ್ಕೆ ತಲುಪಲು ಸಾದ್ಯವಿದೆ”

ಖುರೈಷಿ ನಾಯಕ ಹಾಗೂ ಖ್ಯಾತ ಅರಬ್ಬಿ ಕವಿ ಮುಕರ್ರಸ್ ಬಿನ್ ಹಫ್ಸ್ ಎಂಬ ವ್ಯಕ್ತಿ ಇದೇ ಸುಹೈಲರನ್ನು ಮುಕ್ತಗೊಳಿಸಲು ದೊಡ್ಡಮೊತ್ತದ ಪರಿಹಾರ ಧನದ ವಾಗ್ದಾನದೊಂದಿಗೆ ಮದೀನಾಗೆ ಆಗಮಿಸಿದರು. ಮೊತ್ತವನ್ನು ತಂದು ಪಾವತಿಸುವವರೆಗೆ ಸುಹೈಲ್‌ರವರ ಪರವಾಗಿ ಮುಕರ್ರಸ್ ಜಾಮೀನು ನಿಂತರು. ಹಾಗಾಗಿ ಮುಕರ್ರಸನ್ನು ಒತ್ತೆಯಾಳಾಗಿ ಇರಿಸಿ.ಸುಹೈಲ್‌ರನ್ನು ಬಿಡುಗಡೆಗೊಳಿಸಲಾಯಿತು. ಪ್ರವಾದಿ ﷺ ರವರ ಪ್ರವಚನದ ಶುಭ ಸಂಕೇತದ ಉದಯಕ್ಕಾಗಿ ಸಮಯ ಕಾಯುತ್ತಿತ್ತು.ಮಕ್ಕಾ ವಿಜಯದ ನಂತರ ಸುಹೈಲ್ ಇಸ್ಲಾಂ ಸ್ವೀಕರಿಸಿದರು.ಮುತ್ತು ಹಬೀಬ್ ﷺರವರ ಪ್ರವಚನದ ಸಾಕ್ಷಾತ್ಕಾರವಾಗಿತ್ತದು! ಅದಾದ ನಂತರ ಸುಹೈಲ್(ರ)ರವರ ಪ್ರಭಾಷಣ ಹೊಸ ಆಯಾಮವನ್ನು ಪಡೆದುಕೊಂಡಿತು. ಧರ್ಮಭ್ರಷ್ಟತೆಯ ಅಂಚಿನಲ್ಲಿರುವ ಅನೇಕ ಜನರ ಆಶಯ ಸಂರಕ್ಷಣಗೆ ಸುಹೈಲ್‌(ರ) ರವರ ಉಪನ್ಯಾಸ ಫಲ ಕೊಟ್ಟಿತು.

ಯುದ್ಧ ಖೈದಿಗಳಾಗಿ ಬಂಧಿತರಾಗಿದ್ದವರು, ಬಿಡುಗಡೆಗೊಂಡ ನಂತರ ಒಬ್ಬರ ನಂತರ ಒಬ್ಬರಂತೆ ಇಸ್ಲಾಂಗೆ ಮತಾಂತರಗೊಳ್ಳುವ ಸನ್ನಿವೇಶ ಸಂಜಾತವಾಯಿತು.ಇದು ಇಸ್ಲಾಂ ಮುಂದಿಟ್ಟ ಮಾನವೀಯತೆ ಮೌಲ್ಯದ ಜ್ವಲಂತ ನಿದರ್ಶನವಾಗಿ ಜಗತ್ತು ಕಂಡಿತು.ಇಸ್ಲಾಂ ಧರ್ಮ ಬಂಧಿತರನ್ನು ಹೇಗೆ ನಡೆಸಿಕೊಂಡಿತು ಎಂಬ ಪ್ರಶ್ನೆಗೂ ಇದು ಉತ್ತರವಾಗಿದೆ.
ಇದೇ ರೀತಿಯಾಗಿ ಇಸ್ಲಾಂ ಧರ್ಮ ಅಂಗೀಕರಿಸಿದ ಮತ್ತೋರ್ವ ವ್ಯಕ್ತಿಯ ಕುರಿತು ಪರಾಮರ್ಶಿಸೋಣ.

ವಲೀದು ಬಿನ್ ವಲೀದ್ ಎಂದಾಗಿದೆ ಅವರ ಹೆಸರು.ಅವರು ಬದರ್ ಸಮರದ ಯುದ್ಧ ಖೈದಿಯಾಗಿ ಮದೀನಾದಲ್ಲಿ ಬಂಧಿಯಾಗಿದ್ದರು.ಅವರನ್ನು ಬಿಡುಗಡೆಗೊಳಿಸಲು ಅವರ ಸಹೋದರರಾದ ಹಿಶಾಮ್ ಮತ್ತು ಖಾಲಿದ್ ಮುಂದೆ ಬಂದರು. ಪರಿಹಾರಧನ ಪಾವತಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.ಬಿಡುಗಡೆಯಾದ ತಕ್ಷಣ,ವಲೀದ್ ಬಿನ್ ವಲೀದ್ ಇಸ್ಲಾಂ ಸ್ವೀಕರಿಸಿದರು.ಖೈದಿಯಾಗಿ ಬಂಧನದಲ್ಲಿದ್ದಾಗ ಇಸ್ಲಾಂ ಧರ್ಮ ಸ್ವೀಕರಿಸಿದರೆ ಭಯದಿಂದ ಮತಾಂತರಗೊಂಡನೆಂದು ಜನರು ತಪ್ಪಾಗಿ ಅರ್ಥೈಸಬಹುದು.ಹಾಗಾಗಿ ಬಿಡುಗಡೆಗೊಂಡ ನಂತರ ವಿಶ್ವಾಸ ಹೊಂದಿದರು.ಮುಸಲ್ಮಾನನಾಗಿ ಪರಿವರ್ತನೆಗೊಂಡ ವಲೀದ್ ಮಕ್ಕಾಗೆ ಹೊರಟು ನಿಂತರು ಹಾಗೆ ಮಕ್ಕಾ ತಲುಪಿದ ನಂತರ ಅವರು ಪುನಃ ಮದೀನಾಗೆ ಪಲಾಯನಗೆಯ್ಯಲು ಮುಂದಾದಾಗ, ಬಹುದೈವರಾಧಕರಾದ ಮಕ್ಕಾ ಖುರೈಷಿಗಳು ಅವರನ್ನು ತಡೆಯಲು ಪ್ರಯತ್ನಿಸಿದರು.ಪ್ರವಾದಿ ﷺ ಅವರಿಗಾಗಿ ನಮಾಜಿನಲ್ಲಿರುವ ವಿಶೇಷ ಪ್ರಾರ್ಥನೆಯಾದ ಖುನೂತಿನಲ್ಲಿ ಪ್ರತ್ಯೇಕ ದುಆ ಮಾಡಿದರು.

ಬದ್ರ್ ಒತ್ತೆಯಾಳುಗಳ ಬಗ್ಗೆ ಇತಿಹಾಸಕಾರರು ದಾಖಲಿಸಿದ ಸುಂದರ ಘಟನೆಯೊಂದು ಹೀಗಿದೆ, ಉಮೈರ್ ಬಿನ್ ವಹಬ್ ಎಂಬಾತ ತನ್ನ ತಂದೆಯನ್ನು ಬದ್ರ್‌ನಲ್ಲಿ ಕೊಲ್ಲಲಾಗಿದೆ ಹಾಗೂ ಇನ್ನಿತರ ವಿಷಯಗಳ ಕುರಿತು ಸ್ನೇಹಿತ ಸ್ವಫ್ವಾನ್ ಬಿನ್ ಉಮಯ್ಯರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಕ‌ಅಬಾದ ಬಳಿ ನಡೆದ ಈ ಸಂಭಾಷಣೆಯಲ್ಲಿ ಪ್ರತೀಕಾರದ ಚರ್ಚೆಯೂ ಬಂದಿತು.ಆಗ ಸಫ್ವಾನ್ ಹೇಳಿದರು.ದೇವನನ್ನು ಆಣೆ ಹಾಕಿ ಹೇಳುತ್ತೇನೆ!
ಬದ್ರ್‌ನಲ್ಲಿ ನಮ್ನ ಘಟಾನುಘಟಿ ನಾಯಕರೆಲ್ಲರೂ ನಾಶವಾದರು.ಇದೀಗ ಅವರೆಲ್ಲಾ ಸತ್ತ ನಂತರ ಬದುಕಿಗೊಂದು ಅರ್ಥವೇ ಇಲ್ಲದಾಗಿದೆ.

ತಕ್ಷಣ ಉಮೈರ್‌ರವರ ಪ್ರತಿಕ್ರಿಯೆ ಹೀಗಿತ್ತು. ನನಗೆ ಕೈ ತುಂಬಾ ಸಾಲವಿದೆ.ಅದೇ ರೀತಿ ನನಗೆ ಏನಾದರೂ ಅವಘಡ ಸಂಭವಿಸಿದರೆ ನನ್ನ ಕುಟುಂಬವು ಅನಾಥವಾಗುತ್ತದೆ.ಇಲ್ಲದಿದ್ದರೆ,ನಾನು ಮದೀನಾಕ್ಕೆ ಹೋಗಿ ಮುಹಮ್ಮದ್ ﷺ ರನ್ನು ಕೊಲ್ಲುತ್ತಿದ್ದೆ.ನನ್ನ ಮಕ್ಕಳೂ ಮದೀನಾದಲ್ಲಿ ಯುದ್ಧ ಖೈದಿಗಳಾಗಿ ಬಂಧಿಯಾಗಿದ್ದಾರೆ.ಉಮೈರ್‌ನ ಈ ಮಾತು ಸಫ್ವಾನ್‌ನನ್ನು ಕೆರಳಿಸಿತು. ಅವರು ಪ್ರವಾದಿ ﷺ ಅವರ ವಿರುದ್ಧ ತೀವ್ರವಾದ ದ್ವೇಷವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು! ತಕ್ಷಣ ಸಫ್ವಾನ್ ಉಮೈರ್ ಗೆ ಹೇಳಿದ. ನಿನ್ನ ಸಾಲ ಮತ್ತು ಕುಟುಂಬವನ್ನು ನಾನು ವಹಿಸಿಕೊಂಡಿದ್ದೇನೆ.ನಿನಗೆ ಮದೀನಾಕ್ಕೆ ಹೋಗಿ ನಿನ್ನ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಬಹುದು.

(ಮುಂದುವರೆಯುವುದು)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-270/365

ಉಮೈರ್ ತುಫೈಲರೊಂದಿಗೆ ಹೇಳಿದರು.ಈ ಸಂಭಾಷಣೆಯು ಕಟ್ಟುನಿಟ್ಟಾಗಿ ಗೌಪ್ಯವಾಗಿರಬೇಕು. ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ.ಸರಿ,ಆತ ಒಪ್ಪಿಕೊಂಡ.ಉಮೈರ್ ಮದೀನಾಗೆ ಹೊರಡಲು ಸಿದ್ಧವಾದರು.ತನ್ನ ಜತೆ ಕೊಂಡುಹೋಗುವ ಆಯುಧಕ್ಕೆ ವಿಷ ಬೆರೆಸಿ ಹರಿತಗೊಳಿಸಲಾಯಿತು.
ವಿಷಪೂರಿತ ಖಡ್ಗವನ್ನು ಹಿಡಿದು.ಅತ್ಯಂತ ರಹಸ್ಯವಾಗಿ ಮದೀನಾ ಕಡೆಗೆ ಯಾತ್ರೆ ಹೊರಟ ಉಮೈರ್ ಮದೀನಾ ಮಸೀದಿಯ ಅಂಗಳದಲ್ಲಿ ವಾಹನದಿಂದ ಇಳಿದರು.ತನ್ನ ಸ್ನೇಹಿತರೊಂದಿಗೆ ಬದ್ರ್‌ನ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಉಮರ್ ಬಿನ್ ಖತ್ತಾಬ್ (ರ) ಉಮೈರ್‌ರವರ ಆಗಮನವನ್ನು ಗಮನಿಸಿದರು.
ಆಯುಧದಾರಿಯಾದ ವ್ಯಕ್ತಿಯೊಬ್ಬ ಮಸೀದಿಯ ಆವರಣದಲ್ಲಿ ಇಳಿಯುವುದನ್ನು ಕಂಡ ತಕ್ಷಣ ಉಮರ್ (ರ) ಹೇಳಿದರು. “ಅಲ್ಲಾಹನ ಶತ್ರು,ಉಮೈರುಬಿನ್ ಅಲ್-ವಹಬ್,ನ ಆಗಮನವಾಗಿದೆ.ಆತ ಒಳ್ಳೆಯ ಉದ್ದೇಶದೊಂದಿಗೆ ಬರಲು ಸಾದ್ಯವಿಲ್ಲ,ಆತ ನಮ್ಮ ವಿರುದ್ಧ ಜನರನ್ನು ಎತ್ತಿಕಟ್ಟಿದವನಾಗಿರುವನು ಮುಸ್ಲಿಂ ಪಾಳೆಯದ ಸದಸ್ಯರ ಸಂಖ್ಯೆಯನ್ನು ಶತ್ರುಗಳಿಗೆ ರಹಸ್ಯವಾಗಿ ಗೂಢಚರ್ಯೆ ಮಾಡಿದವನಾಗಿದ್ದಾನೆ.”ಉಮರ್ (ರ.ಅ) ರವರಿಗೆ ಮತ್ತೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ.ಅವರು ಅತಿವೇಗವಾಗಿ ಪ್ರವಾದಿ ﷺ ರವರ ಬಳಿ ತಲುಪಿ ಮಾಹಿತಿ ನೀಡಿದರು.”ಓ ಪ್ರವಾದಿಯವರೇ ﷺ! ಅಲ್ಲಾಹನ ಶತ್ರುವಾದ ಉಮೈರ್ ಬಿನ್ ವಹಬ್ ಖಡ್ಗದೊಂದಿಗೆ ಆಗಮಿಸಿದ್ದಾನೆ. ನಾವು ಏನು ಮಾಡಬೇಕು? ಪ್ರವಾದಿ ﷺ ಹೇಳಿದರು.”ಅವರನ್ನು ನನ್ನ ಬಳಿ ಕರಕೊಂಡು ಬನ್ನಿರಿ” ಅಷ್ಟರಲ್ಲಿ ಉಮರ್ (ರ) ತಮ್ಮ ಸಹಚರರಾದ ಅನ್ಸಾರಿಗಳಾದ ಸ್ವಹಾಬತ್ತ್‌ಗಳೊಂದಿಗೆ ಹೀಗೆ ಹೇಳಿದರು,”ಉಮೈರ್ ನಂಬಲರ್ಹವಾದ ವ್ಯಕ್ತಿ ಅಲ್ಲ. ಪ್ರವಾದಿ ﷺ ರವರ ಬಳಿ ನೀವೆಲ್ಲರೂ ಜಾಗರೂಕರಾಗಿ ಎಚ್ಚರಿಕೆಯಿಂದ ನಿಂತುಕೊಳ್ಳಬೇಕು”ನಂತರ ಉಮೈರ್‌ರವರ ಕುತ್ತಿಗೆಯ ಹಿಂಬಾಗದ ಕಾಲರ್‌ಪಟ್ಟಿ ಸಹಿತ ಬಿಗಿಯಾಗಿ ಹಿಡಿದು ನಬಿ ﷺ ರವರ ಸನ್ನಿಧಾನಕ್ಕೆ ಕರಕೊಂಡು ಹೋದರು.ಆ ದೃಶ್ಯವನ್ನು ನೋಡಿದ ಪ್ರವಾದಿ ﷺ ಉಮರ್ (ರ) ಅವರಿಗೆ ಹೇಳಿದರು: ಅವರನ್ನು ಬಿಟ್ಟುಬಿಡಿ, ಅವರು ಸ್ವತಂತ್ರವಾಗಿ ಬರಲಿ!
ಉಮೈರ್ ಒಳ ನಡೆದರು. ಪ್ರವಾದಿ ﷺ ರನ್ನು ನೋಡಿದ ಕೂಡಲೇ ಸ್ವಬಾಹುಲ್ ಖೈರ್ “ಶುಭೋದಯ” ಎಂದು ಹೇಳಿದರು.ಕೂಡಲೇ ನಬಿﷺ ರವರು ಉಮೈರ್‌ರೊಂದಿಗೆ ಹೇಳಿದರು.”ಇದಕ್ಕಿಂತ ಸುಂದರವಾದ ಶುಭಾಶಯವನ್ನು ಅಥವಾ ಸ್ವರ್ಗ ನಿವಾಸಿಗಳ ಶುಭಾಶಯ, ‘ಅಸ್ಸಲಾಮು ಅಲೈಕುಮ್’ ಮೂಲಕ ಅಲ್ಲಾಹನು ನಮ್ಮನ್ನು ಅನುಗ್ರಹಿಸಿದ್ದಾನೆ.ಅದಿರಲಿ,ತಾವು ಇಲ್ಲಿಗೆ ಬಂದ ಉದ್ದೇಶವೇನು?
“ತಮ್ಮ ಬಳಿ ಬಂಧಿಯಾಗಿರುವ ನನ್ನ ಸಂಬಂಧಿಕರ ವಿಷಯದಲ್ಲಿ ಮಾತನಾಡಲು ಬಂದಿದ್ದೇನೆ.ನೀವು ಅವರನ್ನು ಚೆನ್ನಾಗಿ ನಡೆಸಿಕೊಳ್ಳಬೇಕು.ಉಮೈರ್ ಪ್ರತಿಕ್ರಿಯಿಸಿದರು.ತಕ್ಷಣ ಪ್ರವಾದಿ ﷺ ಅವರಲ್ಲಿ ಕೇಳಿದರು,ಹಾಗಾದರೆ ಖಡ್ಗದೊಂದಿಗೆ ಏಕೆ ಬಂದದ್ದು!? ಖಡ್ಗಗಳು ಅದೊಂದು ದುರಂತ. ದೇವರು ಅದನ್ನು ವಿರೂಪಗೊಳಿಸಲಿ! ಬದ್ರ್‌ನ ವೈಫಲ್ಯವನ್ನು ಮನಸ್ಸಿನಲ್ಲಿಟ್ಟು ಉಮೈರ್ ಈ ರೀತಿ ಹೇಳಿದರು “ಕತ್ತಿಗಳು ನಮಗೆ ಏನಾದರೂ ಒಳ್ಳೆಯದನ್ನು ಮಾಡಿದೆಯೇ? ತಕ್ಷಣ ಪ್ರವಾದಿ(ಸ) ಮಧ್ಯ ಪ್ರವೇಶಿಸಿ ಕೇಳಿದರು.ನೇರವಾಗಿ ಹೇಳು.ನೀವು ಬಂದ ಉದ್ದೇಶವೇನು? ಆವಾಗಲೂ ಸತ್ಯವನ್ನು ಮುಚ್ಚಿಟ್ಟು ಅವರು ಹೇಳಿದರು.”ನನ್ನ ಸಂಬಂಧಿಕರ ವಿಷಯದಲ್ಲಿ ಮಾತುಕತೆ ನಡೆಸಲು ಬಂದಿದ್ದೇನೆ” ಆದರೆ ಪ್ರವಾದಿ ﷺ ರವರಿಗೆ ಉಮೈರ್ ಯಾಕಾಗಿ ಬಂದಿದ್ದಾರೆ ಎಂಬುದರ ಬಗ್ಗೆ ಅಲ್ಲಾಹನ ಕಡೆಯಿಂದ ವಿಶೇಷ ಜ್ಞಾನ ಬಂದಿತ್ತು.ಹಾಗಾಗಿಯೇ ನಬಿ ﷺ ರವರ ಉಮೈರ್ ಬಳಿ ಕೇಳಿದರು. ನೀವು ಮತ್ತು ಸಫ್ವಾನ್ ಕ‌ಅಬಾದ ಬಳಿ ಬದ್ರ್‌ನ ಬಗ್ಗೆ ಮಾತನಾಡಲಿಲ್ಲವೇ? ಸಾಲ ಮತ್ತು ಕೌಟುಂಭಿಕ ಬಾಧ್ಯತೆ ಇಲ್ಲದಿರುತ್ತಿದ್ದಲ್ಲಿ ಮದೀನಾಗೆ ಹೋಗಿ ಪ್ರವಾದಿ ಮುಹಮ್ಮದರ ತಲೆ ಕೊಯ್ಯುತ್ತಿದ್ದೆ,ಎಂದು ನೀವು ಹೇಳಿದ್ದೀರಲ್ಲವೇ.ಸಫ್ವಾನ್ ಜವಾಬ್ದಾರಿಗಳನ್ನೆಲ್ಲ ವಹಿಸಿ ನಿಮ್ಮನ್ನು ಈ ಕಡೆ ಕಳುಹಿಸಿದನಲ್ಲವೇ?
ಪ್ರವಾದಿ ﷺ ರವರು ಇಷ್ಟೊಂದು ನಿಖರವಾಗಿ ಕಾರ್ಯಗಳನ್ನು ಸ್ಪಷ್ಟವಾಗಿ ಹೇಳಿದಾಗ ಉಮೈರ್ ಆಶ್ಚರ್ಯಚಕಿತರಾದರು. ಏನಾಶ್ಚರ್ಯ!,ನಾನು ಮತ್ತು ಸಫ್ವಾನ್ ಅತೀವ ರಹಸ್ಯವಾಗಿ ಮಾಡಿದ ಸಂಭಾಷಣೆಯನ್ನು ಮೂರನೇ ವ್ಯಕ್ತಿ ಕೇಳಿಸಲಿಲ್ಲ ಮತ್ತು ತಿಳಿದಿರಲಿಲ್ಲ.ಇನ್ನು ಬೇರೆಯವರು ತಿಳಿದರೂ ಮಕ್ಕಾದಿಂದ ಮದೀನಾಗೆ ಬಂದು ಮಾಹಿತಿ ನೀಡುವಷ್ಟು ಸಮಯ ಇರಲಿಲ್ಲ.ಇದು ಹೇಗೆ ತಿಳಿಯಿತು?
ಉಮೈರ್ ಯೋಚಿಸುತ್ತಲೇ ಇದ್ದರು.

ನಿರಾಕರಿಸುವ ಎಲ್ಲಾ ದಾರಿಗಳು ಮುಚ್ಚಿದಾಗ,ಕೊನೆಗೆ ಉಮೈರ್ ಸತ್ಯವನ್ನು ಒಪ್ಪಿಕೊಳ್ಳಲು ನಿರ್ಭಂಧಿತರಾದರು.ಅವರು ಬಹಿರಂಗವಾಗಿ ಹೇಳಿದರು. ಮುಹಮದ್ ﷺ ಅಲ್ಲಾಹನ ದೂತರೆಂಬುದನ್ನು ನಾನು ಧೃಡೀಕರಿಸಿ ಅಂಗೀಕರಿಸುತ್ತೇನೆ. ಇಲ್ಲಿಯವರೆಗೆ ನಾನು ಆಕಾಶದ ವೃತ್ತಾಂತಗಳನ್ನು ನಿರಾಕರಿಸಿದ್ದೆ.ಆದರೆ ಸಫ್ವಾನ್ ಮತ್ತು ನಾನು ನಡೆಸಿದ ಸಂಭಾಷಣೆಯ ಬಗ್ಗೆ ಅಲ್ಲಾಹನು ತಮಗೆ ತಿಳಿಸದ ಹೊರತು ತಿಳಿಯಲು ಬೇರೆ ಮಾರ್ಗವಿಲ್ಲ ಎಂದು ನನಗೆ ಮನವರಿಕೆಯಾಗಿದೆ.ಉಮೈರ್ ಹೃದಯಬಿಚ್ಚಿ ಸತ್ಯ ಪ್ರಮಾಣವಾದ ಶಹಾದತ್ ಹೇಳಿ ಇಸ್ಲಾಮಿನಲ್ಲಿ ಸದಸ್ಯತ್ವ ಪಡೆದರು.ತಕ್ಷಣವೇ ಪ್ರವಾದಿ ﷺ ತಮ್ಮ ಅನುಚರರಿಗೆ ಹೇಳಿದರು: “ನಿಮ್ಮ ಸಹೋದರ ಉಮೈರ್‌ನಿಗೆ ಕುರಾನ್ ಹಾಗೂ ಧರ್ಮವನ್ನು ಕಲಿಸಿಕೊಡಿ ಮತ್ತು ಅವರು ಎಷ್ಟು ಬೇಡಿಕೆ ಇಡುತ್ತಾರೋ ಅಷ್ಟು ಯುದ್ದ ಖೈದಿಗಳನ್ನು ಬಿಡುಗಡೆ ಮಾಡಿರಿ”

ನಂತರ ಅವರು ಮಕ್ಕಾಗೆ ಹೋಗಿ ಇಸ್ಲಾಂ ಪ್ರಚಾರ ಮಾಡಲು ಪ್ರವಾದಿ ﷺ ರಿಂದ ಅನುಮತಿ ಕೇಳಿದರು.ನಾನು ಮೊದಲು ಇಸ್ಲಾಮಿನ ವಿರುದ್ಧ ಕಾರ್ಯಚರಿಸಿದ್ದಕ್ಕೆ ಬದಲಾಗಿ ಜನರನ್ನು
ಸತ್ಯದ ದಾರಿಗೆ ತರಲು ಕಾರ್ಯಚರಿಸುವೆನೆಂದು ಹೇಳಿ ಮಕ್ಕಾಗೆ ಬಂದು ದೀನೀ ಪ್ರಚಾರದಲ್ಲಿ ಮುಳುಗಿದರು.ಅವರ ಪುತ್ರ ವಹಬ್ ಸೇರಿದಂತೆ ಹಲವರು ಇಸ್ಲಾಂಗೆ ಮತಾಂತರಗೊಂಡರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ

 

 

Leave a Reply